Syrian Civil War: ಇಸ್ರೇಲ್ ವಶಕ್ಕೆ ಸಿರಿಯಾ ನೆಲ? ಏನಿದು ಹೊಸ ಲೆಕ್ಕಾಚಾರ?
ಸಿರಿಯಾ ನೆಲದಲ್ಲಿ ಮತ್ತೆ ರಕ್ತ ಕ್ರಾಂತಿ ಶುರುವಾಗಿದ್ದು, ಸಿರಿಯಾ ವಿರುದ್ಧ ದಂಗೆ ಎದ್ದಿರುವ ಜನರ ಸೇನೆ ಈಗ ರಾಜಧಾನಿ ಸಮೇತ ಹಲವು ಪ್ರಮುಖ ನಗರಗಳನ್ನ ತಮ್ಮ ವಶಕ್ಕೆ ಪಡೆದಿದೆ. ಅದರಲ್ಲೂ ಹೀಗೆ ದಂಗೆಕೋರರು ಅಟ್ಯಾಕ್ ಮಾಡಿದ ನಂತರ, ಸ್ವತಃ ಸಿರಿಯಾ ಅಧ್ಯಕ್ಷ ಆ ದೇಶ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಕಠಿಣವಾಗುತ್ತಿರುವ ಸಮಯಕ್ಕೇ ಮತ್ತಷ್ಟು ಸಂಚಲನ ಸೃಷ್ಟಿ ಮಾಡುವ ಸುದ್ದಿ ಇದೀಗ ಸಿಗುತ್ತಿದ್ದು, ಇಸ್ರೇಲ್ ವಶಕ್ಕೆ ಸಿರಿಯಾ ನೆಲ? ಎಂಬ ಪ್ರಶ್ನೆ ಮೂಡಿದೆ.
ಮಧ್ಯಪ್ರಾಚ್ಯ ಭಾಗದ ನೆಮ್ಮದಿ ಹಾಳಾಗಿ ಹೋಗಿದ್ದು, ಸಿರಿಯಾ ನೆಲದಲ್ಲಿ ಈಗ ಏನಾಗುತ್ತಿದೆ? ಎಂಬುದೇ ಗೊತ್ತಾಗುತ್ತಿಲ್ಲ. ಇದಕ್ಕೆಲ್ಲಾ ಕಾರಣ ಆಗಿರುವುದು ಸಿರಿಯಾ ನೆಲದಲ್ಲಿ ಶುರುವಾದ ದಂಗೆ. ಅಂದಹಾಗೆ, ನಾಗರಿಕ ಯುದ್ಧದ ಪರಿಣಾಮ ನಲುಗಿ ಹೋಗಿರುವ ಸಿರಿಯಾ ಇದೀಗ ಮತ್ತಷ್ಟು ಹೊತ್ತಿ ಉರಿಯುತ್ತಿದೆ. ಇದರ ಪರಿಣಾಮ ಈಗ ಸಿರಿಯಾ ಜನರು ನಲುಗಿ ಹೋಗಿ ದೇಶ ಬಿಟ್ಟು ಓಡಿ ಹೋಗಲು ಸಿದ್ಧರಾಗಿದ್ದಾರೆ. ಇಂತಹ ಸಮಯದಲ್ಲೇ ಇಸ್ರೇಲ್ ಕೂಡ ಭಾರಿ ಭರ್ಜರಿ ದಾಳಿ ಆರಂಭ ಮಾಡಿದೆ. ಯಾಕೆ ಗೊತ್ತಾ? ಮುಂದೆ ಓದಿ.

ಇಸ್ರೇಲ್ ಮಿಲಿಟರಿಯಿಂದ ಭರ್ಜರಿ ಅಟ್ಯಾಕ್!
ಸಿರಿಯಾ ಮೇಲೆ ದಿಢೀರ್ ಇಸ್ರೇಲ್ ಘೋರ ದಾಳಿ ಆರಂಭ ಮಾಡಿದೆ. ಯಾಕಂದ್ರೆ ಒಂದು ಕಡೆ ಸಿರಿಯಾ ಅಧ್ಯಕ್ಷ ಸ್ಥಾನ ಬಿಟ್ಟು & ದೇಶವನ್ನೇ ಬಿಟ್ಟು ಅಸ್ಸಾದ್ ಎಸ್ಕೇಪ್ ಆಗಿದ್ದು, ಹೀಗಿದ್ದಾಗ ದಂಗೆಕೋರರು ಸಿರಿಯಾ ರಾಜಧಾನಿಗೆ ನುಗ್ಗಿ ಅಧಿಕಾರ ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಈ ಸಮಯದಲ್ಲೇ ಇಸ್ರೇಲ್ ಕೂಡ ಎದ್ದು ಕೂತಿದ್ದು, ಸಿರಿಯಾ ನೆಲದ ಮೇಲೆ ದಾಳಿ ಮಾಡುತ್ತಾ ಸಿರಿಯಾ ನೆಲವನ್ನು ಇಸ್ರೇಲ್ ತನ್ನ ವಶಕ್ಕೆ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ. ಈ ಕಾರಣಕ್ಕೆ ಇದೀಗ ಜಾಗತಿಕ ಮಟ್ಟದಲ್ಲಿ ಮತ್ತೆ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ.
1974ರ ಕದನ ವಿರಾಮ ಒಪ್ಪಂದ ಉಲ್ಲಂಘನೆ?
ಗೋಲನ್ ಹೈಟ್ಸ್ ಎಂಬ ಪ್ರದೇಶ ಸಿರಿಯಾ ಸೇನೆಯ ಹಿಡಿತದಲ್ಲಿ ಇತ್ತು. ಇದೀಗ ಇಸ್ರೇಲ್ನ ಸೇನೆ ಈ ಭಾಗಕ್ಕೆ ನುಗ್ಗಿ 'ಗೋಲನ್ ಹೈಟ್ಸ್' ಪ್ರದೇಶವನ್ನು ತನ್ನ ವಶಕ್ಕೆ ಪಡೆದಿದೆ ಅಂತಾ ಮಾಹಿತಿ ಹರಿದಾಡುತ್ತಿದೆ. ಇದಿಷ್ಟೇ ಅಲ್ಲದೆ ಇನ್ನಷ್ಟು ಸಿರಿಯಾ ನಿಯಂತ್ರಿತ ಭಾಗಗಳು ಈಗ ಇಸ್ರೇಲ್ ಮಿಲಿಟರಿ ವಶಕ್ಕೆ ಸಿಗುತ್ತಿವೆ.
ಇದೀಗ ಈ ಭಾಗದಲ್ಲಿ ಭಾರಿ ಘೋರ ದಾಳಿ ನಡೆಯುವ ಆತಂಕ ಆವರಿಸಿದೆ. 1974ರ ಕದನ ವಿರಾಮ ಒಪ್ಪಂದದ ಪ್ರಕಾರ 'ಗೋಲನ್ ಹೈಟ್ಸ್' ಪ್ರದೇಶವನ್ನು ಬಫರ್ ಝೋನ್ ಎಂದು ಪರಿಗಣಿಸಲಾಗಿತ್ತು. ಆದರೆ, ಇದೀಗ ಈ ಪ್ರದೇಶಕ್ಕೆ ನುಗ್ಗಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶ ನೀಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
1967ರ ಯುದ್ಧದಲ್ಲಿ ಇಸ್ರೇಲ್ ಸೇನೆ....
ಅಂದಹಾಗೆ, 1967ರ ಯುದ್ಧದಲ್ಲಿ ಇಸ್ರೇಲ್ ಸೇನೆಯು 'ಗೋಲನ್ ಹೈಟ್ಸ್' ಪ್ರದೇಶದ ಒಂದು ಭಾಗವನ್ನು ತನ್ನ ವಶಕ್ಕೆ ಪಡೆದಿತ್ತು. ಈ ರೀತಿ, ಇಸ್ರೇಲ್ ನಡೆಸಿದ್ದ ದಾಳಿಯನ್ನು ಜಾಗತಿಕ ಸಮುದಾಯ ಅತಿಕ್ರಮ ಪ್ರವೇಶ ಎಂದು ಆರೋಪ ಮಾಡಿತ್ತು. ಆದರೆ ಇದೀಗ ಮತ್ತೊಮ್ಮೆ 'ಗೋಲನ್ ಹೈಟ್ಸ್' ಪ್ರದೇಶಕ್ಕೆ ನುಗ್ಗಿರುವ ಇಸ್ರೇಲ್, ಆ ಭಾಗವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆಯಲು ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications