Iran War Update: ಹತ್ಯೆಯಾದ ಖಮೇನಿ ಸ್ಥಾನಕ್ಕೆ ನೇಮಕಗೊಂಡ ಅಯತೊಲ್ಲಾ ಅಲಿರೆಜಾ ಅರಾಫಿ, ಯಾರಿವರು?
Ayatollah Alireza Arafi: ಇರಾನ್ ದೇಶದ ಟೆಹರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ಯನ್ನು ಹತ್ಯೆ ಮಾಡಲಾಯಿತು. ಅಲ್ಲದೇ ಇರಾನ್ ದೇಶದ ರಕ್ಷಣಾ ಸಚಿವರು, ಕಮಾಂಡರ್ ರನ್ನು ಹತ್ಯೆ ಮಾಡಲಾಗಿದೆ. ಯುದ್ಧದ ವೇಳೆ ಸರ್ವೋಚ್ಚ ನಾಯಕನ ಸಾವಿನಿಂದ ಕುಗ್ಗದ ಇರಾನ್ ಅವರ ಜಾಗಕ್ಕೆ ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ (Ayatollah Alireza Arafi) ಇರಾನ್ನ ಮಧ್ಯಂತರ ಸರ್ವೋಚ್ಚ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಹೊಸ ಸರ್ವೋಚ್ಚ ನಾಯಕರಾದ ಈ ಅರಾಫಿ ಯಾರಿವರು? ಅವರ ಒಂದಿಷ್ಟು ಮಾಹಿತಿ ಇಲ್ಲಿದೆ.
ಇರಾನ್ ನಲ್ಲಿನ ಈ ಬೆಳವಣಿಗೆಯಿಂದ ಅಯತೊಲ್ಲಾ ಅಲಿರೆಜಾ ಅರಾಫಿ ಅವರ ಮೇಲೆ ದೊಡ್ಡ ಜವಾಬ್ದಾರಿ ಬಿದ್ದಂತಾಗಿದೆ. ಅರಾಫಿಯವರು ಕೈಗೊಳ್ಳುವ ನಿರ್ಧಾರವು ಇರಾನ್ನ ಅಧಿಕಾರವು ದೇಶವು ದಾಳಿಯನ್ನು ತಡೆಯುವಲ್ಲಿ ಅಥವಾ ಸಮರ್ಥವಾಗಿ ಕಾರ್ಯ ನಿರ್ವಹಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ.

ಇರಾನ್ನ ಸಂವಿಧಾನದ ಅಡಿಯಲ್ಲಿ ಅರಾಫಿ ಅವರು ತಾತ್ಕಾಲಿಕವಾಗಿ ಸರ್ವೋಚ್ಚ ನಾಯಕನ ಕರ್ತವ್ಯಗಳನ್ನು ವಹಿಸಿಕೊಂಡಿದ್ದಾರೆ. ಮಧ್ಯಂತರ ನಾಯಕತ್ವ ಮಂಡಳಿಯ ನ್ಯಾಯಶಾಸ್ತ್ರಜ್ಞ ಸದಸ್ಯರು ಆಗಿರುವ ಅವರು, ಇರಾನ್ನ ಸ್ಥಾಪಿತ ಕಾರ್ಯವಿಧಾನದ ಮೂಲಕ ಔಪಚಾರಿಕ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೆ ಈ ಮಂಡಳಿಯ ಕಾರ್ಯ ನಿರ್ವಹಣೆ ಮಾಡುವ ಸಾಧ್ಯತೆ ಇದೆ.
ಅಯತೊಲ್ಲಾ ಅಲಿರೆಜಾ ಅರಾಫಿ ಅವರು ಈ ಹಿಂದೆ ಇರಾನ್ನ ಧಾರ್ಮಿಕ ಸೆಮಿನರಿಗಳ ಮುಖ್ಯಸ್ಥರಾಗಿದ್ದರು. ಕೋಮ್ನಲ್ಲಿ ಪ್ರಾರ್ಥನಾ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಅವರಿಗೆ 'ಅಧ್ಯಕ್ಷರು ಮತ್ತು ಮುಖ್ಯ ನ್ಯಾಯಾಧೀಶರೊಂದಿಗೆ ಸರ್ವೋಚ್ಚ ನಾಯಕನ ಜವಾಬ್ದಾರಿಗಳನ್ನು ತಾತ್ಕಾಲಿಕವಾಗಿ ವಹಿಸಿಕೊಳ್ಳುವಂತೆ ಎಕ್ಸ್ಪೆಡಿಯೆನ್ಸಿ ಡಿಸರ್ನ್ಮೆಂಟ್ ಕೌನ್ಸಿಲ್ ಸೂಚಿಸಿ ಆ ಸ್ಥಾನಕ್ಕೆ ನೇಮಕ ಮಾಡಿದೆ.
ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್ನ 86 ವರ್ಷದ ನಾಯಕ ಖಮೇನಿ ಮೃತಪಟ್ಟರು. 1989 ರಿಂದ ಇರಾನ್ ಅನ್ನು ಮುನ್ನಡೆಸುತ್ತಿದ್ದ ಖಮೇನಿ ಸಾವಿನಿಂದ ಇರಾನ್ ಮತ್ತಷ್ಟು ಕೋಪಗೊಂಡಂತಿದೆ. ಇತ್ತ ಜಂಟಿ ವೈಮಾನಿಕ ದಾಳಿಯು ಇರಾನ್ನ ರಕ್ಷಣಾ ಸಚಿವ ಅಮೀರ್ ನಾಸರ್ಜಾದೆ ಮತ್ತು ಕಮಾಂಡರ್-ಇನ್-ಚೀಫ್ ಮೊಹಮ್ಮದ್ ಪಕ್ಪೋರ್ ಅವರಿಗೆ ಸಂಬಂಧಿಸಿದ ಸ್ಥಳಗಳು ಸೇರಿದಂತೆ ಮಿಲಿಟರಿ ನೆಲೆಗಳು ಮುಂದುವರಿದಿದೆ. ತಮ್ಮ ನಾಯಕ ಸೇರಿ ಸಹಿತ ಕಳೆದುಕೊಂಡರು ಕುಗ್ಗದ ಇರಾನ್ ಪ್ರತಿದಾಳಿಯನ್ನು ನಡೆಸಿದೆ.
ಯುದ್ಧ ಬೆನ್ನಲ್ಲೆ ಇರಾನ್ ನಾಯಕತ್ವದಲ್ಲಿ ಪರಿವರ್ತನೆ
ರಚನೆಯಾಗಿರುವ ತಾತ್ಕಾಲಿಕ ಮಂಡಳಿಯು ಪ್ರಸ್ತುದಲ್ಲಿ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಮುಖ್ಯ ನ್ಯಾಯಮೂರ್ತಿ ಘೋಲಮ್-ಹೊಸೇನ್ ಮೊಹ್ಸೇನಿ-ಎಜೆಯಿ ಮತ್ತು ಗಾರ್ಡಿಯನ್ ಕೌನ್ಸಿಲ್ನ ಧರ್ಮಗುರುವನ್ನು ಒಳಗೊಂಡಿದೆ. ಖಮೇನಿಯವರ ಮರಣದ ನಂತರದ ಪರಿವರ್ತನೆಯ ಅವಧಿಯಲ್ಲಿ ಈ ಮೂವರು ವ್ಯಕ್ತಿಗಳು ಒಟ್ಟಾಗಿ ರಾಜ್ಯ ವ್ಯವಹಾರಗಳಿಗೆ ದಿಕ್ಕು ತೋರಿಸಲಿದ್ದಾರೆ.
ಖಮೇನಿ ಹತ್ಯೆ ಬಗ್ಗೆ ಅಮರಿಕಾ ಹೇಳಿದ್ದೇನು?
ಸಾಮಾಜಿಕ ಜಾಲತಾನ ಎಕ್ಸ್ ಖಾತೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದಾಳಿಯ ನಂತರ ಖಮೇನಿಯವರ ಮರಣವನ್ನು ಸಾರ್ವಜನಿಕವಾಗಿ ಘೋಷಿಸಿದರು. "ಇತಿಹಾಸದ ಅತ್ಯಂತ ದುಷ್ಟ ಜನರಲ್ಲಿ ಒಬ್ಬರಾದ ಖಮೇನಿ ನಿಧನರಾದರು' ಎಂದು ಅವರು ಶಿರ್ಷಿಕೆ ಬರೆದುಕೊಂಡು, ಖಮೇನಿ ಸಾವನ್ನು ಅಧಿಕೃತವಾಗಿ ಬಹಿರಂಗಗೊಳಿಸಿದರು.
ಅಷ್ಟೇ ಅಲ್ಲದೇ ಖಮೇನಿ ಸಾವು ಇರಾನ್ನ ಜನರಿಗೆ ಮಾತ್ರವಲ್ಲ, ಎಲ್ಲಾ ಮಹಾನ್ ಅಮೆರಿಕನ್ನರಿಗೆ ಮತ್ತು ಖಮೇನಿಯಂತಹ ರಕ್ತಪಿಪಾಸು ವ್ಯಕ್ತಿಗಳಿಂದ ಹತ್ಯೆಗೀಡಾದ ಇಲ್ಲವೇ ಅಂಗವಿಕಲಗೊಳಿಸದಾದ ವಿಶ್ವದ ಅನೇಕ ದೇಶದ ಜನರಿಗೆ ನ್ಯಾಯ ನೀಡಿದಂತಾಗಿದೆ. ಖಮೇನಿಯಿಂದ ತೊಂದರೆ ಅನುಭವಿಸದ ಎಲ್ಲ ಜನರಿಗೆ ಖಮೇನಿ ಸಾವು ನ್ಯಾಯವಾಗಿದೆ ಎಂದು ಅಮೆರಿಕಾ ತಿಳಿಸಿದೆ. ಆರಂಭದಲ್ಲಿ ಟ್ರಂಪ್ ಹೇಳಿಕೆ ಇರಾನ್ ತಿರಸ್ಕರಿಸಿತ್ತು. ಭಾನುವಾರ ಬೆಳಗ್ಗೆ ಖಮೇನಿ ಸಾವನ್ನು ಒಪ್ಪಿಗೆ ಮಾಹಿತಿಯನ್ನು ಜಗತ್ತಿಗೆ ನೀಡಿತು. ಈ ಬೆಳವಣಿಗೆಯು ಇರಾನ್ ಆಡಳಿತ, ನಾಯಕತ್ವ ಬದಲಾವಣೆಗೆ ಕಾರಣವಾಗಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications