ಇಸ್ರೇಲ್ ನಮ್ಮ ವಿರುದ್ಧ ಮತ್ತೆ ಯುದ್ಧ ಮಾಡಬಹುದು, ಮುಟ್ಟಿದ್ರೆ ತಟ್ಟಿ ಬಿಡ್ತೀವಿ ಅಂತು ಇರಾನ್! Iran And Israel
ಮುಗಿಯದ ಗೋಳು ಇದು ಅನಿಸುತ್ತೆ, ಅರೆರೆ ಯಾರ ಬಗ್ಗೆ ಅಂದ್ರಾ? ನಾವಿಲ್ಲಿ ಹೇಳ್ತಾ ಇರೋದು ಇರಾನ್ ಮತ್ತು ಇಸ್ರೇಲ್ ಯುದ್ಧದ ಬಗ್ಗೆ. ಯಾಕಂದ್ರೆ ಇಬ್ಬರ ಮಧ್ಯೆ ಯುದ್ಧ ನಿಂತು ಕದನ ವಿರಾಮ ಘೋಷಣೆ ಮಾಡಿ ಇನ್ನೂ ಕೆಲವೇ ಕೆಲವು ದಿನಗಳು ಕಳೆದಿವೆ ಅಷ್ಟೇ. ಆದರೆ ಈಗಾಗಲೇ ಇಬ್ಬರೂ ಮತ್ತೊಂದು ರೌಂಡ್ ಫೈಟಿಂಗ್ ಮಾಡಲು ಸಜ್ಜಾಗಿದ್ದಾರೆ ಅಂತಾ ಕಾಣುತ್ತದೆ. ಯಾಕಂದ್ರೆ ಒಂದು ಕಡೆ ಇರಾನ್ ಸೇನೆಯನ್ನು, ಇರಾನ್ ನಾಯಕರನ್ನು ಕೆಣಕುವ ರೀತಿ ಇಸ್ರೇಲ್ ಹೇಳಿಕೆ ನೀಡುತ್ತಿದೆ. ಇದೇ ಸಮಯದಲ್ಲಿ ಇರಾನ್ ಏನು ಹೇಳಿದೆ ಗೊತ್ತಾ?
ಇಸ್ರೇಲ್ ಮೇಲೆ ಭೀಕರವಾಗಿ ಕ್ಷಿಪಣಿ ದಾಳಿ ಮಾಡಿ, ಟೆಲ್ ಅವಿವ್ ಸೇರಿದಂತೆ ಹಲವು ಪ್ರಮುಖ ನಗರದ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿತ್ತು. ಈ ಯುದ್ಧ ನೋಡ ನೋಡುತ್ತಲೇ ದೊಡ್ಡದಾಗಿ ಪರಮಾಣು ಬಾಂಬ್ ಕೂಡ ಬಳಕೆ ಆಗುತ್ತಾ? ಅನ್ನೋ ಭಯ ಆವರಿಸಿತ್ತು. ಹೀಗೆ ಎಲ್ಲಾ ಕಡೆಯಿಂದಲೂ ಆತಂಕ ಎದುರಾಗಿ, ಎಲ್ಲರೂ ಚಿಂತೆ ಮಾಡುವ ಸಮಯದಲ್ಲೇ ಅಮೆರಿಕ ಕೂಡ ಮಧ್ಯಪ್ರವೇಶ ಮಾಡಿ ಇರಾನ್ ವಿರುದ್ಧ ದಾಳಿ ಮಾಡಿತ್ತು. ಆದರೆ ಕೊನೆಗೆ ಇರಾನ್ ಜೊತೆಗೆ ಸಂಧಾನ ಮಾಡಿಕೊಂಡು ಇಸ್ರೇಲ್ ಮತ್ತು ಅಮೆರಿಕ ಸುಮ್ಮನೆ ಆಗಿದ್ದವು. ಅಲ್ಲದೆ ಮತ್ತೊಮ್ಮೆ ಜಗಳ ಮಾಡಬೇಡಿ ಅಂತಾ ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಇಸ್ರೇಲ್ ಬಳಿ ಮನವಿ ಮಾಡಿದ್ದರು. ಆದರೆ ಈಗ ಬೇರೆಯದ್ದೇ ಸುದ್ದಿ ಶುರುವಾಗಿದೆ!

ಇರಾನ್ & ಇಸ್ರೇಲ್ ವಾರ್ ಮತ್ತೆ ಶುರು?
ಹೌದು, ಯಾವುದೇ ಸಮಯದಲ್ಲಿ ನಮ್ಮ ವಿರುದ್ಧ ಇಸ್ರೇಲ್ ದಾಳಿ ಮಾಡಬಹುದು. ಹೀಗಾಗಿ ನಾವು ಈ ಬಗ್ಗೆ ಅಲರ್ಟ್ ಆಗಿದ್ದೇವೆ ಅಂತಾ ಇರಾನ್ ಹೇಳಿದೆ. ಅಲ್ಲದೆ ನಮಗೆ ಇಸ್ರೇಲ್ ತೊಂದರೆ ಮಾಡಿದರೆ ಆ ಕ್ಷಣವೇ ನಾವು ಕೂಡ ಡೆಡ್ಲಿ ಅಟ್ಯಾಕ್ ಮಾಡ್ತೀವಿ ಅಂತಾ ಹೇಳಿದೆ ಇರಾನ್. ಈ ಮೂಲಕ ಮತ್ತೊಮ್ಮೆ, ಮಧ್ಯಪ್ರಾಚ್ಯ ನೆಲದಲ್ಲಿ ಬೆಂಕಿಯ ಕಿಡಿ ಹೊತ್ತಿಕೊಳ್ಳುವ ಮುನ್ಸೂಚನೆ ಸಿಕ್ಕಿದೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಲೆಬಿಸಿ ಕೂಡ ಹೆಚ್ಚಾಗುವಂತೆ ಮಾಡಿದೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications