ಟೈಮ್ ಡಿಸ್ಕವರಿ: ಮಂಗಳಯಾನ ಶ್ರೇಷ್ಠ ಸಾಧನೆ
ನ್ಯೂಯಾರ್ಕ್, ನ.21: ಟೈಮ್ ನಿಯತಕಾಲಿಕೆ 2014ನೇ ಸಾಲಿನ ಅತ್ಯುತ್ತಮ ಆವಿಷ್ಕಾರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದ ಮಂಗಳಯಾನ ಯೋಜನೆಯನ್ನು ಶ್ರೇಷ್ಠ ಸಾಧನೆ ಎಂದು ಬಣ್ಣಿಸಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ ಹಿರಿಮೆ ಭಾರತದ ಇಸ್ರೋ ವಿಜ್ಞಾನಿಗಳಿಗೆ ಸಲ್ಲುತ್ತದೆ.
ಮಂಗಳಯಾನ ಯೋಜನೆ ಮೊದಲ ಬಾರಿಗೆ ಅನೇಕ ದೇಶಗಳು ವಿಫಲವಾಗಿದದ್ವು, ಅಮೆರಿಕ, ರಷ್ಯಾ ಅಥವಾ ಯೂರೋಪಿನ ಒಕ್ಕೂಟಕ್ಕಾಗಲಿ ಮಂಗಳಯಾನ ಮೊದಲ ಯತ್ನದಲ್ಲಿ ಫಲ ನೀಡಿರಲಿಲ್ಲ. ಸೆಪ್ಟಂಬರ್ 24 ರಂದು ಭಾರತ ಇದನ್ನು ಸಾಧಿಸಿ ಕೆಂಪು ಗ್ರಹದ ಸುತ್ತಾಟ ಆರಂಭಿಸಿದೆ. ಬೇರೆ ಯಾವ ಏಷ್ಯಾ ದೇಶವೂ ಮಾಡದ ಬಾಹ್ಯಾಕಾಶ ತಂತ್ರಜ್ಞಾನ ಸಾಧನೆ ಇದಾಗಿದೆ ಎಂದು ಹೇಳಿರುವ ಟೈಮ್ಸ್ ಪತ್ರಿಕೆ ಅದನ್ನು 'The Super smart Spacecraft. ಎಂದು ಹೊಗಳಿದೆ.

ವಿಶ್ವವನ್ನು ಉತ್ತಮ ಪಡಿಸುವಲ್ಲಿ, ಹೆಚ್ಚು ಚುರುಕಾಗಿಸುವಲ್ಲಿ ಹಾಗು ಕೆಲವು ಬಾರಿ ಹೆಚ್ಚು ಸಂತಸಮಯವಾಗಿಸಲು ಕಾರಣವಾದ 25 ಹೊಸ ಆವಿಷ್ಕಾರಗಳ 2014ನೇ ಸಾಲಿನ ಪಟ್ಟಿಯಲ್ಲಿ ಮಂಗಳಯಾನವೂ ಸ್ಥಾನ ಪಡೆದಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಿದ್ಧಪಡಿಸಿರುವ ಮಾರ್ಸ್ ಬಾಹ್ಯಾಕಾಶ ನೌಕೆ(MOM) ಖರ್ಚು ವೆಚ್ಚ 74 ದಶಲಕ್ಷ ಯುಎಸ್ ಡಾಲರ್. ಇದು ಹಾಲಿವುಡ್ ಸಿನೆಮಾ ಗ್ರಾವಿಟಿ ಬಜೆಟ್ ಗಿಂತಲೂ ಕಡಿಮೆ ಎಂಬುದು ಯೋಜನೆಯ ಹಿರಿಮೆ. [ಮಂಗಳಲೋಕಕ್ಕೆ ಮಂಗಳಯಾನ; ನಡೆದುಬಂದ ದಾರಿ!]
ಈ ಪಟ್ಟಿಯಲ್ಲಿ ಭಾರತೀಯರ ಇನ್ನೆರಡು ಆವಿಷ್ಕಾರಗಳೂ ಸ್ಥಾನ ಪಡೆದಿವೆ. ಜೈಲು ಖೈದಿಗಳಿಗೆ ವ್ಯಾಯಾಮ ಪ್ರದೇಶವನ್ನು ಸಿದ್ಧಪಡಿಸಿರುವ ಮತ್ತು ಮಕ್ಕಳಿಗಾಗ ಸಿದ್ಧಪಡಿಸಿರುವ ಟ್ಯಾಬ್ಲೆಟ್ ಆಟಿಕೆ ಆ ಎರಡು ಆವಿಷ್ಕಾರಗಳು.
ದಿನದ 23 ಘಂಟೆಗಳನ್ನು ಗೋಡೆಗಳ ನಡುವೆಯೇ ಕಳೆಯುವ ಜೈಲುವಾಸಿಗಳು ಸಾಮಾನ್ಯವಾಗಿ ಮಾನಸಿಕ ರೋಗಗಳನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಹಿಂಸೆ, ಆತ್ಮಹತ್ಯೆಯ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವುದರಿಂದ, ಅವರು ವಿಶ್ರಮಿಸಲು ಆರೆಗಾನ್ ನ ಸ್ನೇಕ್ ರಿವರ್ ಕರಕ್ಷನಲ್ ಸಂಸ್ಥೆಯ ಸಹಯೋಗದೊಂದಿಗೆ ಪರಿಸರವಾದಿ ನಳಿನಿ ನಾಡಕರ್ಣಿ ಅವರು "Blue Room" ಯ ಯೋಜನೆಯಡಿ ಪ್ರೊಜೆಕ್ಟರ್ ಬಳಸಿ ಖೈದಿಗಳಿಗೆ ಮರಳುಗಾಡಿನ, ಜಲಪಾತಗಳ ಮತ್ತು ಹೊರಾಂಗಣ ದೃಶ್ಯಗಳ ದೃಶ್ಯಾವಳಿಯನ್ನು ತೋರಿಸಲಾಗುತ್ತದೆ.
ಗೂಗಲ್ ಸಂಸ್ಥೆಯ ಮಾಜಿ ಇಂಜಿನಿಯರ್ ಪ್ರಮೋದ್ ಶರ್ಮಾ ಸಿದ್ಧಪಡಿಸಿರುವ "ಆಸ್ಮೋ" ಟ್ಯಾಬ್ಲೆಟ್ ಆಟಿಕೆ ಕೂಡ ಸ್ಥಾನ ಪಡೆದಿದೆ. ಶರ್ಮ ಅವರ ತಮ್ಮ ಮಗಳು ಐಪ್ಯಾಡ್ ನಲ್ಲಿ ಆಟವಾಡುವಾಗ Osmo ಬಗ್ಗೆ ಐಡಿಯಾ ಬಂತು ಎಂದು ಹೇಳಿದ್ದಾರೆ. ಉಳಿದಂತೆ ಆಪಲ್ ಸ್ಮಾರ್ಟ್ ವಾಚ್, ಮೈಕ್ರೋ ಸಾಫ್ಟ್ ಸರ್ಫೇಸ್ ಪ್ರೋ 3 ಕೂಡಾ ಸ್ಥಾನ ಪಡೆದಿವೆ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications