ಇ ಮೇಲ್ ಪ್ರಕರಣದಲ್ಲಿ ಹಿಲರಿ ಕ್ಲಿಂಟನ್ ಗೆ ನಿರಾಳ
ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಎರಡು ದಿನ ಇರುವಂತೆ ಈ ಮಾಹಿತಿ ಬಂದಿದೆ. ಹಿಲರಿ ಕ್ಲಿಂಟನ್ ಮೇಲೆ ಇದ್ದ ಅನುಮಾನದ ಕಾರ್ಮೋಡ ಸರಿದಂತಾಗಿದೆ.
ವಾಷಿಂಗ್ಟನ್, ನವೆಂಬರ್ 7: ಇ ಮೇಲ್ ಹಗರಣದ ಆರೋಪದಲ್ಲಿ ಯಾವುದೇ ಸಾಕ್ಷಿಗಳಿಲ್ಲ ಎನ್ನುವ ಮೂಲಕ ಹಿಲರಿ ಕ್ಲಿಂಟನ್ ಗೆ ನಿರಾಳವಾದಂತಾಗಿದೆ. ಎಫ್ ಬಿಐ ನಿರ್ದೇಶಕ ಜೇಮ್ಸ್ ಬಿ. ಕಾಮೆ. ಭಾನುವಾರ ಈ ಬಗ್ಗೆ ಹೇಳಿರುವ ಅವರು, ಹಿಲರಿ ಕ್ಲಿಂಟನ್ ಖಾಸಗಿ ಇ ಮೇಲ್ ಮೂಲಕ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ಅಂತಿಮ ತೀರ್ಮಾನಕ್ಕೆ ಬಂದಿದ್ದು, ಆಕೆ ವಿರುದ್ಧದ ಆರೋಪದಿಂದ ಮುಕ್ತಗೊಳಿಸಲಾಗಿದೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಎರಡು ದಿನ ಇರುವಂತೆ ಈ ಮಾಹಿತಿ ಬಂದಿದೆ. ಹಿಲರಿ ಕ್ಲಿಂಟನ್ ಮೇಲೆ ಇದ್ದ ಅನುಮಾನದ ಕಾರ್ಮೋಡ ಸರಿದಂತಾಗಿದೆ. ಕಳೆದ ತಿಂಗಳು ಚುನಾವಣೆ ಪ್ರಚಾರದ ವೇಳೆಯೇ ಇ ಮೇಲ್ ಪ್ರಕರಣ ಚರ್ಚೆಯ ವಸ್ತುವಾಗಿತ್ತು. ಅಮೆರಿಕಾದ ತನಿಖಾ ಸಂಸ್ಥೆ ಎಫ್ ಬಿಐ ಇ ಮೇಲ್ ಗಳ ಪರಿಶೀಲನೆ ನಡೆಸುತ್ತದೆ ಎಂದು ಹೇಳಲಾಗಿತ್ತು.[ಟ್ರಂಪ್ ಗಿಂತ 4 ಪಾಯಿಂಟ್ ಮುಂದಿದ್ದಾರೆ ಹಿಲರಿ ಕ್ಲಿಂಟನ್]

ಎಫ್ ಬಿಐಗೆ ಹೊಸ ಹಿಲರಿ ಕ್ಲಿಂಟನ್ ಅವರ ಹೊಸ ಇ ಮೇಲ್ ಗಳು ಸಿಕ್ಕಿವೆ ಎಂಬ ಮಾಹಿತಿ ಹೊರಬಿದ್ದ ಹಾಗೆ ಸಂಚಲನಕ್ಕೆ ಕಾರಣವಾಗಿತ್ತು ಹಾಗೂ ಈ ಸಂದರ್ಭದಲ್ಲಿ ಮತ್ತೆ ಆ ವಿಷಯ ಕೆದಕಿದ್ದಕ್ಕೆ ವ್ಯಾಪಕ ವಿರೋಧವೂ ಕೇಳಿಬಂದಿತ್ತು. ಹಿಲರಿ ತಮ್ಮ ಖಾಸಗಿ ಇ ಮೇಲ್ ನಿಂದ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ ಎಂಬುದು ಆರೋಪವಾಗಿತ್ತು.[ಖಾಸಗಿ ಇ-ಮೇಲ್ ಬಳಕೆ: ಎಫ್ ಬಿಐ ತನಿಖೆಗೆ ಹಿಲರಿ ಆಕ್ಷೇಪ]
ಈ ಬಗ್ಗೆ ಜುಲೈನಲ್ಲೇ ಕ್ಲೀನ್ ಚಿಟ್ ಪಡೆದಿದ್ದರು ಹಿಲರಿ. ಅದರೆ, ಅಮೆರಿಕಾ ಅಧ್ಯಕ್ಷೀಯ ಚುನಾವಣೆ ವೇಳೆ ಹಗರಣ ಮರುಜೀವ ಪಡೆದಿತ್ತು. ಆ ಬಗ್ಗೆ ಹೇಳಿರುವ ಕಾಮೆ, ಜುಲೈನಲ್ಲಿ ನಾವು ತಿಳಿಸಿದ್ದ ವಿಚಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications