ಯುದ್ಧವೊಂದೇ ಪರಿಹಾರವಲ್ಲ, ಮಾತಿನಿಂದಲೂ ಬಗೆಹರಿಸಿಕೊಳ್ಳಬಹುದು: ಹಮೀದ್ ಕರ್ಜೈ
ಕಾಬೂಲ್, ಸೆಪ್ಟೆಂಬರ್ 03: ಯುದ್ಧವೊಂದೇ ಪರಿಹಾರವಲ್ಲ, ಮಾತಿನಿಂದಲೂ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಅಫ್ಘಾನಿಸ್ತಾನ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಹೇಳಿದ್ದಾರೆ.
ತಾಲಿಬಾನ್ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದೆ ಹಾಗೆಯೇ ಈಗ ಬಾಕಿ ಉಳಿದಿರುವ ಪಂಜ್ಶೀರ್ನ್ನು ವಶಕ್ಕೆ ಪಡೆಯಲು ಪ್ರಯತ್ನ ನಡೆಸುತ್ತಿದೆ. ಯುದ್ಧದ ವಾತಾವರಣ ನಿರ್ಮಾಣವಾಗಿದೆ.
ಈ ಕುರಿತು ಹಮೀದ್ ಮಾತನಾಡಿ, ಯುದ್ಧವೊಂದೇ ಎಲ್ಲದಕ್ಕು ಪರಿಹಾರವಲ್ಲ, ಮಾತಿನ ಮೂಲಕವೂ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದ ಇಬ್ಬರು ಪ್ರಮುಖ ನಾಯಕರಾದ, ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಮತ್ತು ಅಬ್ದುಲ್ಲಾ ಅಬ್ದುಲ್ಲಾ ಅವರನ್ನು ತಾಲಿಬಾನ್ಗಳು ಗೃಹಬಂಧನದಲ್ಲಿ ಇಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಕಳೆದ ವಾರ, ತಾಲಿಬಾನ್ ಪ್ರತಿನಿಧಿಗಳು ಕರ್ಜೈ ಮತ್ತು ಅಬ್ದುಲ್ಲಾ ಅವರೊಂದಿಗೆ ಸಭೆ ನಡೆಸಿದ್ದು, ಇದನ್ನು ಒಳಗೊಳ್ಳುವ ಸರ್ಕಾರವನ್ನು ರಚಿಸುವ ಆಡಳಿತದ ಪ್ರಯತ್ನದ ಒಂದು ಭಾಗವೆಂದು ಹೇಳಲಾಗಿದೆ.ಈಗ ಇಬ್ಬರು ನಾಯಕರ ಕಾರುಗಳನ್ನು ಸಹ ತಾಲಿಬಾನ್ ವಶಕ್ಕೆ ತೆಗೆದುಕೊಂಡಿದೆ.ಹೆಚ್ಚುವರಿಯಾಗಿ, ಅಬ್ದುಲ್ಲಾ ಅವರ ಮನೆಯನ್ನು ಉಗ್ರರು ಶೋಧಿಸಿದ್ದಾರೆ ಎನ್ನಲಾಗಿದೆ.
ಆಗಸ್ಟ್ 15 ರಂದು ಅಫ್ಘಾನ್ ರಾಜಧಾನಿಯನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಕರ್ಜೈ ಮತ್ತು ಅಬ್ದುಲ್ಲಾ ಇಬ್ಬರೂ ಕಾಬೂಲ್ನಲ್ಲಿ ಉಳಿದುಕೊಂಡರು.ಕಾಬೂಲ್ ಪತನವು ಆಗಿನ ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಹಲವಾರು ಉನ್ನತ ಅಧಿಕಾರಿಗಳ ನಿರ್ಗಮನಕ್ಕೆ ಕಾರಣವಾಯಿತು.
ಘನಿಯ ಮೊದಲ ಉಪಾಧ್ಯಕ್ಷರಾಗಿದ್ದ ಮತ್ತು ಪ್ರಸ್ತುತ ಪಂಜ್ಶಿರ್ ಕಣಿವೆಯಲ್ಲಿದ್ದ ಅಮರುಲ್ಲಾ ಸಲೇಹ್ ಅವರು ಅಫ್ಘಾನಿಸ್ತಾನದ ಸಂವಿಧಾನದ ಅಡಿಯಲ್ಲಿ ಉಸ್ತುವಾರಿ ಅಧ್ಯಕ್ಷರಾಗಿ ಘೋಷಿಸಿಕೊಂಡಿದ್ದಾರೆ.
ತಾಲಿಬಾನ್ ಮೊದಲ ಬಾರಿಗೆ ಆಫ್ಘಾನಿಸ್ತಾನದಲ್ಲಿ 1996 ರಲ್ಲಿ ಅಧಿಕಾರಕ್ಕೆ ಬಂದಿತು.ಅವರ ಆಡಳಿತವು 2001 ರಲ್ಲಿ ಕೊನೆಗೊಂಡಿತು, 9/11 ದಾಳಿಯ ಹಿನ್ನೆಲೆಯಲ್ಲಿ ಯುಎಸ್ ನೇತೃತ್ವದ ಅಂತರಾಷ್ಟ್ರೀಯ ಪಡೆಗಳು ಇಲ್ಲಿಗೆ ಆಗಮಿಸಿದವು.
ತರ್ಬಾನ್ ನಂತರದ ಯುಗದಲ್ಲಿ ಕರ್ಜಾಯ್ ಅಫ್ಘಾನಿಸ್ತಾನದ ಮೊದಲ ಅಧ್ಯಕ್ಷರಾದರು, ಮತ್ತು 2014 ರವರೆಗೆ ಘನಿ ಅಧಿಕಾರ ವಹಿಸಿಕೊಂಡರು.2019 ರಲ್ಲಿ ಅಬ್ದುಲ್ಲಾ ಅವರನ್ನು ಸೋಲಿಸಿ ಘನಿ ಮರು ಆಯ್ಕೆಯಾದರು.
ಪಂಜ್ಶೀರ್ ಎನ್ನುವುದು ಕಣಿವೆಗಳಿಂದ ಕೂಡಿರುವ ಪ್ರದೇಶ, ಇದೇ ಕಣಿವೆಗಳೇ ಇಂದು ಪಂಜ್ಶೀರ್ ಜನರ ಶಕ್ತಿಯಾಗಿದೆ. ತಾಲಿಬಾನ್ ಉಗ್ರರ ವಿರುದ್ಧ ಹೋರಾಡಲು ಕೋಟೆಯಾಗಿಬಿಟ್ಟಿದೆ. ಹೌದು, ಪಂಜ್ಶೀರ್ ಸೈನಿಕರು ಅಂದರೆ ಇಂದಿನ ಉತ್ತರ ಮೈತ್ರಿ ಪಡೆಯ ಸೈನಿಕರು ಇದೆ ಕಣಿವೆಗಳ ಆಯಕಟ್ಟಿನ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಶಸ್ತ್ರಾಸ್ತ್ರಗಳನ್ನು ಹಿಡಿದು ನಿಂತಿರುತ್ತಾರೆ.
ಸುಮಾರು 12 ಸಾವಿರಕ್ಕೂ ಹೆಚ್ಚಿನ ಸೈನಿಕರು ಕಣಿವೆಯಲ್ಲಿದ್ದಾರೆ, ಅವರಿಗೆ ಪಂಜ್ಶೀರ್ ಪ್ರದೇಶದ ಸ್ಥಳೀಯ ಯುವಕರು ಸಾಥ್ ನೀಡುತ್ತಿದ್ದಾರೆ. ಶತ್ರುಗಳು ಅಂದರೆ, ತಾಲಿಬಾನ್ ಉಗ್ರರು ಒಳನುಗ್ಗುತ್ತಲೇ ಗೆರಿಲ್ಲಾ ಮಾದರಿಯಲ್ಲಿ ದಾಳಿ ನಡೆಸಿಬಿಡುತ್ತಾರೆ.












Click it and Unblock the Notifications