Guillain-Barre Syndrome: ಅಪರೂಪದ ಕಾಯಿಲೆಗೆ ಬೆಚ್ಚಿ ಬಿದ್ದ ಪೆರು, ತುರ್ತುಸ್ಥಿತಿ ಘೋಷಣೆ
ಲಿಮಾ, ಜುಲೈ. 11: ಪೇರು ದೇಶದಲ್ಲಿ ಅಪರೂಪದ ನರವೈಜ್ಞಾನಿಕ ಅಸ್ವಸ್ಥತೆಯಾದ ಗ್ವಿಲೆನ್-ಬಾರ್ರೆ ಸಿಂಡ್ರೋಮ್ ಸೋಂಕಿತ ಪ್ರಕರಣಗಳಲ್ಲಿ ಹೆಚ್ಚಳವಾಗಿವೆ. ಈ ಕಾರಣದಿಂದ ಪೆರುವಿಯನ್ ಸರ್ಕಾರವು ರಾಷ್ಟ್ರವ್ಯಾಪಿ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ. ದೇಶದ ಆರೋಗ್ಯ ಸಚಿವಾಲಯ ಏಕಾಏಕಿ 90 ದಿನಗಳ ಅವಧಿಗೆ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಪೆರುವಿನಲ್ಲಿ ಈ ಗ್ವಿಲೆನ್-ಬಾರ್ರೆ ಸಿಂಡ್ರೋಮ್ ಪ್ರಕರಣಗಳಲ್ಲಿ "ಅಸಾಮಾನ್ಯ ಹೆಚ್ಚಳ" ವನ್ನು ಅಧಿಕಾರಿಗಳು ಗಮನಿಸಿದ್ದು, ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೂನ್ 2023 ರಿಂದ, ಪೆರುವಿನಲ್ಲಿ ರಾಷ್ಟ್ರವ್ಯಾಪಿ 182 ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 147 ಕೇಸ್ಗಳು ಡಿಸ್ಚಾರ್ಜ್ ಆಗಿವೆ. 31 ಮಂದಿ ಆಸ್ಪತ್ರೆಯಲ್ಲಿ ಉಳಿದಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು MercoPress ಸುದ್ದಿ ಸಂಸ್ಥೆ ತಿಳಿಸಿದೆ.

ಗ್ವಿಲೆನ್-ಬಾರ್ರೆ ಸಿಂಡ್ರೋಮ್ ಎಂದರೇನು?
Guillain-Barré ಸಿಂಡ್ರೋಮ್ ಅಪರೂಪದ ಅಸ್ವಸ್ಥತೆಯಾಗಿದ್ದು, ಇದರಲ್ಲಿ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು (ಇಮ್ಯೂನ್ ಸಿಸ್ಟಮ್) ದೇಹದ ನರಗಳ ಮೇಲೆ ದಾಳಿ ಮಾಡುತ್ತದೆ. ಇದು ಗಂಭೀರವಾದ ಸ್ಥಿತಿಯಾಗಿದ್ದು, ತಕ್ಷಣದ ಆಸ್ಪತ್ರೆಗೆ ದಾಖಲಾಗಿವ ಅಗತ್ಯವಿರುತ್ತದೆ. ಏಕೆಂದರೆ ಪ್ರತಿರಕ್ಷಣಾ ವ್ಯವಸ್ಥೆಯ ದಾಲಿಯಾದ ಕಾರಣ ರೋಗಿಯ ಸ್ಥಿತಿಯನ್ನು ತ್ವರಿತವಾಗಿ ಹದಗೆಡಿಸುತ್ತದೆ.
ಪ್ರಕರಣಗಳಲ್ಲಿ ದಿಢೀರ್ ಏರಿಕೆ ಏಕೆ?
ಈ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಲು "ಇಮ್ಯುನೊಗ್ಲಾಬ್ಯುಲಿನ್ ಕೊರತೆ" (ಪ್ರತಿಕಾಯಗಳು) ಕಾರಣ ಎಂದು ಪೆರುವಿನ ಆರೋಗ್ಯ ಸಚಿವ ಸೀಸರ್ ವಾಸ್ಕ್ವೆಜ್ ಹೇಳಿದ್ದಾರೆ. ಅವರ ಮನವಿ ಮೇರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ.
Guillain-Barre ಸಿಂಡ್ರೋಮ್ಗೆ ನಿಖರವಾದ ಕಾರಣವು ಪ್ರಸ್ತುತ ತಿಳಿದಿಲ್ಲ. ಆದರೆ, ಈ ಸ್ಥಿತಿಯನ್ನು ಹೊಂದಿರುವ ಮೂರನೇ ಎರಡರಷ್ಟು ರೋಗಿಗಳು ಹಿಂದಿನ ಆರು ವಾರಗಳಲ್ಲಿ ಸೋಂಕಿನ ಲಕ್ಷಣಗಳನ್ನು ವರದಿ ಮಾಡಿದ್ದಾರೆ. ಈ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕುಗಳು COVID-19, ಉಸಿರಾಟದ ಸೋಂಕು, ಜಠರಗರುಳಿನ ಸೋಂಕು, ಅಥವಾ ಝೀಕಾ ವೈರಸ್ ಅನ್ನು ಒಳಗೊಂಡಿವೆ.

ಪೆರುವಿನಲ್ಲಿ ಸ್ಥಿತಿಗೆ ಚಿಕಿತ್ಸೆ ನೀಡುವ ಕ್ರಮಗಳು
ಸಾಮಾನ್ಯವಾಗಿ, ಗ್ವಿಲಿನ್ ಬ್ಯಾರೆ ಸಿಂಡ್ರೋಮ್ಗೆ ಯಾವುದೇ ಚಿಕಿತ್ಸಾ ವಿಧಾನವಿಲ್ಲ. ಇನ್ನೂ, ಚಿಕಿತ್ಸೆಯು ರೋಗಲಕ್ಷಣಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ. ಅನಾರೋಗ್ಯದ ತೀವ್ರತೆ ಮತ್ತು ಅವಧಿಯನ್ನು ಕಡಿಮೆ ಮಾಡುತ್ತದೆ.
ರೋಗದ ಲಕ್ಷಣಗಳು
ಆರೋಗ್ಯ ತಜ್ಞರ ಪ್ರಕಾರ, ಗ್ವಿಲೆನ್-ಬಾರ್ರೆ ಸಿಂಡ್ರೋಮ್ನ ಮೊದಲ ಲಕ್ಷಣಗಳು ಸ್ನಾಯುಗಳಲ್ಲಿನ ದೌರ್ಬಲ್ಯ ಮತ್ತು ನಿಮ್ಮ ಕೈ ಮತ್ತು ಪಾದಗಳಲ್ಲಿ ಜುಮ್ಮೆನಿಸುವಿಕೆ. ಈ ಸ್ಥಿತಿಯಿಂದ ನಮ್ಮ ನರಗಳು, ಬೆನ್ನುಹುರಿ ಮತ್ತು ಮೆದುಳಿಗೆ ಸ್ಪರ್ಶ ಸಂವೇದನೆಗಳಂತಹ ಕೆಲವು ಮಾಹಿತಿಯನ್ನು ಕಳುಹಿಸುವುದನ್ನು ತಡೆಯುತ್ತದೆ. ಇದರಿಂದ ದೇಹವು ಮರಗಟ್ಟುವಿಕೆಯಂತಾಗುತ್ತದೆ. ಮೆದುಳು ಮತ್ತು ಬೆನ್ನುಹುರಿ ದೇಹಕ್ಕೆ ಯಾವುದೇ ಸಂಕೇತಗಳನ್ನು ರವಾನಿಸುವುದಿಲ್ಲ, ಇದು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗಬಹುದು.
ಇತರ ರೋಗಲಕ್ಷಣಗಳೆಂದರೇ, ಮಾತನಾಡುವಲ್ಲಿ ತೊಂದರೆ, ಅಗಿಯಲು ಅಥವಾ ನುಂಗಲು ಆಗದಿರುವುದು, ತ್ವರಿತ ಹೃದಯ ಬಡಿತ, ಕಡಿಮೆ ಅಥವಾ ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆ ಕಾಣಿಸುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ ಜನರು ಪಾರ್ಶ್ವವಾಯುವಿಗೆ ಒಳಗಾಗಬಹುದು ಅಥವಾ ತಕ್ಷಣವೇ ಮೃತಪಡಬಹುದು.

ಚೇತರಿಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
ಆರೋಗ್ಯ ತಜ್ಞರ ಪ್ರಕಾರ ಹೆಚ್ಚಿನ ರೋಗಿಗಳು 2-3 ವಾರಗಳಲ್ಲಿ ಚೇತರಿಕೆಯ ಲಕ್ಷಣಗಳನ್ನು ತೋರಿಸುತ್ತಾರೆ. ಆದರೆ, ಕೆಲವರು ಪೂರ್ಣ ಚೇತರಿಕೆ ಕಾಣಲು ಕೆಲವು ವರ್ಷಗಳನ್ನು ತೆಗೆದುಕೊಳ್ಳಬಹುದು. ಕೆಲವು ಜನರು ರೋಗದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು, ಆದರೆ ಕೆಲವು ರೋಗಿಗಳು ಶಾಶ್ವತ ನರ ಹಾನಿಯೊಂದಿಗೆ ಬದುಕಬೇಕಾಗುತ್ತದೆ. ಕೆಲವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಡಬಹುದು.
-
Top 3 Job Sectors: 2026ರಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಬೇಕು? ಟಾಪ್ 3 ಉದ್ಯೋಗ ವಲಯಗಳು -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ












Click it and Unblock the Notifications