ರಷ್ಯಾ ಅಧ್ಯಕ್ಷ ಪುಟಿನ ಮನೆಗೆ ಬೆಂಕಿ: ಸೇಡು ತಿರಿಸಿಕೊಂಡ್ತಾ ಉಕ್ರೇನ್?
ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಬಂಧ ದಿನೇ ದಿನೇ ಹದಗೆಡುತ್ತಿದೆ. ಉಕ್ರೇನ್ ಅಧ್ಯಕ್ಷರ ಹತ್ಯೆಗೆ ರಷ್ಯಾ ಸ್ಕೆಚ್ ಹಾಕಿದ್ದು ಕೆಲವೇ ದಿನಗಳ ಹಿಂದೆ ಬಯಲಾಗಿತ್ತು. ಈಗ ರಷ್ಯಾ ಅಧ್ಯಕ್ಷರ ಮನೆಗೆ ಬೆಂಕಿ ಬಿದ್ದ ಸುದ್ದಿ ತಿಳಿದು ಬಂದಿದೆ. ಇದಕ್ಕೆ ಏನು ಕಾರಣ ಎಂಬುದು ಇನ್ನು ಬಹಿರಂಗವಾಗಿಲ್ಲ.
ಮೂಲಗಳ ಪ್ರಕಾರ ಪುಟಿನ್ ಔಷಧೀಯ ಸ್ನಾನಕ್ಕಾಗಿ ಇಲ್ಲಿಗೆ ಬರುತ್ತಿದ್ದರು. ಪುಟಿನ್ ಅವರ ಮನೆಯ ಮೇಲೆ ಉಕ್ರೇನ್ ಸೇನೆ ದಾಳಿ ಮಾಡಿದೆ ಅಥವಾ ಬೆಂಕಿ ಹತ್ತಿಕೊಂಡ ಹಿಂದಿನ ನಿಗುಡ ಕಾರಣ ಇನ್ನು ತಿಳಿದು ಬಂದಿಲ್ಲ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಪುಟಿನ್ ಅವರ ಈ ಮನೆಯನ್ನು 33 ಮಿಲಿಯನ್ ಯುಎಸ್ ಡಾಲರ್ಗಳಿಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಲ್ಟಾಯ್ ಗಣರಾಜ್ಯದ ಒನ್ಗುಡೆಸ್ಕಿ ಜಿಲ್ಲೆಯಲ್ಲಿ ವರ್ಗೀಕೃತ ನಿರ್ಮಾಣ ಯೋಜನೆಯ ಮಾಹಿತಿಯು 2010 ರಲ್ಲಿ ಹೊರಹೊಮ್ಮಿತು. ಇದಾದ ಬಳಿಕ ಇದಕ್ಕೆ ತಗಲುವ ವೆಚ್ಚದ ವಿವರ ಹೊರಬಿದ್ದಿದೆ.

ಬೆಂಕಿಯ ಹಿಂದೆ ಯಾರ ಕೈವಾಡ?
ರಷ್ಯಾ ಅಧ್ಯಕ್ಷ ಪುಟಿನ್ ಅವರ ಅಲ್ಟಾಯ್ನಲ್ಲಿರುವ ಮನೆ ಸುಟ್ಟು ಬೂದಿಯಾಗಿರುವ ಸುದ್ದಿ ಮುನ್ನೆಲೆಗೆ ಬರುತ್ತಿದೆ. ರಷ್ಯಾದ ಮಾಧ್ಯಮಗಳ ಪ್ರಕಾರ, ಅಲ್ಟಾಯ್ನಲ್ಲಿರುವ ಪುಟಿನ್ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಟಾಯ್ ಗಣರಾಜ್ಯದ ಒನ್ಗುಡೆಸ್ಕಿ ಜಿಲ್ಲೆಯಲ್ಲಿ ಕ್ರೆಮ್ಲಿನ್ ಆಡಳಿತಗಾರ ವ್ಲಾಡಿಮಿರ್ ಪುಟಿನ್ ಅವರ ನಿವಾಸವನ್ನು ಹೊಂದಿರುವ ಕಟ್ಟಡವು ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ರಷ್ಯಾದ ಚಾನೆಲ್ ವರದಿ ಮಾಡಿದೆ.
ಈ ಘಟನೆ ಹಿಂದೆ ಉಕ್ರೇನ್ ಕೈವಾಡವಿರಬಹುದು ಎಂದು ಹೇಳಲಾಗುತ್ತಿದೆ. ಮಂಗೋಲಿಯಾ, ಚೀನಾ ಮತ್ತು ಕಝಾಕಿಸ್ತಾನ್ ಗಡಿಯಲ್ಲಿರುವ ಸೈಬೀರಿಯಾದ ಪ್ರದೇಶವಾದ ಅಲ್ಟಾಯ್ ಗಣರಾಜ್ಯದ ಒನ್ಗುಡೆಸ್ಕಿ ಜಿಲ್ಲೆಯಲ್ಲಿ ಈ ಬಂಗಲೆ ಇದೆ.

ರಷ್ಯನ್ರಿಗೆ ಪ್ರವೇಶ ನಿಷೇಧ
ಪುಟಿನ್ ಅವರ ಈ ಮನೆಯನ್ನು 33 ಮಿಲಿಯನ್ ಯುಎಸ್ ಡಾಲರ್ಗಳಿಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಲ್ಟಾಯ್ ಗಣರಾಜ್ಯದ ಒನ್ಗುಡೆಸ್ಕಿ ಜಿಲ್ಲೆಯಲ್ಲಿ ವರ್ಗೀಕೃತ ನಿರ್ಮಾಣ ಯೋಜನೆಯ ಮಾಹಿತಿಯು 2010 ರಲ್ಲಿ ಹೊರಹೊಮ್ಮಿತು. ಇದಾದ ಬಳಿಕ ಇದಕ್ಕೆ ತಗಲುವ ವೆಚ್ಚದ ವಿವರ ಹೊರಬಿದ್ದಿದೆ. ಈ ಮನೆ ಪುಟಿನ್ಗೆ ಸಂಬಂಧಿಸಿದೆ ಎಂದು ಸ್ಥಳೀಯ ವಿರೋಧ ಜನರು ಪದೇ ಪದೇ ಹೇಳಿಕೊಂಡಿದ್ದಾರೆ. ಯಾವುದೇ ಸಾಮಾನ್ಯ ರಷ್ಯನ್ ಇಲ್ಲಿಗೆ ಬರುವುದನ್ನು ನಿಷೇಧಿಸಲಾಗಿದೆ.
ರಷ್ಯಾದ ಅಲ್ಟಾಯ್ ಗಣರಾಜ್ಯದ ಬೆಟ್ಟಗಳಲ್ಲಿ ನಿರ್ಮಿಸಲಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ರಾಜಮನೆತನದ ಬಂಗಲೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿಯಲ್ಲಿ ಇಡೀ ಅರಮನೆ ಸುಟ್ಟು ಹೋಗಿದೆ. ಈ ಬೆಂಕಿ ಹೇಗೆ ಹತ್ತಿಕೊಂಡಿತು ಎಂಬುದರ ಕುರಿತು ಇನ್ನೂ ಏನೂ ಸ್ಪಷ್ಟವಾಗಿಲ್ಲ, ಆದರೆ ರಷ್ಯಾದ ಗುಪ್ತಚರ ಸಂಸ್ಥೆಗಳು ಪಾಶ್ಚಿಮಾತ್ಯ ದೇಶಗಳು ಅಥವಾ ಉಕ್ರೇನ್ ಇದರಲ್ಲಿ ಭಾಗಿಯಾಗಿರುವ ಸಾಧ್ಯತೆಯನ್ನು ತನಿಖೆ ಮಾಡುತ್ತಿವೆ. ಈ ನಿಟ್ಟಿನಲ್ಲಿ ಏಜೆನ್ಸಿಗಳಿಗೆ ಯಾವುದೇ ಸ್ಪಷ್ಟ ಸುಳಿವು ಸಿಕ್ಕರೆ ಯುದ್ಧದ ತೀವ್ರತೆಯನ್ನು ಅಲ್ಲಗಳೆಯುವಂತಿಲ್ಲ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ












Click it and Unblock the Notifications