ಹೈಜಾಕ್ ಡ್ರಾಮಾ ಅಂತ್ಯ, ಅಪಹರಣಕಾರನ ಬಂಧನ
ಕೈರೋ, ಮಾರ್ಚ್ 29: ಈಜಿಪ್ಟ್ಏರ್ ವಿಮಾನ ಮಂಗಳವಾರ ಬೆಳಗ್ಗೆ ಹೈಜಾಕ್ ಆಗಿದೆ. ಇಲ್ಲಿನ ಕರಾವಳಿ ತೀರದ ಅಲೆಕ್ಸಾಂಡ್ರಿಯಾದಿಂದ ರಾಜಧಾನಿ ಕೈರೋಗೆ ವಿಮಾನ ತೆರಳುತ್ತಿತ್ತು. ವಿಮಾನದಲ್ಲಿ ಒಟ್ಟು 62 ಜನರಿದ್ದಾರೆ. ವಿಮಾನವನ್ನು ಬಲವಂತವಾಗಿ ಸೈಪ್ರಸ್ ನ ಲಾರ್ನಕಾ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ.

* ಹೈಜಾಕ್ ಡ್ರಾಮಾ ಅಂತ್ಯ, ಅಪಹರಣಕಾರನ ಬಂಧನ.
* ಹೈಜಾಕ್ ಮಾಡಿದವರು ಡಾ. ಇಬ್ರಾಹಿಂ ಅಲ್ಲ, ಕೈರೋ ವಿಶ್ವ ವಿದ್ಯಾಲಯದ ಇತಿಹಾಸ ವಿಭಾಗದ ಪ್ರೊಫೆಸರ್ ಡಾ. ಸೈಫ್ ಎಲ್ ಡೆನ್ ಮುಸ್ತಫಾ ಎಂದು ತಿಳಿದು ಬಂದಿದೆ.
💥 LATEST:
— Hasan Sari (@HasanSari7) March 29, 2016
He is Dr. Saif El-Den Mustafa, professor of history at cairo university not Dr. Ibrahim Samaha as early reported. Still unofficial
* ನ್ಯೂಯಾರ್ಕ್ ಗೆ ತೆರಳಬೇಕಿದ್ದ ಡಾ. ಇಬ್ರಾಹಿಂ ಅವರು ವಿವಾಹ ವಿಚ್ಛೇದನ ವಿಷಯವಾಗಿ ತಲೆ ಕೆಡಿಸಿಕೊಂಡಿದ್ದರು. ಹೀಗಾಗಿ ಈ ರೀತಿ ಮಾಡಿರಬಹುದು ಎಂದು ಕುಟುಂಬದ ಮೂಲಗಳು ಹೇಳಿವೆ.
* ವಿಮಾನ ಹೈಜಾಕಿಗೆ ಉಗ್ರರು ಕಾರಣರಲ್ಲ, ಒಡೆದ ಸಂಸಾರ ಕಾರಣ ಎಂದು ಈಜಿಪ್ಟ್ ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
* ಈಜಿಪ್ಟ್ ಮೂಲದ ಅಮೆರಿಕನ್ ಪ್ರಜೆ ಡಾ. ಇಬ್ರಾಹಿಂ ಸಮಾಹ ಅವರು ಅಲೆಗ್ಸಾಂಡ್ರಿಯಾ ವಿಶ್ವ ವಿದ್ಯಾಲಯದಲ್ಲಿ ಪಶುವೈದ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
* ಡಾ. ಇಬ್ರಾಹಿಂ ಅವರು ತಮ್ಮ ವಿಚ್ಛೇದನ ಪತ್ನಿ ಕೈಲಿ ನಾಲ್ಕು ಪುಟಗಳ ಪತ್ರ ಕಳಿಸಿರುವ ಮಾಹಿತಿ ಇದೆ. ಪತ್ರದಲ್ಲಿ ಏನಿದೆ ಇನ್ನೂ ಬಹಿರಂಗವಾಗಿಲ್ಲ.

* ಮೂಲತಃ ಟರ್ಕಿಯ ಇಸ್ತಾನ್ ಬುಲ್ ನಲ್ಲಿ ವಿಮಾನವನ್ನು ನಿಲ್ಲಿಸಲು ಯತ್ನಿಸಲಾಗಿತ್ತು. ಆದರೆ, ಅಲ್ಲಿ ನಿಲುಗಡೆಗೆ ಆಸ್ಪದ ಸಿಗದ ಕಾರಣ, ಸೈಪ್ರಸ್ ಗೆ ಬರಲಾಯಿತು.
* ಹೈಜಾಕರ್ ಹೆಸರು ಡಾ. ಇಬ್ರಾಹಿಂ ಸಮಹಾ ಬೇಡಿಕೆ ಇನ್ನೂ ಬಹಿರಂಗ ಪಡಿಸಿಲ್ಲ. ಸಿಬ್ಬಂದಿಗಳನ್ನು ಬಿಡುಗಡೆ ಮಾಡಲು ಸಮ್ಮತಿಸುವ ಸಾಧ್ಯತೆ ಕಂಡು ಬಂದಿದೆ. ನಾಲ್ವರು ವಿದೇಶಿಯರಿಗೆ ಪ್ರಾಣಭೀತಿ ಮುಂದುವರೆದಿದೆ.
* ಈ ಸುದ್ದಿಯನ್ನು ಕೇಳಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
* ಬಿಡುಗಡೆಯಾದ ಮಹಿಳಾ ಪ್ರಯಾಣಿಕರೊಬ್ಬರ ಕೈಲಿ ನಾಲ್ಕು ಪುಟಗಳ ಪತ್ರ ಪತ್ತೆ. ಅರೇಬಿಕ್ ಭಾಷೆಯಲ್ಲಿರುವ ಪತ್ರದಲ್ಲಿ ಬೇಡಿಕೆ ಇರುವ ಬಗ್ಗೆ ಮಾಹಿತಿ ಇರುವ ಸಾಧ್ಯತೆ.
💥 Hijacker is Dr. Ibrahim Samaha, and Egyptian crew were allowed to leave aircraft but refused until all other4 foreigners on board released
— Hasan Sari (@HasanSari7) March 29, 2016
* ಹೈಜಾಕ್ ಮಾಡಿದ ವ್ಯಕ್ತಿಯನ್ನು ಇಬ್ರಾಹಿಂ ಸಮಹಾ ಎಂದು ಗುರುತಿಸಲಾಗಿದೆ.
* ಈಜಿಪ್ಟ್ ಅಧ್ಯಕ್ಷ ಸಿಸಿ ಅವರು ಸೈ ಪ್ರಸ್ ಅಧ್ಯಕ್ಷರಿಗೆ ಕರೆ ಮಾಡಿ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
* ವಿದೇಶಿ ಪ್ರಯಾಣಿಕರಿಗೆ ಪ್ರಾಣಭೀತಿ, ಹೈಜಾಕರ್ಸ್ ರಿಂದ ಯಾವುದೇ ಬೇಡಿಕೆ ಬಂದಿಲ್ಲ.
* ವಿಮಾನದಲ್ಲಿ ನಾಲ್ಕು ಜನ ವಿದೇಶಿ ಪ್ರಯಾಣಿಕರಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
* ಉಳಿದಂತೆ ಬಹುತೇಕ ಎಲ್ಲಾ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿದೆ.
* 30 ರಿಂದ 40 ಜನ ಪ್ರಯಾಣಿಕರನ್ನು ಬಿಡುಗಡೆ ಮಾಡಲು ಹೈಜಾಕರ್ಸ್ ಒಪ್ಪಿದ್ದಾರೆ. ಸೈಪ್ರಸ್ ನ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳ ಪ್ರತಿಕ್ರಿಯೆ.
* ಹೈಜಾಕರ್ಸ್ ಬಳಿ ಶಸ್ತ್ರಾಸ್ತ್ರ ಇರುವ ಬಗ್ಗೆ ಶಂಕೆ, ವಿಮಾನದ ಹತ್ತಿರ ಬಂದರೆ ಸ್ಫೋಟಿಸುವುದಾಗಿ ಬೆದರಿಕೆ.
* ವಿಮಾನ ಎಂಎಸ್ 181ದಲ್ಲಿದ್ದ ಈಜಿಪ್ಟ್ ಮೂಲದ 20 ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿದೆ.

* ಮಹಿಳೆಯರು ಹಾಗೂ ಮಕ್ಕಳನ್ನು ಮೊದಲಿಗೆ ವಿಮಾನದಿಂದ ಹೊರಕ್ಕೆ ಕಳಿಸಿದ ಹೈಜಾಕರ್ಸ್.
#EgyptAir says hijacker w/ suicide belt threatened pilot, forced landing in Cyprus. 81 passengers on board. pic.twitter.com/47erl0ZBdI
— Corrina Pysa (@CorrinaPysa) March 29, 2016
* ಹೈಜಾಕ್ ಮಾಡಿದವರ ಜೊತೆ ಸಂಧಾನ ಮಾತುಕತೆ ಆರಂಭವಾಗಿದೆ.
* ವಿಮಾನದಲ್ಲಿ ಒಟ್ಟು 55 ಜನ ಪ್ರಯಾಣಿಕರು ಹಾಗೂ 7ಜನ ಸಿಬ್ಬಂದಿ ಇದ್ದಾರೆ.
* ವಿಮಾನ ಎಂಎಸ್ 181(ಏರ್ ಬಸ್) ಹೈಜಾಕ್ ಆಗಿರುವುದನ್ನು ಈಜಿಪ್ಟ್ ನ ನಾಗರಿಕ ವಿಮಾನಯಾನ ಪ್ರಾಧಿಕಾರ ದೃಢಪಡಿಸಿದೆ.
Breaking - Plane hijacked in Egypt @EGYPTAIR With 80 passengers on Board. Plane lands in Cyprus @OneindiaKannada
— Shama Sundara S K (@shamsundar_sk) March 29, 2016
* ವಿಮಾನದಲ್ಲಿ ಆತ್ಮಾಹುತಿ ಬಾಂಬರ್ ಇರುವ ಶಂಕೆ ವ್ಯಕ್ತವಾಗಿದೆ.
Our flight MS181 is officially hijacked. we'll publish an official statement now. #Egyptair
— EGYPTAIR (@EGYPTAIR) March 29, 2016
ಈ ಸುದ್ದಿ ಕುರಿತ ವಿಡಿಯೋ:
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications