ಎಬೋಲಾ ರೋಗ ಗುಣವಾದರೂ 'ಸೆಕ್ಸ್' ಮಾಡುವಾಗ ಎಚ್ಚರ!
ವಾಷಿಂಗ್ಟನ್, ಮೇ.4: ಜಗತ್ತಿನ ಮಾರಕ ವೈರಾಣು ಎಬೋಲಾಕ್ಕೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾದವರೂ ಆತಂಕಪಡುವ ಸುದ್ದಿ ಬಂದಿದೆ. ಎಬೋಲಾ ರೋಗದಿಂದ ಗುಣಮುಖರಾದವರು 'ಸೆಕ್ಸ್' ಮಾಡುವ ಮುನ್ನ ಎಚ್ಚರವಹಿಸಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಎಬೋಲಾದಿಂದ ಗುಣಮುಖರಾದರೂ ವ್ಯಕ್ತಿಯ ವೀರ್ಯಾಣುವಿನಲ್ಲಿ ವೈರಾಣು ಇನ್ನೂ ಜೀವಂತ ಇರುತ್ತದೆ. ಸಂಭೋಗ ಕ್ರಿಯೆಯಲ್ಲಿ ತೊಡಗುವ ಮುನ್ನ ಕಾಂಡೋಮ್ ಬಳಸದಿದ್ದರೆ ಈ ವೈರಾಣುವಿನಿಂದ ನಿಮ್ಮ ಸಂಗಾತಿಗೆ ಸೋಂಕು ತಗುಲುತ್ತದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಸದ್ಯಕ್ಕೆ ಸಂಶೋಧನೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಎಬೋಲಾ ವೈರಾಣು ವೀರ್ಯಾಣುವಿನಲ್ಲಿ ಸುಮಾರು 3 ತಿಂಗಳುಗಳ ಕಾಲ ಜೀವಂತ ಇರುತ್ತದೆ. ಈ ಸಂದರ್ಭದಲ್ಲಿ ಸೇಫ್ ಸೆಕ್ಸ್ ವಿಧಾನ ಅನುಸರಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಪಶ್ಚಿಮ ಆಫ್ರಿಕಾದ ವ್ಯಕ್ತಿಯೊಬ್ಬ ಎಬೋಲಾ ರೋಗದಿಂದ ಮುಕ್ತನಾಗಿದ್ದ ಆದರೆ, ಐದು ತಿಂಗಳ ಬಳಿಕ ಆತ ಕಾಂಡೋಮ್ ಬಳಸದೆ ಸೆಕ್ಸ್ ಮಾಡಿದ ಕಾರಣ ಸೋಂಕು ಹರಡಿರುವುದು ಪತ್ತೆಯಾಗಿದೆ.
ಸೆಪ್ಟೆಂಬರ್ 2014ರಲ್ಲಿ ಎಬೋಲಾ ರೋಗದ ಲಕ್ಷಣಗಳು 46 ವರ್ಷದ ವ್ಯಕ್ತಿಗೆ ಕಾಣಿಸಿಕೊಂಡಿತ್ತು. ಕಳೆದ ಮಾರ್ಚ್ ತಿಂಗಳಿನಲ್ಲಿ ಅನಾರೋಗ್ಯ ಪೀಡಿತನಾಗಿದ್ದ. ಈತನೊಡನೆ ದೈಹಿಕ ಸಂಪರ್ಕ ಸಾಧಿಸಿದ್ದ 44 ವರ್ಷದ ಲಿಬೇರಿಯನ್ ಮಹಿಳೆಗೆ ಸೋಂಕು ಹರಡಿರುವುದು ಪತ್ತೆಯಾಗಿದೆ. ಇದೇ ಸಮಯದಲ್ಲಿ ಮತ್ತೊಬ್ಬ ಮಹಿಳೆ ಜೊತೆ ಕೂಡಾ ಈತ ಹಾಸಿಗೆ ಹಂಚಿಕೊಂಡಿದ್ದ. ಅದರೆ, ಆಕೆಗೆ ವೈರಾಣು ನೆಗಟಿವ್ ಎಂದು ವರದಿ ಬಂದಿದೆ.
ಒಟ್ಟಾರೆ, ಸೇಫ್ ಸೆಕ್ಸ್ ವಿಧಾನ ಬಳಸದಿದ್ದರೆ ಎಬೋಲಾ ವೈರಾಣು ಹರಡುವ ಸಾಧ್ಯತೆ ಇದೆ ಎನ್ನುವ ವಿಜ್ಞಾನಿಗಳು ಇನ್ನೂ ಈ ಸಂಗತಿಯನ್ನು ದೃಢಪಡಿಸಿಲ್ಲ. ಇದು ಕೂಡಾ ರೋಗ ಹರಡುವ ವಿಧಾನಗಳಲ್ಲಿ ಒಂದು ಎಂದು ಹೇಳಿದ್ದಾರೆ ಅಷ್ಟೆ. ಕೆಲ ಕಾಲ ಸುಮ್ಮನಿದ್ದ ಎಬೋಲಾ ವೈರಾಣು ಆರ್ಭಟ ಈ ರೀತಿ ಕೂಡಾ ಹರಡಬಹುದು ಎಂಬುದು ಆಂತಕಕಾರಿಯಂತೂ ಹೌದು.(ಎಎನ್ ಐ)
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications