ಎಬೋಲಾ ರೋಗ ಗುಣವಾದರೂ 'ಸೆಕ್ಸ್' ಮಾಡುವಾಗ ಎಚ್ಚರ!
ವಾಷಿಂಗ್ಟನ್, ಮೇ.4: ಜಗತ್ತಿನ ಮಾರಕ ವೈರಾಣು ಎಬೋಲಾಕ್ಕೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾದವರೂ ಆತಂಕಪಡುವ ಸುದ್ದಿ ಬಂದಿದೆ. ಎಬೋಲಾ ರೋಗದಿಂದ ಗುಣಮುಖರಾದವರು 'ಸೆಕ್ಸ್' ಮಾಡುವ ಮುನ್ನ ಎಚ್ಚರವಹಿಸಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಎಬೋಲಾದಿಂದ ಗುಣಮುಖರಾದರೂ ವ್ಯಕ್ತಿಯ ವೀರ್ಯಾಣುವಿನಲ್ಲಿ ವೈರಾಣು ಇನ್ನೂ ಜೀವಂತ ಇರುತ್ತದೆ. ಸಂಭೋಗ ಕ್ರಿಯೆಯಲ್ಲಿ ತೊಡಗುವ ಮುನ್ನ ಕಾಂಡೋಮ್ ಬಳಸದಿದ್ದರೆ ಈ ವೈರಾಣುವಿನಿಂದ ನಿಮ್ಮ ಸಂಗಾತಿಗೆ ಸೋಂಕು ತಗುಲುತ್ತದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಸದ್ಯಕ್ಕೆ ಸಂಶೋಧನೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಎಬೋಲಾ ವೈರಾಣು ವೀರ್ಯಾಣುವಿನಲ್ಲಿ ಸುಮಾರು 3 ತಿಂಗಳುಗಳ ಕಾಲ ಜೀವಂತ ಇರುತ್ತದೆ. ಈ ಸಂದರ್ಭದಲ್ಲಿ ಸೇಫ್ ಸೆಕ್ಸ್ ವಿಧಾನ ಅನುಸರಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಪಶ್ಚಿಮ ಆಫ್ರಿಕಾದ ವ್ಯಕ್ತಿಯೊಬ್ಬ ಎಬೋಲಾ ರೋಗದಿಂದ ಮುಕ್ತನಾಗಿದ್ದ ಆದರೆ, ಐದು ತಿಂಗಳ ಬಳಿಕ ಆತ ಕಾಂಡೋಮ್ ಬಳಸದೆ ಸೆಕ್ಸ್ ಮಾಡಿದ ಕಾರಣ ಸೋಂಕು ಹರಡಿರುವುದು ಪತ್ತೆಯಾಗಿದೆ.
ಸೆಪ್ಟೆಂಬರ್ 2014ರಲ್ಲಿ ಎಬೋಲಾ ರೋಗದ ಲಕ್ಷಣಗಳು 46 ವರ್ಷದ ವ್ಯಕ್ತಿಗೆ ಕಾಣಿಸಿಕೊಂಡಿತ್ತು. ಕಳೆದ ಮಾರ್ಚ್ ತಿಂಗಳಿನಲ್ಲಿ ಅನಾರೋಗ್ಯ ಪೀಡಿತನಾಗಿದ್ದ. ಈತನೊಡನೆ ದೈಹಿಕ ಸಂಪರ್ಕ ಸಾಧಿಸಿದ್ದ 44 ವರ್ಷದ ಲಿಬೇರಿಯನ್ ಮಹಿಳೆಗೆ ಸೋಂಕು ಹರಡಿರುವುದು ಪತ್ತೆಯಾಗಿದೆ. ಇದೇ ಸಮಯದಲ್ಲಿ ಮತ್ತೊಬ್ಬ ಮಹಿಳೆ ಜೊತೆ ಕೂಡಾ ಈತ ಹಾಸಿಗೆ ಹಂಚಿಕೊಂಡಿದ್ದ. ಅದರೆ, ಆಕೆಗೆ ವೈರಾಣು ನೆಗಟಿವ್ ಎಂದು ವರದಿ ಬಂದಿದೆ.
ಒಟ್ಟಾರೆ, ಸೇಫ್ ಸೆಕ್ಸ್ ವಿಧಾನ ಬಳಸದಿದ್ದರೆ ಎಬೋಲಾ ವೈರಾಣು ಹರಡುವ ಸಾಧ್ಯತೆ ಇದೆ ಎನ್ನುವ ವಿಜ್ಞಾನಿಗಳು ಇನ್ನೂ ಈ ಸಂಗತಿಯನ್ನು ದೃಢಪಡಿಸಿಲ್ಲ. ಇದು ಕೂಡಾ ರೋಗ ಹರಡುವ ವಿಧಾನಗಳಲ್ಲಿ ಒಂದು ಎಂದು ಹೇಳಿದ್ದಾರೆ ಅಷ್ಟೆ. ಕೆಲ ಕಾಲ ಸುಮ್ಮನಿದ್ದ ಎಬೋಲಾ ವೈರಾಣು ಆರ್ಭಟ ಈ ರೀತಿ ಕೂಡಾ ಹರಡಬಹುದು ಎಂಬುದು ಆಂತಕಕಾರಿಯಂತೂ ಹೌದು.(ಎಎನ್ ಐ)
-
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
Vastu Tips for Home: ಮನೆಗೆ ಎರಡು ಮುಖ್ಯ ಪ್ರವೇಶ ದ್ವಾರಗಳು ಇರಬಹುದೇ? ವಾಸ್ತು ಹೇಳುವುದು ಏನು -
Vastu Tips: ಈ ವಾಸ್ತು ಟಿಪ್ಸ್ ಪಾಲಿಸಿದರೆ ಧನ ಮತ್ತು ಯಶಸ್ಸು ನಿಮ್ಮದೇ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications