ಡೊನಾಲ್ಡ್ ಟ್ರಂಪ್ ಇನ್ನೊಂದು ದೇಶಕ್ಕೂ ಮಾರಕವಾಗ್ತಾರೆ: ಖ್ಯಾತ ಜ್ಯೋತಿಷಿ ಭವಿಷ್ಯ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ವೆನೆಜುವೆಲಾದ ಅಧ್ಯಕ್ಷರಾಗಿದ್ದ ನಿಕೋಲಸ್ ಮದುರೊ ಮತ್ತು ಅವರ ಪತ್ನಿಯನ್ನು ಸೆರೆ ಹಿಡಿದಿದ್ದರು. ಅಮೆರಿಕವು ವೆನಿಜುವೆಲಾ ದೇಶದ ವಿರುದ್ಧ ದೊಡ್ಡ ಪ್ರಮಾಣದ ದಾಳಿಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ಟ್ರಂಪ್ ಘೋಷಿಸಿದ್ದರು. ಸದ್ಯ ವೆನಿಜುವೆಲಾ ಬಳಿಕ ಡೊನಾಲ್ಡ್ ಟ್ರಂಪ್ ಮತ್ತೊಂದು ದೇಶಕ್ಕೂ ಮಾರಕವಾಗ್ತಾರೆ ಎಂದು ಖ್ಯಾತ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ.
'ಅಪಾಯಕಾರಿ ಟ್ರಂಪ್. ಇವರು ಆಡಳಿತಕ್ಕೆ ಬರುವ ಮುನ್ನವೇ ಬರೆದಿದ್ದೆ. ಕೆರಳಿದರೆ ಏನೂ ಮಾಡಬಹುದು. ಬಹುಷಃ ಹಿರೋಷಿಮದ ನಂತರ ಇನ್ನೊಂದು ದುರಂತಕ್ಕೆ ಕಾರಣ ಆಗಬಹುದು' ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಜ್ಯೋತಿರ್ವಿಜ್ಞಾನಂ ಭವಿಷ್ಯ ನುಡಿದಿದ್ದಾರೆ. 'ಸದ್ಯ ಟ್ರಂಪ್ ಅವರಿಗೆ ಚಂದ್ರಾಷ್ಟಮ ಗುರು, ಚಂದ್ರ ಪಂಚಮ ಶನಿ. ಅದರಲ್ಲೂ ಕುಜಾಷ್ಟಮ ಶನಿ ಇರುವುದರಿಂದ ಇನ್ನೊಂದು ರಾಷ್ಟ್ರಕ್ಕೆ ಮಾರಕವಾಗಿ ಸಾಯಬಹುದು. ತಾಳ್ಮೆ ಇಲ್ಲದ ವ್ಯಕ್ತಿಯಲ್ಲಿ ಬ್ರಹ್ಮಾಸ್ತ್ರ ಕೊಟ್ಟರೇನಾದೀತೋ ಅದೇ ರೀತಿ ಮಾಡಬಹುದು' ಎಂದಿದ್ದಾರೆ.

ಹುಚ್ಚು ಆಡಳಿತದ ಕೊನೆಯ ಹಂತ
'ಇಂಡೋ ಪಾಕ್ ಸಿಂಧೂರ ಆಪರೇಷನ್ ವೇಳೆ ಸೀಸ್ಫಯರ್ (ಕದನ ವಿರಾಮ) ಎಂದವ ಈಗ ಮಾಡೋದೇನು? ಕಾರಣ ಹಲವು ಇರಬಹುದು. ಆದರೆ ರಷ್ಯಾವನ್ನು, ಈಗಿನ ಮೋದಿ ಸರ್ಕಾರವನ್ನು ಎದುರು ಹಾಕಿಕೊಂಡು ಯುದ್ಧಕ್ಕಿಳಿದಿದ್ದಾನೆ. ಅದೂ ಅಮಾನವೀಯ ರೀತಿಯಲ್ಲಿ. ಬಹುಷಃ ಈತನ ಹುಚ್ಚು ಆಡಳಿತದ ಕೊನೆಯ ಹಂತ ಬಂದಿದೆ' ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಅಮೆರಿಕಾ ಮಿಲಿಟರಿ ಪಡೆಯು ತೈಲ ಸಂಪದ್ಭರಿತ ವೆನಿಜುವೆಲಾ ದೇಶದ ಮೇಲೆ ದಾಳಿ ನಡೆಸಿದೆ. ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮದುರೋ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಡೋನಾಲ್ಡ್ ಟ್ರಂಪ್ ಆರೋಪಿಸಿ ಅವರನ್ನು ತಮ್ಮ ಜಾಗದಿಂದಲೇ ಸೆರೆಹಿಡಿದು ಅಮೆರಿಕಾಗೆ ಹೊತ್ತೊಯ್ದರು. ಬಳಿಕ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮದುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆಹಿಡಿಯಲಾಗಿದೆ ಮತ್ತು ದೇಶದಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು ಅಧಿಕೃತವಾಗಿ ಘೋಷಿಸಿ ಫೋಟೋ ಕೂಡ ಹಂಚಿಕೊಂಡರು.
ಅಮೆರಿಕದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಟ್ರಂಪ್, ಅಮೆರಿಕದ ಸಶಸ್ತ್ರ ಪಡೆಗಳು ವೆನೆಜುವೆಲಾದ ರಾಜಧಾನಿಯಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದ್ದು, ಇದು ಎರಡನೇ ಮಹಾಯುದ್ಧದ ನಂತರ ಜನರು ನೋಡದಂತಹ ದಾಳಿ. ಸರ್ವಾಧಿಕಾರಿ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿಯಲು ಕ್ಯಾರಕಾಸ್ನ ಹೃದಯಭಾಗದಲ್ಲಿರುವ ಕೋಟೆಗೆ ನುಗ್ಗಿದೆವು. ಇದು ಅಮೆರಿಕಾದ ಇತಿಹಾಸದಲ್ಲಿ ಮಿಲಿಟರಿ ಶಕ್ತಿ ಮತ್ತು ಸಾಮರ್ಥ್ಯದ ಅತ್ಯಂತ ಅದ್ಭುತ ಮತ್ತು ಶಕ್ತಿಯುತ ಪ್ರದರ್ಶನಗಳಲ್ಲಿ ಒಂದಾಗಿದೆ ಎಂದು ಟ್ರಂಪ್ ಸಮರ್ಥಿಸಿಕೊಂಡರು.
ಅಲ್ಪಾವಧಿಯಲ್ಲಿ ಅಮೆರಿಕ ಸಾಧಿಸಿದ್ದನ್ನು ಜಗತ್ತಿನ ಯಾವುದೇ ರಾಷ್ಟ್ರ ಸಾಧಿಸಲು ಸಾಧ್ಯವಿಲ್ಲ. ರಾತ್ರಿಯ ವೇಳೆ ಮದುರೊನನ್ನು ಯಶಸ್ವಿಯಾಗಿ ಸೆರೆಹಿಡಿದಾಗ, ವೆನೆಜುವೆಲಾದ ಎಲ್ಲಾ ಮಿಲಿಟರಿ ಸಾಮರ್ಥ್ಯಗಳು ದುರ್ಬಲಗೊಂಡವು. ಸುರಕ್ಷಿತ, ಸರಿಯಾದ ಮತ್ತು ವಿವೇಚನಾಯುಕ್ತ ಪರಿವರ್ತನೆಯನ್ನು ಮಾಡಲು ಸಾಧ್ಯವಾಗುವವರೆಗೆ ನಾವು ವೆನೆಜುವೆಲಾ ದೇಶವನ್ನು ನಡೆಸುತ್ತೇವೆ. ವೆನೆಜುವೆಲಾದ ಮಹಾನ್ ಜನರಿಗೆ ನಾವು ಶಾಂತಿ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಬಯಸುತ್ತೇವೆ ಎಂದು ಟ್ರಂಪ್ ಹೇಳಿದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications