ಕೆಲ ದಿನ ಕಾಯಿರಿ: ಬ್ಯಾರಲ್ ತೈಲಕ್ಕೆ 20 ಡಾಲರ್ ಕೊಟ್ರೆ ಸಾಕು!
ನವದೆಹಲಿ, ಡಿಸೆಂಬರ್, 22: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದರ ಪ್ರತಿದಿನ ಇಳಿಕೆಯ ಹಾದಿಯಲ್ಲಿದೆ. 2004ರ ನಂತರ ಇದೇ ಮೊದಲ ಬಾರಿಗೆ 30 ಡಾಲರ್ ಮಟ್ಟಕ್ಕೆ ಕುಸಿದಿದೆ.
ಬ್ರೆಂಟ್ ಆಯಿಲ್ ಬೆಲೆ 71 ಸೆಂಟ್ ಕುಸಿತ ಕಂಡು ಬ್ಯಾರೆಲ್ಗೆ 36.17 ಡಾಲರ್ ಆಗಿದ್ದರೆ, ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ ತೈಲವು ಶೇ.1ರಷ್ಟು ಕುಸಿದು ಬ್ಯಾರೆಲ್ಗೆ 34.41 ಡಾಲರ್ ಆಗಿದೆ. ಮುಂದಿನ ಕೆಲ ತಿಂಗಳುಗಳಲ್ಲಿ 20 ಡಾಲರ್ಗೆ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಜಾಗತಿಕ ಅಭಿವೃದ್ಧಿಯಲ್ಲಿನ ಕುಸಿತ ಹಾಗೂ ತೈಲ ಉತ್ಪಾದನೆಯಲ್ಲಿನ ಹೆಚ್ಚಳವೇ ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ತೈಲ ಬೆಲೆ ಶೇ.70ರಷ್ಟು ಇಳಿಕೆ ಕಂಡಿದೆ.[ತೈಲದ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದು ಯಾಕೆ?]

ಅರಬ್ ರಾಷ್ಟ್ರ ಒಕ್ಕೂಟದಲ್ಲೂ ತೈಲ ಉತ್ಪಾದನೆ ಹೆಚ್ಚಾಗಿದೆ. ರಾಜಕೀಯ ಮತ್ತು ಆರ್ಥಿಕ ಗೊಂದಲಗಳು ತೈಲ ಉತ್ಪಾದನೆ ಮೇಲೆ ಪರಿಣಾಮ ಬೀರಿಲ್ಲ. ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರ ಪರಿಷ್ಕರಣೆ ಮಾಡಿರುವುದರಿಂದ ಡಾಲರ್ ಲೆಕ್ಕದಲ್ಲಿ ಖರೀದಿ ಮಾಡುವವರು ಪರ್ಯಾಯ ಮಾರ್ಗಗಳತ್ತ ಆಲೋಚನೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿ ಬೇಡಿಕೆ ಕುಸಿಯಲಿದೆ.[ಲೀಟರ್ ಪೆಟ್ರೋಲ್ ಗೆ ನಿಜವಾಗಿ ಭಾರತದಲ್ಲಿ ಎಷ್ಟಾಗುತ್ತದೆ? ಈ ಲೆಕ್ಕ ನೋಡಿ]
ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕವನ್ನು ನಿರಂತರವಾಗಿ ಹೆಚ್ಚಳ ಮಾಡಿಕೊಳ್ಳುತ್ತಾ ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ನಿರಂತರ ಇಳಿಕೆಯಾಗುತ್ತಿದ್ದರೂ ಅದರ ಲಾಭ ಭಾರತದ ಗ್ರಾಹಕನಿಗೆ ಇನ್ನು ಸಿಕ್ಕಿಲ್ಲ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೊಂಚ ಮಾತ್ರ ತಗ್ಗಿಸಲಾಗಿದೆ.
ಡಾಲರ್ ಮತ್ತು ರುಪಾಯಿ ಲೆಕ್ಕ ಹಾಕಿ
ಮಂಗಳವಾರ ಒಂದು ಡಾಲರ್ ಗೆ 66.33 ರು. ಇತ್ತು. ಇದೆ ದರ ಕಾಯ್ದುಕೊಂಡಲ್ಲಿ 20 ಡಾಲರ್ ಎಂದರೆ ಬ್ಯಾರಲ್ ಕಚ್ಚಾ ತೈಲಕ್ಕೆ ಭಾರತ 1,326 ರು. ನೀಡಬೇಕಾಗುತ್ತದೆ. ಕರೆನ್ಸಿ ಬದಲಾವಣೆಗಾಗಿ ಇಲ್ಲಿ ಕ್ಲಿಕ್ ಮಾಡಬಹುದು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications