ತೈವಾನ್ ತಿಕ್ಕಾಟ, ಚೀನಾ ಕೊಟ್ಟ ವಾರ್ನಿಂಗ್ ಏನು ಗೊತ್ತೆ?
ಈಗಾಗಲೇ ಜಗತ್ತಿನಲ್ಲಿ 2 ಭೀಕರ ಯುದ್ಧಗಳು ಆರಂಭವಾಗಿವೆ, ಒಂದು ಯುರೋಪ್ ಖಂಡ & ಇನ್ನೊಂದು ಮಧ್ಯ ಪ್ರಾಚ್ಯದಲ್ಲಿ ತಲ್ಲಣ ಎಬ್ಬಿಸಿದೆ. ಹೀಗೆ ಭೂಮಿಯ ಎರಡು ಪ್ರಮುಖ ಭಾಗದಲ್ಲಿ ನೆತ್ತರು ಚೆಲ್ಲಾಡುವ ಸಮಯದಲ್ಲೇ, ಏಷ್ಯಾ ಖಂಡದಲ್ಲೂ ಯುದ್ಧದ ಆತಂಕವು ಆವರಿಸಿದೆ. ತೈವಾನ್ ಹಾಗೂ ಚೀನಾ ನಡುವೆ ಇನ್ನೇನು ಯುದ್ಧ ನಡೆಯುತ್ತೆ ಎನ್ನುವಂತೆ ವಾತಾವರಣ ನಿರ್ಮಾಣವಾಗಿದೆ. ಈ ಸಮಯದಲ್ಲಿ ಚೀನಾ ಖಡಕ್ ವಾರ್ನಿಂಗ್ ಕೊಟ್ಟಿದೆ.
ದ್ವೀಪರಾಷ್ಟ್ರ ತೈವಾನ್ ಕುರಿತು ಅಮೆರಿಕ & ಅದರ ಸ್ನೇಹಿತ ದೇಶಗಳು ತೆಗೆದುಕೊಳ್ಳುವ, ಪ್ರತಿ ನಿರ್ಧಾರಕ್ಕೂ ಚೀನಾ ವಿರೋಧ ವ್ಯಕ್ತಪಡಿಸಿದೆ. ಜೊತೆಗೆ ತೈವಾನ್ ವಿಚಾರ ಪ್ರಸ್ತಾಪ ಮಾಡ್ತಾ ಚೀನಾ ವಿರುದ್ಧ ಷಡ್ಯಂತ್ರ ಹೆಣೆಯುತ್ತಿರುವ ಆರೋಪ ಮಾಡುತ್ತಿದೆ ಚೀನಾ. ಹೀಗಿದ್ದಾಗಲೇ ಆ ದ್ವೀಪರಾಷ್ಟ್ರ ನಮ್ಮದು ಎನ್ನುವ ಸಂದೇಶವನ್ನು ಚೀನಾ ಕೊಟ್ಟಿದೆ. ತೈವಾನ್ ಎಂದೆಂದಿಗು ಒಂದು ರಾಷ್ಟ್ರವಾಗಿರಲಿಲ್ಲ. ಭವಿಷ್ಯದಲ್ಲೂ ಅದು ರಾಷ್ಟ್ರವಾಗಿ ಇರುವುದಿಲ್ಲ ಎಂಬ ಮೆಸೇಜ್ ಕೊಟ್ಟಿದೆ ಚೀನಾ!

ಚೀನಾ ಕೊಟ್ಟ ವಾರ್ನಿಂಗ್ ಇದು!
ಅಂದಹಾಗೆ ಕಳೆದ ಕೆಲವು ತಿಂಗಳಿಂದ ಚೀನಾ ಮತ್ತು ತೈವಾನ್ ವಿಚಾರ ಭಾರಿ ಚರ್ಚೆಗೂ ವೇದಿಕೆ ಒದಗಿಸಿದೆ. ಇದಕ್ಕೆಲ್ಲಾ ಕಾರಣ ತೈವಾನ್ ದೇಶದಲ್ಲಿನ ಚುನಾವಣೆ. ಹೀಗೆ ತೈವಾನ್ ಎಲೆಕ್ಷನ್ ಮುಗಿದು ಹೋದರೂ ಕಿರಿಕ್ ಮಾತ್ರ ನಿಲ್ಲುತ್ತಿಲ್ಲ. ಚೀನಾ ವಿರುದ್ಧವಾಗಿ ತೈವಾನ್ ಅನ್ನ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಆರೋಪವನ್ನ ಚೀನಾ ಪದೇ ಪದೇ ಮಾಡುತ್ತಿದ್ದು. ಇಷ್ಟೆಲ್ಲಾ ಬೆಳವಣಿಗೆ ನಡುವೆ ತೈವಾನ್ ಎಂದೆಂದಿಗು ಒಂದು ದೇಶವಾಗಿಲ್ಲ. ಭವಿಷ್ಯದಲ್ಲೂ ಅದು ರಾಷ್ಟ್ರವಾಗಿ ಇರುವುದಿಲ್ಲ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ.
ಈಜಿಪ್ಟ್ ನೆಲದಿಂದ ಸಂದೇಶ ರವಾನೆ
ಅಂದಹಾಗೆ ಕೈರೊದಲ್ಲಿ ಈಜಿಪ್ಟ್ ವಿದೇಶಾಂಗ ಸಚಿವ ಸಮೇಹ್ ಶೌಕ್ರಿ ಅವರ ಜೊತೆಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ವಾಂಗ್ ಯಿ ಈ ವಾರ್ನಿಂಗ್ ಕೊಟ್ಟಿದ್ದಾರೆ. ಹಾಗೇ ಚೀನಾ ಪದೇ ಪದೇ ನೀಡುತ್ತಿರುವ ಎಚ್ಚರಿಕೆ ನಡುವೆಯೂ ಸ್ವಯಂ ಆಡಳಿತ ಇರುವ ದ್ವೀಪರಾಷ್ಟ್ರ ತೈವಾನ್ ಪ್ರಜೆಗಳು ಶನಿವಾರ ನಡೆದ ಚುನಾವಣೆಯಲ್ಲಿ, ನೂತನ ಅಧ್ಯಕ್ಷರಾಗಿ ಲಾಯ್ ಚಿಂಗ್ ಟೆರನ್ನು ಆಯ್ಕೆ ಮಾಡಿದ್ದರು. ಈ ಮೂಲಕ ಜಾಗತಿಕ ಮಟ್ಟದಲ್ಲೂ ಮತ್ತೊಂದು ಆತಂಕ ತಲೆದೂರಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ದೊಡ್ಡ ಪ್ರಮಾಣದ ನಷ್ಟ ಪಕ್ಕಾ!
ಅಕಸ್ಮಾತ್ ಚೀನಾ ಏನಾದರೂ ತೈವಾನ್ ವಿರುದ್ಧ ಯುದ್ಧ ಘೋಷಣೆ ಮಾಡಿದರೆ ಸ್ಥಿತಿ ಕೈಮೀರಿ ಹೋಗಲಿದೆ. ಆಗ ಅನಿವಾರ್ಯ ಸ್ಥಿತಿಯಲ್ಲಿ ಅಮೆರಿಕ ಕೂಡ ಮಧ್ಯ ಪ್ರವೇಶ ಮಾಡಬೇಕಾಗುತ್ತೆ ಎಂಬ ಮಾತು ಕೇಳಿಬರುತ್ತಿದೆ. ತೈವಾನ್ ಪರವಾಗಿ ಅಮೆರಿಕ ನಿಂತರೆ, ಇನ್ನೊಂದು ಕಡೆ ಈ ವಿಚಾರದಲ್ಲಿ ಚೀನಾಗೆ ರಷ್ಯಾ ಬೆಂಬಲ ನೀಡುತ್ತೆ. ಈ ಮೂಲಕ ಜಗತ್ತು ಎರಡು ಪಿಸ್ ಆಗುತ್ತದೆ ಎಂಬ ಭಯ ಆವರಿಸಿದೆ. ಹೀಗಾಗಿ ತೈವಾನ್ & ಚೀನಾ ನಡುವಿನ ಯುದ್ಧ ಜಗತ್ತಿಗೆ ಬರೋಬ್ಬರಿ 10 ಟ್ರಿಲಿಯನ್ ಡಾಲರ್ ನಷ್ಟ ಉಂಟುಮಾಡಬಹುದು ಎಂದು ವರದಿಯೊಂದು ಹೇಳಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications