ವಿಕಿರಣ ಅನಿಲ ಸೋರಿಕೆ ಬಗ್ಗೆ ವರದಿ ತಳ್ಳಿ ಹಾಕಿದ ಚೀನಾ
ಹಾಂಗ್ ಕಾಂಗ್, ಜೂನ್ 16: ಚೀನಾ ಅಧೀನದಲ್ಲಿರುವ ಪರಮಾಣು ಆಧಾರಿತ ವಿದ್ಯುತ್ ಸ್ಥಾವರರಿಂದ ಅಣುವಿಕಿರಣ ಸೋರಿಕೆಯಾಗಿದೆ ಎಂದು ಸಿಎನ್ಎನ್ ಸಂಸ್ಥೆ ಪ್ರಸಾರ ಮಾಡಿದ ವರದಿ ಬಗ್ಗೆ ಚೀನಾ ಬುಧವಾರದಂದು ಸ್ಪಷ್ಟನೆ ನೀಡಿದೆ. ಚೀನಾ ಪ್ರಭುತ್ವದ ಅಧೀನದಲ್ಲಿರುವ ಹಾಂಗ್ ಕಾಂಗ್ನಲ್ಲಿರುವ ಸ್ಥಾವರವೊಂದರ ರಿಯಾಕ್ಟರ್ ಹಾಳಾಗಿರುವ ವರದಿ ಬಂದಿದೆ.
ಈ ರಿಯಾಕ್ಟರ್ನ ಐದು ಅನಿಲ ರಾಡ್ ತುಂಡಾಗಿದ್ದು, ಇದರಿಂದ ವಿಕಿರಣ ಅನಿಲ ಸೋರಿಕೆಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಉಷ್ಣಸ್ಥಾವರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ವರದಿಯನ್ನು ತಳ್ಳಿ ಹಾಕಿದ್ದಾರೆ.
ಗುವಾಂಗ್ ಡಾಂಗ್ ಪ್ರಾಂತ್ಯದ ತೈಶಾನ್ ಅಣು ವಿದ್ಯುತ್ ಸ್ಥಾವರದ ರಿಯಾಕ್ಟರ್ ಜಖಂಗೊಂಡಿರುವ ಬಗ್ಗೆ ವರದಿಗಳು ಬಂದಿರುವ ಬಗ್ಗೆ ಆತಂಕ ಮೂಡಿತ್ತು. ಆದರೆ, ಸದ್ಯ ಸ್ಥಾವರ ದುರಸ್ತಿ ಹಂತದಲ್ಲಿದ್ದು, ಯಾವುದೇ ವಿಕಿರಣ ಸೋರಿಕೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೀನಾ ನೀಡಿದ ಸ್ಪಷ್ಟನೆ ಏನು?
''ವಿಕಿರಣಗಳ ಸೋರಿಕೆ ಸಾಧ್ಯವಿಲ್ಲ, ವಿಕಿರಣ ಅನಿಲ ಸೋರಿಕೆಯಾಗದಂತೆ ತಡೆ ನಿರ್ಮಿಸಲಾಗಿದ್ದು, ಅತ್ಯಂತ ಸುರಕ್ಷಿತ ವಿಧಾನ ಅನುಸರಿಸಲಾಗಿದೆ,'' ಎಂದು ಚೀನಾದ ಪರಿಸರ ಖಾತೆ ಸಚಿವಾಲಯವು ತೈಶಾನ್ ಸ್ಥಾವರದ ಬಗ್ಗೆ ಸ್ಪಷ್ಟನೆ ನೀಡಿದೆ.

''ಪ್ರಮುಖ ಘಟಕದಲ್ಲಿ ಸುಮಾರು 60,000ಕ್ಕೂ ಅಧಿಕ ಅನಿಲ ಕೊಳವೆಗಳಿದ್ದು, ಸದ್ಯದ ಘಟನೆಯನ್ನು ಗಣನೆಗೆ ತೆಗೆದುಕೊಂಡರೆ 0.01% ರಷ್ಟು ಹಾಳಾಗಿದೆ ಎನ್ನಬಹುದು ಅಷ್ಟೇ, ಕೊಳವೆ ಜಖಂ ಆಗುವುದು ಸಾಮಾನ್ಯ ಸಂಗತಿಯಾಗಿದ್ದು, ಇದರಿಂದ ವಿಕಿರಣ ಸೋರಿಕೆಯಾಗದಂತೆ ಸುರಕ್ಷಿತ ಕ್ರಮಗಳನ್ನು ಅನುಸರಿಸಲಾಗಿದೆ.

ಕೈಗಾರಿಕೆಗಳಲ್ಲಿ ಬಳಸುವ ಸುರಕ್ಷಿತ ಪರಿಮಿತಿಯೊಳಗೆ ಸ್ಥಾವರದಲ್ಲಿ ಕಾರ್ಯ ನಿರ್ವಹಣೆ ನಡೆಸಲಾಗುತ್ತಿದೆ, ಪರಿಸರಕ್ಕೆ ವಿಷಗಾಳಿ, ವಿಕಿರಣ ಅನಿಲ ಸೋರಿಕೆಯಾಗಿಲ್ಲ,'' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಿಎನ್ಎನ್ ವರದಿ ಪರಿಮಾಣ:
ತೈಶಾನ್ ಪರಮಾಣು ಆಧಾರಿತ ವಿದ್ಯುತ್ ಸ್ಥಾವರರಿಂದ ಅಣುವಿಕಿರಣ ಸೋರಿಕೆಯಾಗಿದೆ ಎಂದು ಸಿಎನ್ಎನ್ ಸಂಸ್ಥೆ ಕಳೆದ ವಾರ ವರದಿ ಮಾಡಿತ್ತು. ಈ ಬಗ್ಗೆ ಅಮೆರಿಕ ಮಾಹಿತಿ ಕಲೆಹಾಕುತ್ತಿದೆ ಎಂದು ಹೇಳಿತ್ತು. ಘಟಕದ ನಿರ್ವಹಣೆ ನಡೆಸುತ್ತಿರುವ ಫ್ರಾನ್ಸ್ ಮೂಲದ ಫ್ರಮಾಟೋಮೆ ಕೂಡಾ ಸ್ಥಾವರದ ಕಾರ್ಯಕ್ಷಮತೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಲಾಗಿತ್ತು.
Electricite de France (EDF) ಒಡೆತನದ ಫ್ರಮಾಟೋಮೆ ನೀಡಿದ ಹೇಳಿಕೆ ಆಧಾರದ ಮೇಲೆ ಯುರೇನಿಯಂ ಅನಿಲ ಕೊಳವೆ ಜಖಂಗೊಂಡಿದ್ದು, ರಿಯಾಕ್ಟರ್ ಹಾಳಾಗಿದೆ ಎಂದು ಸಿಎನ್ಎನ್ ಸುದ್ದಿ ಬಿತ್ತರಿಸಿತ್ತು. ಈ ಹಿಂದೆ ಕೂಡಾ ಅತ್ಯಲ್ಪ ಪ್ರಮಾಣದಲ್ಲಿ ವಿಕಿರಣ ಅನಿಲ ಸೋರಿಕೆಯಾಗಿದ್ದು, ಇದರಿಂದ ಯಾವುದೇ ಹಾನಿಯಾಗಿಲ್ಲ ಎಂದು ತೈಶಾನ್ ಸ್ಥಾವರ ಹೇಳಿಕೊಂಡಿತ್ತು. ಇದೆಲ್ಲ ಆತಂಕದ ವರದಿಗಳಿಗೆ ಚೀನಾ ಫುಲ್ ಸ್ಟಾಪ್ ಇಟ್ಟಿದೆ. (AFP, AP, Reuters)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications