ನಿಷೇಧಿತ ರಷ್ಯನ್ನರ ಅಸ್ತಿ ಮಾರಲು ಕೆನಡಾದಿಂದ ಹೊಸ ಕಾನೂನು
ಟೊರಾಂಟೊ, ಏ. 27: ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ದೇಶದ ಮೇಲೆ ಹಲವು ಪಾಶ್ಚಿಮಾತ್ಯ ದೇಶಗಳು ಶಿಸ್ತಿನ ಕ್ರಮವನ್ನ ತೀವ್ರಗೊಳಿಸುತ್ತಿವೆ. ರಷ್ಯಾ ಮೇಲಿನ ನಿರ್ಬಂಧಗಳು ಇನ್ನಷ್ಟು ಬಿಗಿಗೊಂಡಿವೆ. ವಿವಿಧ ದೇಶಗಳಲ್ಲಿ ರಷ್ಯನ್ ಪ್ರಜೆಗಳು ಹೊಂದಿರುವ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯ ಅಲ್ಲಲ್ಲಿ ನಡೆಯುತ್ತಿದೆ. ರಷ್ಯನ್ನರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿರುವ ಪ್ರಮುಖ ದೇಶಗಳಲ್ಲಿ ಕೆನಡವೂ ಒಂದು. ನಿಷೇಧಿತ ರಷ್ಯನ್ನರ ಆಸ್ತಿಯನ್ಪ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ಮಾರಾಟ ಮಾಡಲೂ ಅನುವು ಮಾಡಿಕೊಡುವ ಹೊಸ ಕಾನೂನನ್ನು ಕೆನಡಾ ಸರಕಾರ ಚಾಲನೆಗೆ ತಂದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಮೊದಲು ನಿಷೇಧಿತ ರಷ್ಯನ್ನರ ಆಸ್ತಿಯನ್ನ ಫ್ರೀಜ್ ಮಾಡಲು ಮತ್ತು ಅವರ ಹಣಕಾಸು ವಹಿವಾಟು ನಿಷೇಧಿಸುವುದಕ್ಕೆ ಮಾತ್ರ ಕೆನಡಾ ಕಾನೂನಿನಲ್ಲಿ ಅವಕಾಶ ಇತ್ತು. ಈಗ ಹೊಸ ಕಾನೂನು ನಿಷೇಧಿತ ರಷ್ಯನ್ನರ ಆಸ್ತಿಗಳನ್ನ ಮಾರಾಟ ಮಾಡಲು ಅವಕಾಶ ಒದಗಿಸುತ್ತದೆ. ವಿಶೇಷ ಆರ್ಥಿಕ ಕ್ರಮಗಳ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಕೆನಡಾ ಸಂಸತ್ತು ಸಮ್ಮತಿ ನೀಡಿದೆ ಎಂದು ನ್ಯಾಷನಲ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ರಷ್ಯಾದ ಹಲವು ಸಿರಿವಂತರು ಅಮೆರಿಕ, ಬ್ರಿಟನ್, ಫ್ರಾನ್ಸ್, ಕೆನಡಾ ಮೊದಲಾದ ದೇಶಗಳಲ್ಲಿ ಸಾಕಷ್ಟು ಆಸ್ತಿಪಾಸ್ತಿ ಖರೀದಿಸಿ ಐಷಾರಾಮಿ ಜೀವನ ನಡೆಸಿದ್ದಾರೆ. ಇಂಥ ಅನೇಕ ರಷ್ಯನ್ನರ ವ್ಯವಹಾರಗಳನ್ನ ವಿವಿಧ ದೇಶಗಳು ನಿಷೇಧಿಸಿವೆ. ಈ ದೇಶಗಳಲ್ಲಿ ನಿಷೇಧಿತ ರಷ್ಯನ್ನರ ಪಟ್ಟಿ ಬೆಳೆಯುತ್ತಲೇ ಇದೆ.

ಇನ್ನು, ರಷ್ಯಾ ದೇಶ ವಿಶ್ವದ ವಿವಿಧ ದೇಶಗಳಲ್ಲಿ ಸುಮಾರು 600 ಬಿಲಿಯನ್ ಡಾಲರ್ (ಸುಮಾರು 46 ಲಕ್ಷಕೋಟಿ ರೂಪಾಯಿ) ಹಣ ಮೌಲ್ಯದ ಆಸ್ತಿಗಳನ್ನ ಇರಿಸಿದೆ. ಚೀನಾ, ಜಪಾನ್, ಫ್ರಾನ್ಸ್, ಜರ್ಮನಿ, ಅಮೆರಿಕ, ಬ್ರಿಟನ್, ಆಸ್ಟ್ರಿಯಾ ಮತ್ತು ಕೆನಡಾ ದೇಶಗಳಲ್ಲಿ ರಷ್ಯಾ ಸರಕಾರಕ್ಕೆ ಸೇರಿದ ಕೋಟ್ಯಂತರ ಮೌಲ್ಯದ ಆಸ್ತಿಗಳಿವೆ. ಹಾಗೆಯೇ, ವಿದೇಶೀ ವಿನಿಮಯ ರಿಸರ್ವ್ ಆಗಿ ಬಹಳಷ್ಟು ಮೊತ್ತವನ್ನೂ ಇರಿಸಿಕೊಂಡಿದೆ. ತನ್ನ ಕರೆನ್ಸಿ ಮೌಲ್ಯ ಕುಸಿದು ಹಣದುಬ್ಬರ ಸ್ಥಿತಿ ನಿರ್ಮಾಣವಾಗದೇ ಇರಲು ರಷ್ಯಾಗೆ ಈ ರಿಸರ್ವ್ ಮೊತ್ತ ಬಹಳ ಮುಖ್ಯವಾಗಿತ್ತು.
ಆದರೆ, ರಷ್ಯಾದ ಈ ಮೀಸಲು ನಿಧಿಗೆ ಸಂಚಕಾರ ಬರುವ ರೀತಿಯಲ್ಲಿ ಅಮೆರಿಕ ಮತ್ತದರ ಮಿತ್ರ ದೇಶಗಳು ಆರ್ಥಿಕ ದಿಗ್ಬಂಧನ ಹಾಕಿವೆ. ಈಗ ವಿದೇಶಗಳಲ್ಲಿರುವ ರಷ್ಯಾ ಸರಕಾರದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಚೀನಾದಂಥ ಕೆಲ ದೇಶಗಳು ಬಿಟ್ಟರೆ ಉಳಿದ ದೇಶಗಳು ತಮ್ಮಲ್ಲಿರುವ ರಷ್ಯನ್ ಆಸ್ತಿಯನ್ನ ವಶಕ್ಕೆ ತೆಗೆದುಕೊಳ್ಳಲು ಆರಂಭಿಸಿವೆ. ಈಗ ರಷ್ಯಾಗೆ ನಿಜವಾದ ಬಿಸಿ ತಾಕಲು ಶುರುವಾಗಿದೆ ಎಂದು ತಜ್ಞರು ಹೇಳುತ್ತಾರೆ.
(ಒನ್ಇಂಡಿಯಾ ಸುದ್ದಿ)
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications