California Wildfire: ಬೆಂಕಿ ಬಿದ್ದ ಮನೆಗಳಿಗೆ ನುಗ್ಗುತ್ತಿರುವ ಕಳ್ಳರು, ಶುರುವಾಯ್ತು ಹೊಸ ತಲೆನೋವು!
ಅಮೆರಿಕ ಕಾಡಿನ ಬೆಂಕಿ ಅಟ್ಟಹಾಸಕ್ಕೆ ಬೆಂದು ಹೋಗಿದ್ದು, ಜನರು ಜೀವ ಉಳಿಸಿಕೊಂಡು ಬದುಕುವುದೇ ಕಷ್ಟವಾಗಿದೆ. ಹಾಲಿವುಡ್ ತವರು & ಸಿಲಿಕಾನ್ ವ್ಯಾಲಿ ಎಂಬ ಖ್ಯಾತೆ ಪಡೆದ ಕ್ಯಾಲಿಫೋರ್ನಿಯ & ಲಾಸ್ ಏಂಜಲೀಸ್ ಪ್ರದೇಶದಲ್ಲಿ ಬೆಂಕಿ ಧಗಧಗ ಹೊತ್ತಿ ಉರಿಯುತ್ತಿದೆ. ಅತಿಹೆಚ್ಚು ಆದಾಯ ಬರುವ & ಅತಿಹೆಚ್ಚು ಶ್ರೀಮಂತರು ಇರುವ ಪ್ರದೇಶದಲ್ಲೇ ಕಾಡ್ಗಿಚ್ಚು ಈಗ ಧಗಧಗ ಹೊತ್ತಿ ಉರಿಯುತ್ತಿದೆ. ಇಂತಹ ಸಮಯದಲ್ಲೇ ಹೊಸ ಸಮಸ್ಯೆ ಶುರುವಾಗಿದೆ.
ಚಳಿಗಾಲದ ಸಮಯದಲ್ಲಿ ಕಾಡಿಗೆ ಬೆಂಕಿ ಬೀಳಲು ಹೇಗೆ ಸಾಧ್ಯ? ಅನ್ನೋ ಪ್ರಶ್ನೆ ಈಗ ಭಾರಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಇಷ್ಟೆಲ್ಲಾ ತಿಕ್ಕಾಟದ ನಡುವೆ ಕ್ಯಾಲಿಫೋರ್ನಿಯ & ಲಾಸ್ ಏಂಜಲೀಸ್ ಪ್ರದೇಶಗಳು ಇದೀಗ ನಡುಗಿ ಹೋಗಿವೆ. ಲಕ್ಷಾಂತರ ಜನರು ಊರು ಬಿಟ್ಟು ಓಡಿ ಹೋಗಿದ್ದರೆ, ಹತ್ತಾರು ಸಾವಿರ ಕಟ್ಟಡಗಳು ಸುಟ್ಟು ಭಸ್ಮವಾಗಿವೆ. ಪರಿಸ್ಥಿತಿ ಕೈಮೀರಿದ ವೇಳೆ ಹೊಸ ಸಮಸ್ಯೆ ಇದೀಗ ಕಾಡುತ್ತಿದೆ. ಬೆಂಕಿ ಬಿದ್ದ ಮನೆಗಳಿಗೆ ನುಗ್ಗುತ್ತಿರುವ ಕಳ್ಳರು ಹೊಸ ಭಯ ಹುಟ್ಟಿಸಿದ್ದಾರೆ!

ಕಾಡಿನ ಬೆಂಕಿ ಜೊತೆ ಕಳ್ಳರ ಕಾಟ!
ಹೌದು, ಕ್ಯಾಲಿಫೋರ್ನಿಯ & ಲಾಸ್ ಏಂಜಲೀಸ್ ಪ್ರದೇಶಗಳು ಧಗಧಗ ಹೊತ್ತಿ ಉರಿಯುವಾಗ ಕಳ್ಳರು ಈ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದಾರೆ. 20,000ಕ್ಕೂ ಹೆಚ್ಚು ಕಟ್ಟಡ & ಮನೆಗಳು ಇದೀಗ ಕಾಡಿನ ಬೆಂಕಿಗೆ ಬಲಿಯಾಗಿವೆ. ಹೀಗೆ ಸುಟ್ಟು ಭಸ್ಮವಾಗಿರುವ ಮನೆಗಳು & ಕಟ್ಟಡಗಳಿಗೆ ನುಗ್ಗುತ್ತಿರುವ ಕಳ್ಳರ ಪಡೆ ಲೂಟಿ ಮಾಡಲು ಶುರು ಮಾಡಿದೆ ಎಂಬ ಭಾರಿ ಗಂಭೀರ ಆರೋಪ ಕೇಳಿ ಬಂದಿದೆ.
ಸಾವಿರಾರು ಕಟ್ಟಡಗಳು ಸುಟ್ಟು ಭಸ್ಮವಾಗಿದ್ದು, ಮನೆಗಳ ಮಾಲೀಕರು ಕಾಡ್ಚಿಚ್ಚಿನ ಭಯ & ಆತಂಕದ ನಡುವೆ ಊರು ಖಾಲಿ ಮಾಡಿ ಹೊರಗೆ ಹೋಗಿದ್ದಾರೆ. ಈ ಸಮಯದಲ್ಲೇ ಮನೆ, ಕಟ್ಟಡಗಳ ಒಳಗೆ ಇರುವ ಬೆಲೆಬಾಳುವ ವಸ್ತುಗಳು ಹಾಗೂ ಹಣ ಮತ್ತಿತರ ವಸ್ತುಗಳನ್ನ ಕದ್ದು ಪರಾರಿ ಆಗುತ್ತಿದ್ದಾರೆ ಕಳ್ಳರು ಎಂಬ ಆರೋಪ ಕೇಳಿ ಬಂದಿದೆ. ಈ ರೀತಿ ಕಳ್ಳತನ ಮಾಡ್ತಿದ್ದ ಹತ್ತಾರು ಕಳ್ಳರನ್ನು ಈಗಾಗಲೇ ಬಂಧಿಸಿ ಕಂಬಿ ಹಿಂದೆ ತಳ್ಳಲಾಗಿದೆ. ಮತ್ತಷ್ಟು ಕಳ್ಳರು ಇದೇ ರೀತಿ ಆ ಭಾಗದಲ್ಲಿ ಇರುವ ಅನುಮಾನ ಮೂಡಿದ್ದು, ಪೊಲೀಸರು ಅಲರ್ಟ್ ಆಗಿದ್ದಾರೆ.
ಅಮೆರಿಕ ಕಾಡ್ಗಿಚ್ಚು ಮತ್ತಷ್ಟು ಭೀಕರ
ಹೀಗೆ ಹಬ್ಬಿರುವ ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಕಾಡ್ಗಿಚ್ಚು ಇದೀಗ ಅಂತಿಮವಾಗಿ ಘನಘೋರ ಹಂತಕ್ಕೆ ಬಂದು ನಿಂತಿದೆ. ಜನ ಕೂಡ ಭಯಪಟ್ಟು ನರಳುತ್ತಿದ್ದು, ಮುಂದಿನ ಪರಿಸ್ಥಿತಿ ಹೇಗೆ? ಅನ್ನೋ ಚಿಂತೆಯಲ್ಲಿ ಇದ್ದಾರೆ. ಜೋ ಬೈಡನ್ ಆಡಳಿತ & ಸರ್ಕಾರ ಈಗಿನ ಪರಿಸ್ಥಿತಿ ನಿಭಾಯಿಸಲು ನರಳುತ್ತಿದೆ ಎಂಬ ಆರೋಪ ಕೂಡ ಇದೆ. ಇಷ್ಟೆಲ್ಲದರ ನಡುವೆ ಈಗ ಮತ್ತೊಂದು ಕೆಟ್ಟ ವಾತಾವರಣ ಇದೀಗ ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ತಲೆದೂರಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications