ದೆವ್ವಗಳ ಕಾಟಕ್ಕೆ ಹೆದರಿ ಅಧಿಕೃತ ನಿವಾಸ ತೊರೆದ ಬ್ರೆಜಿಲ್ ಅಧ್ಯಕ್ಷ!!
ಬ್ರೆಜಿಲ್ ನಲ್ಲಿ ಈವರೆಗಿನ ಎಲ್ಲಾ ಅಧ್ಯಕ್ಷರಿಗೂ ಆ ಅಧಿಕೃತ ನಿವಾಸದಲ್ಲಿ ದೆವ್ವಗಳ ಕಾಟವಿತ್ತೆಂದು ದೂರಿದ್ದರು ಎಂದು ಹೇಳಿದ ಮೈಕಲ್ ಟೆಮೆರ್.
ಬ್ರೆಜಿಲಿಯಾ, ಮಾರ್ಚ್ 13: ತಮಗೆ ನೀಡಲಾಗಿರುವ ಅಧಿಕೃತ ನಿವಾಸದಲ್ಲಿ ದೆವ್ವಗಳ ಕಾಟವಿದೆಯೆಂದು ಆರೋಪಿಸಿರುವ ಬ್ರೆಜಿಲ್ ನ ಅಧ್ಯಕ್ಷ ಮೈಕಲ್ ಟೆಮರ್ ಅವರು, ಸೋಮವಾರ (ಮಾ. 13) ಆ ಮನೆಯನ್ನು ತೊರೆದಿರುವುದಾಗಿ ಟೆಲಿಗ್ರಾಫ್ ವರದಿ ಮಾಡಿದೆ.
ಪ್ಯಾಲೇಸಿನೋ ಡ ಅಲ್ವಡೋರಾ ಎಂಬ ಹೆಸರಿನ ಅಧ್ಯಕ್ಷರ ಮನೆಯಲ್ಲಿ ಮೈಕಲ್ ಅವರು, ತಮ್ಮ ಪತ್ನಿ ಮಾರ್ಸಿಲಾ ಹಾಗೂ ಏಳು ವರ್ಷದ ಪುತ್ರ ಮೈಕಲ್ ಜಿನ್ಹೋ ಜತೆಗೆ ವಾಸವಾಗಿದ್ದರು.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮೈಕಲ್, ''ಆ ಮನೆಯಲ್ಲಿ ದೆವ್ವಗಳ ಕಾಟವಿದೆಯೆಂದು ಹಿಂದಿನ ಅಧ್ಯಕ್ಷರು ಹೇಳುತ್ತಿದ್ದರು. ಆದರೆ, ನಾನು ಅಂಥವುಗಳನ್ನು ನಿರ್ಲಕ್ಷಿಸಿದ್ದೆ. ಆದರೆ, ಇತ್ತೀಚೆಗೆ ಮನೆಯಲ್ಲಿರುವಾಗ ನನಗೆ ವಿಚಿತ್ರ ಅನುಭವಗಳಾಗುತ್ತಿದ್ದವು. ರಾತ್ರಿ ವೇಳೆ ನಿದ್ರೆ ಸರಿಯಾಗಿ ಆಗುತ್ತಿರಲಿಲ್ಲ. ಚಿತ್ರ ವಿಚಿತ್ರವಾದ ಅನುಭವಗಳಾಗಿವೆ. ಒಟ್ಟಾರೆಯಾಗಿ ಆ ಮನೆಯಲ್ಲಿ ನೆಗೆಟಿವ್ ಎನರ್ಜಿ ಇರುವುದು ಖಾತ್ರಿಯಾಗಿರುವುದರಿಂದ ನಾನು ಆ ಮನೆಯಿಂದ ಹೊರಬಂದಿದ್ದೇನೆ'' ಎಂದು ಹೇಳಿದ್ದಾರೆ.
ತಮ್ಮ ಮಾತುಗಳನ್ನು ಮುಂದುವರಿಸಿರುವ ಅವರು, ''ನನ್ನ ಅನುಭವಕ್ಕೆ ಏನು ಬಂದಿದೆಯೇ ಅದೇ ಅನುಭವಗಳು ನನ್ನ ಪತ್ನಿಗೂ ಆಗಿವೆ. ಇದೇ ನಮಗೆ ಆ ಮನೆಯ ಬಗ್ಗೆ ಬೇಸರ ಬರಲು ಕಾರಣವಾಗಿದೆ'' ಎಂದು ಅವರು ತಿಳಿಸಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications