ಯುವತಿ ಸೂಸೈಡ್ ಲೈವ್ ವಿಡಿಯೋಗೆ ಪೆರಿಸ್ಕೋಪ್ ಬಳಕೆ
ಪ್ಯಾರೀಸ್, ಮೇ 13: ಈ ಸುದ್ದಿ ಓದಿದರೆ 'ತಂತ್ರಜ್ಞಾನದ ದುರ್ಬಳಕೆಯ ಪರಮಾವಧಿ' ಎನ್ನಬಹುದು. ಸೆಲ್ಫಿ ತೆಗೆದುಕೊಳ್ಳಲು ಹೋಗಿ ರೈಲು ಡಿಕ್ಕಿ ಹೊಡೆದು ಸಾಯುವವರು, ಎತ್ತರದ ಪ್ರದೇಶದಿಂದ ಆಯ ತಪ್ಪಿ ಬೀಳುವವರ ಸುದ್ದಿ ಕೇಳಿರುತ್ತೀರಿ, ಆದರೆ, ಈಕೆ ಸೂಸೈಡ್ ನ ಲೈವ್ ವಿಡಿಯೋ ಮೂಲಕ ಹಂಚಿದ್ದಾಳೆ ನೋಡಿ...
ಪ್ರೇಮಿಯನ್ನು ನಂಬಿ ಆತ್ಯಾಚಾರಕ್ಕೊಳಗಾಗಿ ಮೋಸ ಹೋದ ಯುವತಿಯೊಬ್ಬಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಯ ಲೈವ್ ದೃಶ್ಯಗಳನ್ನು ಪೆರಿಸ್ಕೋಪ್ ಅಪ್ಲಿಕೇಷನ್ ಬಳಸಿಕೊಂಡು ಚಿತ್ರೀಕರಿಸಿ, ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿದ್ದಾಳೆ.[ಕ್ರೈಂ ವರದಿಗೆ ಪೆರಿಸ್ಕೋಪ್ ಬಳಸಿ : ಬೆಂಗಳೂರು ಪೊಲೀಸ್ ಆಯುಕ್ತ]
19 ವರ್ಷದ ಯುವತಿ ಅತ್ಯಾಚಾರಕ್ಕೊಳಗಾದ ಕಾರಣ ಮನನೊಂದು ಆತ್ಮಹತ್ಯೆಗೆ ನಿರ್ಧರಿಸಿದ್ದಾಳೆ. ಪ್ಯಾರಿಸ್ ನ ಸಬ್ ಅರ್ಬನ್ ಈಗ್ಲಿ ಸ್ಟೇಷನ್ ನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಶರಣಾಗಿದ್ದಾಳೆ.
ಆದರೆ, ಸಾಯುವುದಕ್ಕೂ ಮುನ್ನ ತನ್ನ ಮೇಲೆ ಅತ್ಯಾಚಾರ ಮಾಡಿದ ಆರೋಪಿಯ ಹೆಸರನ್ನು ಹೇಳಿದ್ದಾಳೆ. ಆತ ನೀಡಿರುವ ಸ್ನಾಪ್ ಚಾಟ್ ಸಂದೇಶ, ಇನ್ನಿತ್ತರ ವಿವರಗಳನ್ನು ಬಹಿರಂಗಪಡಿಸಿದ್ದಾಳೆ.

ಪೆರಿಸ್ಕೋಪ್ ಮೂಲಕ ಲೈವ್ ವೀಕ್ಷಣೆಗೆ ಅವಕಾಶ
ಮೇ 11ರಂದು ನಡೆದ ಈ ಘಟನೆಯಲ್ಲಿ ಪೆರಿಸ್ಕೋಪ್ ಮೂಲಕ ಲೈವ್ ವೀಕ್ಷಣೆ ಆಕೆ ಅವಕಾಶ ನೀಡಿದ್ದಾಳೆ. ಕೆಲವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ನೆರವಿಗಾಗಿ ಕೋರಿದ್ದಾರೆ. ಆದರೆ, ಪೊಲೀಸರು ಯುವತಿ ಇರುವ ಸ್ಟೇಷನ್ ಬಳಿ ಬರುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸ್ಮಾರ್ಟ್ ಫೋನ್ ನಲ್ಲಿ ಬಳಸಬಹುದಾದ ಪೆರಿಸ್ಕೋಪ್
ಸ್ಮಾರ್ಟ್ ಫೋನ್ ನಲ್ಲಿ ಬಳಸಬಹುದಾದ ಪೆರಿಸ್ಕೋಪ್ ಅಪ್ಲಿಕೇಶನ್ ಮೂಲಕ ಲೈವ್ ವಿಡಿಯೋ ತುಣುಕು ಪ್ರಸಾರ ಮಾಡಬಹುದು. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನ ಜೊತೆಗೆ ಹೊಂದಿಕೊಂಡಂತೆ ಸಿಗುವ ಪೆರಿಸ್ಕೋಪ್ ಮೂಲಕ ಲೈವ್ ವಿಡಿಯೋ ಸೆರೆಹಿಡಿಯಬಹುದು. ಈ ವಿಡಿಯೋ 24 ಗಂಟೆಗಳ ಕಾಲ ಸೇವ್ ಆಗಿರುತ್ತದೆ.

ಕಾರ್ಯಕ್ರಮದ ಲೈವ್ ವಿಡಿಯೋ ಪ್ರಸಾರಕ್ಕೆ ಬಳಕೆ
ಬೆಂಗಳೂರು ಪೊಲೀಸರು ಟ್ರಾಫಿಕ್ ಲೈವ್ ಅಪ್ಡೇಟ್ ಸೇರಿದಂತೆ ಕೆಲವು ಉಪಯುಕ್ತ ಮಾಹಿತಿ ನೀಡಲು ಈ ವಿಡಿಯೋ ಅಪ್ಲಿಕೇಷನ್ ಬಳಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಅಪ್ಲಿಕೇಷನ್ ಈ ರೀತಿ ಬಳಕೆಯಾಗಿರುವುದು ಎಚ್ಚರಿಕೆ ಗಂಟೆಯಾಗಿದೆ. ಅಲ್ಲದೆ, ಈ ಬಗ್ಗೆ ಯಾವ ರೀತಿ ಜಾಗೃತಿ ಮೂಡಿಸಬಹುದು ಎಂಬುದು ಸವಾಲಾಗಿದೆ.

ಜನರಿಗೆ ಅವನ ಬಗ್ಗೆ ತಿಳಿಯಲಿ ಎಂದಿರುವ ಯುವತಿ
ಜನರಿಗೆ ಅವನ ಬಗ್ಗೆ ತಿಳಿಯಲಿ ಎಂದಿರುವ ಯುವತಿ, ಪೆರಿಸ್ಕೋಪ್, ಸ್ನಾಪ್ ಚಾಟ್, ಟ್ವಿಟ್ಟರ್ ಬಳಸಿ ಫ್ರೆಂಚ್ ಭಾಷೆಯಲ್ಲಿ ತನ್ನ ನೋವು ತೋಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ತನ್ನ ಆಪ್ತರಿಗೆ ವಿಷಯ ತಿಳಿಸಿದ್ದಾಳೆ. ನೆರವಿಗೆ ಧಾವಿಸುವಷ್ಟರಲ್ಲಿ ಅನಾಹುತ ಸಂಭವಿಸಿದೆ. ಯುವತಿ ಹಾಕಿರುವ ಟ್ವಿಟ್ಟರ್ ಸ್ವಾಮ್ಯದ ಪೆರಿಸ್ಕೋಪ್ ವಿಡಿಯೋ ಈಗ ಲಭ್ಯವಿಲ್ಲ. ಆದರೆ, ಆಕೆ ಮಾತನಾಡಿದ ತುಣುಕುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೊಳಲ್ಪಟ್ಟಿವೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications