ಬಾಗ್ದಾದಿ ಅಂತ್ಯ ಸನ್ನಿಹಿತ: ಇರಾಕ್ ಸೇನೆ ನಿರ್ಣಾಯಕ ಹೋರಾಟ
ಬೆಂಗಳೂರು, ನವೆಂಬರ್ 3: ಐಎಸ್ ಐಎಸ್ ನ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿಯನ್ನು ಇರಾಕಿ ಸೇನೆ ಸುತ್ತುವರಿದಿದೆ ಎಂಬ ವರದಿ ಹಿನ್ನೆಲೆಯಲ್ಲಿ ಆಡಿಯೋ ಕ್ಲಿಪ್ ವೊಂದು ಹರಿದಾಡುತ್ತಿದೆ. ಅಲ್ ಬಾಗ್ದಾದಿ ಆಡಿಯೋ ಕ್ಲಿಪ್ ಅನ್ನು ಐಎಸ್ ಐಎಸ್ ಬಿಡುಗಡೆ ಮಾಡಿದ್ದು, ಅದರಲ್ಲಿ ಆತ ಮಾತನಾಡಿದ್ದಾನೆ. 'ಅಲ್ಲಾ ಹಾಗೂ ಆತನ ಸಂದೇಶ ಹೊತ್ತುತಂದವರು ನಮಗೆ ನೀಡಿದ ಪ್ರಮಾಣ ಇದು' ಎಂದಿದ್ದಾನೆ.
ಪಶ್ಚಿಮ ರಾಷ್ಟ್ರಗಳಲ್ಲಿ ಮುಸ್ಲಿಮೇತರರನ್ನು ಕೊಲ್ಲುವಂತೆ ಐಎಸ್ ಐಎಸ್ ಪರವಾಗಿ ಕೆಲಸ ಮಾಡುವವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.ಅಲ್ಲಿ ಮುಸ್ಲಿಮೇತರರನ್ನು ಕೊಲ್ಲುವುದು ಏಕೆ ಮುಖ್ಯ ಎಂದು ಪ್ರತಿಪಾದಿಸುವ ಪದ್ಯಗಳನ್ನು ಸಹ ಹಾಕುತ್ತಿದ್ದಾರೆ. 'ಇದು ಸುನ್ನಿ ಹಾಗೂ ಶಿಯಾ ಮುಸ್ಲಿಮರ ಮಧ್ಯದ ಯುದ್ಧ' ಎಂದು ಬಾಗ್ದಾದಿ ಆಡಿಯೋದಲ್ಲಿ ಹೇಳಿದ್ದಾನೆ.[ಭಾರತದಲ್ಲಿ ಎಚ್ಚರಿಕೆಯಿಂದ ಇರುವಂತೆ ಅಮೆರಿಕ ಪ್ರಜೆಗಳಿಗೆ ಸೂಚನೆ]

ಟರ್ಕಿ ಮೇಲೆ ದಾಳಿ: ಇರಾಕಿ ಸೇನೆ ದಾಳಿ ನಡೆಸುವ ವೇಳೆ ತನ್ನ ಹೋರಾಟಗಾರರನ್ನು ಸಂಘಟಿಸಲು ಆತ ಯತ್ನಿಸುತ್ತಿದ್ದಾನೆ ಎಂದು ಅಭಿಪ್ರಾಯ ಪಡಲಾಗಿದೆ. ಟರ್ಕಿ ದೇಶದ ಮೇಲೆ ದಾಳಿ ನಡೆಸುವಂತೆ ಆತ ಕರೆ ನೀಡಿದ್ದಾನೆ. ಇರಾಕ್ ದೇಶವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಸಲುವಾಗಿ ಶಿಯಾ ಮುಸ್ಲಿಮರು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಾಗ್ದಾದಿ ಆಡಿಯೋದಲ್ಲಿ ಹೇಳಿದ್ದಾನೆ.
ನಾನು ಹತ್ಯೆಯಾದರೂ ಈ ಹೋರಾಟ ಮುಂದುವರಿಸಬೇಕು. ಜಗತ್ತಿನ ವಿವಿಧೆಡೆ ಇರುವ ಐಎಸ್ ಐಎಸ್ ಹೋರಾಟಗಾರರು ನನ್ನ ಸಾವಿನ ನಂತರವೂ ಕಾರ್ಯಾಚರಣೆ ಮುಂದುವರಿಸಬೇಕು. ಇತ್ತೀಚೆಗೆ ಸಂಘಟನೆಯ ಹಲವರು ಸಾವನ್ನಪ್ಪಿದ್ದಾರೆ. ಅದರೆ ನಾವು ದುರ್ಬಲರಾಗಿಲ್ಲ ಎಂದು ಬಾಗ್ದಾದಿ ಹೇಳಿದ್ದಾನೆ.[ಸೆಕ್ಸ್ ದಾಸಿಯರು -ಇರಾಕಿ ಉಗ್ರರ ಪ್ರಮುಖ ಅಸ್ತ್ರ]
ಎರಡು ವರ್ಷದ ನಂತರ ಮೊಸುಲ್ ಗೆ: ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇರಾಕ್ ಪಡೆ ಮೊಸುಲ್ ಪ್ರವೇಶಿಸಿದೆ. ಬಾಗ್ದಾದಿ ಅಲ್ಲೇ ಅಡಗಿರಬಹುದು ಎಂಬ ಶಂಕೆಯಿದೆ. ಹಲವರ ಪ್ರಕಾರ ಬಾಗ್ದಾದಿಯ ಅಂತ್ಯ ಸನ್ನಿಹಿತವಾಗಿದೆ. ಬಾಗ್ದಾದಿಯ ಸಾವಿನಿಂದ ಐಎಸ್ ಐಎಸ್ ದುರ್ಬಲಗೊಳ್ಳುತ್ತದೆ. ಮತ್ತು ತಕ್ಷಣವೇ ಹೊಸ ಖಲೀಫನನ್ನ ಆಯ್ಕೆ ಮಾಡಬೇಕಾಗುತ್ತದೆ.
ಐಎಸ್ ಐಎಸ್ ನ ಮಣಿಸಿ, ಬಾಗ್ದಾದಿಯನ್ನು ಕೊಲ್ಲುವ ವಿಶ್ವಾಸದಲ್ಲಿದೆ ಇರಾಕಿ ಸೇನೆ. ಐಎಸ್ ಐಎಸ್ ಈಗಾಗಲೇ ತನ್ನ ಹಲವು ಹೋರಾಟಗಾರರನ್ನು ಕಳೆದುಕೊಂಡಿದೆ. ಸದ್ಯಕ್ಕೆ ಮೊಸುಲ್ ನಲ್ಲಿ ಐದು ಸಾವಿರ ಮಂದಿ ಹೋರಾಟಗಾರರಿದ್ದರೆ, ಹೊರ ಭಾಗದಲ್ಲಿ ಸಾವಿರದೈನೂರು ಮಂದಿ ಇದ್ದಾರೆ. ಹಲವರು ತಪ್ಪಿಸಿಕೊಂಡು ಹೋಗುವ ಯತ್ನದಲ್ಲಿದ್ದಾರೆ. ಆದರೆ ಸಾಧ್ಯವಾಗುತ್ತಿಲ್ಲ.[ಐಸಿಸ್ ನ ಲೈಂಗಿಕ ಕ್ರೌರ್ಯಕ್ಕೆ ನಲುಗಿದವಳ ಕರುಳು ಹಿಂಡುವ ಕಥೆ]
ಬಾಗ್ದಾದಿಯ ಸಾವಿನಿಂದ ಐಎಸ್ ಐಎಸ್ ದುರ್ಬಲವಾಗುವುದು ಹೌದು. ಆದರೆ ಇದರಿಂದ ಸಂಘಟನೆಯು ಹೋರಾಟದ ಮುಖ್ಯ ಭೂಮಿಕೆಗೆ ಬರಬಹುದು. ಐಎಸ್ ಐಎಸ್ ಪರವಾದ ಹೋರಾಟಗಾರರು ಇರಾಕ್ ಹಾಗೂ ಸಿರಿಯಾದ ಹೊರಭಾಗದಲ್ಲಿ ದಾಳಿ ಮಾಡಬಹುದು. ಇನ್ನೂ ಯುದ್ಧ ಬಾಕಿಯಿದೆ. ಪಶ್ಚಿಮ ರಾಷ್ಟ್ರಗಳನ್ನು ಗುರಿ ಮಾಡಿಕೊಂಡು ಹೆಚ್ಚಿನ ದಾಳಿಗಳಾಗಬಹುದು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications