50 ಕೋಟಿ ಯಾಹೂ ಅಕೌಂಟ್ ಹ್ಯಾಕ್: ಸರಕಾರಿ ದಾಳಿ ಎಂದ ಕಂಪೆನಿ
ವಾಷಿಂಗ್ಟನ್, ಸೆಪ್ಟೆಂಬರ್ 23: 50 ಕೋಟಿ ಯಾಹೂ ಅಕೌಂಟ್ ಗಳ ಮಾಹಿತಿ ಸೋರಿಕೆಯಾಗಿದೆ ಎಂಬುದನ್ನು ಯಾಹೂ ಖಾತ್ರಿ ಪಡಿಸಿದೆ. ಇದು "ಸರಕಾರಿ ಪ್ರಾಯೋಜಿತ'" ದಾಳಿ ಎಂದು ಹೇಳಿದೆ. 2014ರ ನಂತರ ಕಂಪೆನಿ ನೆಟ್ ವರ್ಕ್ ನಿಂದ ಮಾಹಿತಿ ಕಳವಾಗಿದೆ ಎಂದು ಯಾಹೂ ಕಂಪೆನಿಯ ಮುಖ್ಯ ಮಾಹಿತಿ ರಕ್ಷಣಾ ಅಧಿಕಾರಿ ಬಾಬ್ ಲಾರ್ಡ್ ಹೇಳಿರುವುದಾಗಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಹೆಸರು, ಇ ಮೇಲ್ ಅಡ್ರೆಸ್, ದೂರವಾಣಿ ಸಂಖ್ಯೆ, ಜನ್ಮದಿನಾಂಕ, ಪಾಸ್ ವರ್ಡ್ ನಂಥ ಮಾಹಿತಿಯನ್ನು ಕಳವು ಮಾಡಲಾಗಿದೆ. ಹಣಕಾಸು ಪಾವತಿ, ಬ್ಯಾಂಕ್ ಮಾಹಿತಿಗಳು ಆ ನೆಟ್ ವರ್ಕ್ ನಲ್ಲಿ ಇರಲಿಲ್ಲ ಎಂದು ಲಾರ್ಡ್ ತಿಳಿಸಿದ್ದಾರೆ. ಕಾನೂನು ಕ್ರಮಕ್ಕೆ ಆಲೋಚಿಸುತ್ತಿರುವುದಾಗಿ ಯಾಹೂ ಕಂಪೆನಿ ತಿಳಿಸಿದೆ. ಕೋಟ್ಯಂತರ ಅಕೌಂಟ್ ಗಳು ಹ್ಯಾಕ್ ಆಗಿವೆ ಎಂಬುದನ್ನು ಗುರುವಾರ ಯಾಹೂ ಖಾತ್ರಿ ಪಡಿಸಿತ್ತು.[ಎಂಟಿಆರ್ ಆಹಾರ, ಮೈಸೂರು ಸ್ಯಾಂಡಲ್ ಸೋಪ್ ಯುಎಸ್ ನಲ್ಲಿ ತಿರಸ್ಕೃತ]

ಕಂಪೆನಿಯ ಮುಖ್ಯ ಅಧಿಕಾರಿಯೊಬ್ಬರು ಹೇಳುವಂತೆ, ಇದರ ತೊಂದರೆ ತಿಂಗಳುಗಳ ಹಿಂದೆಯೇ ಆಗಿದೆ. ಹೆಚ್ಚಿನ ನಷ್ಟ ಆಗದಂತೆ ಯಾಹೂ ಕಂಪೆನಿಯು ಎಲ್ಲ ಅಕೌಂಟ್ ಗಳ ಪಾಸ್ ವರ್ಡ್ ಬದಲಿಸಿಕೊಳ್ಳುವಂತೆ ಸೂಚಿಸಿದೆ. ಇದೀಗ ಈ ಪಾಸ್ ವರ್ಡ್ ಬಳಸಿ ಯಾಹೂ ಹೊರತುಪಡಿಸಿ ಇತರ ಸಾವಿರಾರು ವೆಬ್ ಸೈಟ್ ಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ.
ಸೈಬರ್ ಪಾತಕಿಗಳು ತುಂಬ ಮುಂದುವರಿದ ತಂತ್ರಜ್ಞಾನ ಬಳಸಿಕೊಂಡು ಬಳಕೆದಾರರು ಬೇರೆ ವೆಬ್ ಸೈಟ್ ನಲ್ಲಿ ಎಲ್ಲೆಲ್ಲಿ ಪಾಸ್ ವರ್ಡ್ ಗಳನ್ನು ಬಳಸಿದ್ದಾರೆ ಎಂದು ತಿಳಿದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.[ಬೆಂಗಳೂರಲ್ಲಿ 5 ಮಳಿಗೆ ತೆರೆಯಲಿದೆ ಮೆಟ್ರೊ ಕ್ಯಾಷ್ ಅಂಡ್ ಕ್ಯಾರಿ]
ಇಅದರಿಂದ ಯಾಹೂ ಕಂಪೆನಿಯ 4.8 ಬಿಲಿಯನ್ ಅಮೆರಿಕಾ ಡಾಲರ್ ವ್ಯವಹಾರದ ಮೇಲೆ ಪರಿಣಾಮ ಬೀರಿದೆ. "ಬೇರೆ ಕಂಪೆನಿಯೊಂದಿಗೆ ಸೇರುವಾಗ ಅಥವಾ ಖರೀದಿಸುವಾಗ ಕೆಲವು ಮಟ್ಟದ ರಿಸ್ಕ್ ಇರುತ್ತದೆ. ಬಾಕಿ ಇರುವ ಕಾನೂನು ಹೋರಾಟ, ಕಳಪೆ ಗುಣಮಟ್ಟದ ಉತ್ಪಾದನೆಗಳು ಅಥವಾ ನಿಯಮಗಳ ಉಲ್ಲಂಘನೆ ಎಲ್ಲ ಸಾಧ್ಯವಿರುತ್ತದೆ" ಎಂದು ಕಂಪೆನಿಯ ಉಪಾಧ್ಯಕ್ಷ ಸ್ಟೀವನ್ ಗ್ರಾಸ್ ಮನ್ ಫಾಕ್ಸ್ ನ್ಯೂಸ್ ಗೆ ತಿಳಿಸಿದ್ದಾರೆ.
ಸೈಬರ್ ಸಂಬಂಧಿತ ಸಮಸ್ಯೆಗಳು ಪಟ್ಟಿಯ ಮೊದಲ ಸ್ಥಾನದಲ್ಲಿದೆ. ಡೇಟಾ ಕಳವು ವಿಚಾರದಲ್ಲಿ ಕಂಪೆನಿಗಳು ಬಲಿಪಶುಗಳಾಗುತ್ತಿವೆ. ಈ ಸಮಸ್ಯೆ ಎಷ್ಟು ಗಂಭೀರವಾಗಿದೆಯೋ ಅಷ್ಟು ಪ್ರಾಮುಖ್ಯತೆ ಅದಕ್ಕೆ ಸಿಗುತ್ತಿಲ್ಲ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ!












Click it and Unblock the Notifications