Zomato, Swiggy: ದೀಪಾವಳಿ ಸಮಯದಲ್ಲಿ ಜನರಿಗೆ ಶುಲ್ಕ ಹೆಚ್ಚಳದ ಬರೆ
ನವದೆಹಲಿ, ಅಕ್ಟೋಬರ್ 24: ದೀಪಾವಳಿ ಹಬ್ಬದ ಸಮಯದಲ್ಲಿ ಭಾರತದ ಆಹಾರ ವಿತರಣಾ ಸಂಸ್ಥೆಗಳಾದ ಝೊಮ್ಯಾಟೊ ಮತ್ತು ಸ್ವಿಗ್ಗಿ ಗ್ರಾಹಕರಿಗೆ ಶುಲ್ಕದ ಬರೆ ಹಾಕಿದೆ. ಪ್ಲಾಟ್ ಫಾರ್ಮ್ ಶುಲ್ಕವನ್ನು ಏರಿಕೆ ಮಾಡಲಾಗಿದೆ. 2023ರಲ್ಲಿ ಎರಡೂ ಸಂಸ್ಥೆಗಳು ಈ ಮಾದರಿ ಶುಲ್ಕವನ್ನು ಜಾರಿಗೆ ತಂದಿದ್ದವು. ಆದರೆ ಈಗ ಹಬ್ಬ ಎದುರಾದ ಸಂದರ್ಭದಲ್ಲಿಯೇ ಶುಲ್ಕವನ್ನು ಏರಿಕೆ ಮಾಡಲಾಗಿದೆ.
ಝೊಮ್ಯಾಟೊ ಮತ್ತು ಸ್ವಿಗ್ಗಿ ಪ್ಲಾಟ್ ಫಾರ್ಮ್ ಶುಲ್ಕವನ್ನು 10 ರೂ. ಗಳಿಗೆ ಏರಿಕೆ ಮಾಡಿವೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಂಟಾಗುವ ಗ್ರಾಹಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಶುಲ್ಕವನ್ನು ಹೆಚ್ಚಿಸಲಾಗಿದೆ. ಈ ಮೊದಲು ಝೊಮ್ಯಾಟೊ 6, ಸ್ವಿಗ್ಗಿ 7 ರೂ. ಪ್ಲಾಟ್ ಫಾರ್ಮ್ ಶುಲ್ಕವನ್ನು ವಿಧಿಸುತ್ತಿತ್ತು.

ಪ್ಲಾಟ್ ಫಾರ್ಮ್ ಶುಲ್ಕವನ್ನು ಸ್ವಲ್ಪ ಮಟ್ಟಿಗೆ ಏರಿಕೆ ಮಾಡಲಾಗಿದೆ. ಈ ಶುಲ್ಕಗಳು ನಮ್ಮ ಬಿಲ್ಗಳನ್ನು ಪಾವತಿ ಮಾಡಲು ಅನುಕೂಲವಾಗಿದೆ. ಅದರಲ್ಲೂ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಹಾಯಕವಾಗಲಿದೆ ಎಂದು ಝೊಮ್ಯಾಟೊ ಹೇಳಿದೆ.
ಪ್ಲಾಟ್ ಫಾರ್ಮ್ ಶುಲ್ಕ: 2023ರಲ್ಲಿ ಪ್ಲಾಟ್ ಫಾರ್ಮ್ ಶುಲ್ಕವನ್ನು ಝೊಮ್ಯಾಟೊ ಮತ್ತು ಸ್ವಿಗ್ಗಿ ಪರಿಚಯಿಸಿತ್ತು. ಸ್ವಿಗ್ಗಿ 7 ರೂ. ಮತ್ತು ಝೊಮ್ಯಾಟೊ 2 ರೂ. ಶುಲ್ಕವನ್ನು ವಿಧಿಸುತ್ತಿತ್ತು. ಬಳಿಕ ಝೊಮ್ಯಾಟೊ ಆಗಾಗ ಶುಲ್ಕವನ್ನು ಏರಿಕೆ ಮಾಡುತ್ತಲೇ ಬಂದಿತ್ತು.
ಪ್ಲಾಟ್ ಫಾರ್ಮ್ ಶುಲ್ಕವನ್ನು ಏರಿಕೆ ಮಾಡಿದ ಝೊಮ್ಯಾಟೊ ಮತ್ತು ಸ್ವಿಗ್ಗಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಈ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಝೊಮ್ಯಾಟೊ ಮತ್ತು ಸ್ವಿಗ್ಗಿ ವಿರುದ್ಧ ಗ್ರಾಹಕರು ತಿರುಗಿ ಬಿದ್ದಿದ್ದಾರೆ. 'ಜನರು ಮನೆಯಲ್ಲಿಯೇ ತಿನ್ನುವ ಹಳೆಯ ದಿನಕ್ಕೆ ವಾಪಸ್ ಹೋಗಬೇಕು' ಎಂದು ಹೇಳುತ್ತಿದ್ದಾರೆ. 'ನೋಡಿ ಹಬ್ಬದ ಸಮಯದಲ್ಲಿ ಹೇಗೆ ದರ ಏರಿಕೆ ಮಾಡುವ ಮೂಲಕ ಜನರನ್ನು ಸುಲಿಗೆ ಮಾಡುತ್ತಿದ್ದಾರೆ' ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಆಹಾರದ ನಿಖರವಾದ ಬೆಲೆಗಿಂತ ಇತರ ಶುಲ್ಕಗಳೇ ಅಧಿಕವಾಗಿವೆ' ಎಂದು ನೆಟ್ಟಿಗರು ಕಮೆಂಟ್ ಹಾಕುತ್ತಿದ್ದಾರೆ.
'ಇವೆಲ್ಲ ಮಾರುಕಟ್ಟೆ ತಂತ್ರಗಳು ಮೊದಲು ಎಲ್ಲವೂ ಫ್ರೀ, ಜನರು ಅದನ್ನು ಉಪಯೋಗಿಸಲು ಆರಂಭಿಸಿದ ಬಳಿಕ ಎಲ್ಲವೂ ಫೀ' ಎಂದು ಜನರು ಟೀಕಿಸುತ್ತಿದ್ದಾರೆ. 'ಆಗ ಆಹಾರ ಸರಬರಾಜು ಉಚಿತವಾಗಿತ್ತು. ಈಗ ಜಿಎಸ್ಟಿ ಸೇವಾ ಶುಲ್ಕ ಪಾರ್ಕಿಂಗ್ ಫೀ ಪಾಟ್ ಫಾರ್ಮ್ ಫೀ ಎಂದು ಕತ್ತರಿ ಹಾಕಲಾಗುತ್ತಿದೆ' ಎಂದು ಜನರು ಹೇಳುತ್ತಿದ್ದಾರೆ.
ಕರ್ನಾಕದ ಕಾಂಗ್ರೆಸ್ ಸರ್ಕಾರ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್ಗಳ ವ್ಯವಹಾರದ ಮೇಲೆ ಶೇ 1 ರಿಂದ 2ರಷ್ಟು ಶುಲ್ಕವನ್ನು ವಿಧಿಸಲು ತೀರ್ಮಾನಿಸಿದೆ. ಸ್ವಿಗ್ಗಿ, ಝೊಮ್ಯಾಟೋಗಳಂತಹ ಫುಡ್ಡೆಲಿವರಿ, ಇ-ಕಾಮರ್ಸ್ ಸಂಸ್ಥೆಗಳ ಅಪ್ಲಿಕೇಶನ್ ಬಳಕೆ ಮಾಡುವವರಿಗೆ ಶುಲ್ಕವನ್ನು ವಿಧಿಸಲು ಮುಂದಾಗಿದೆ. ಆದರೆ ಈ ಕುರಿತು ಮೊದಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಬೇಕಿದೆ.
-
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ -
Money Saving Vastu Tips: ವಾಸ್ತು ಪ್ರಕಾರ ಹಣ ಉಳಿಯುತ್ತಿಲ್ಲವೇ? ಈ ಸರಳ ಉಪಾಯಗಳನ್ನು ಅನುಸರಿಸಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ












Click it and Unblock the Notifications