ದಶಕದಲ್ಲಿ ಗಲ್ಲಿಗೇರುತ್ತಿರುವ 3ನೇ ಭಾರತೀಯ ಯಾಕೂಬ್
ನವದೆಹಲಿ, ಜು.29: ಗುರುವಾರ ಮುಂಜಾನೆ ಉಗ್ರ ಯಾಕೂಬ್ ಮೆಮನ್ ನನ್ನು ಗಲ್ಲಿಗೆ ಏರಿಸಲಾಗುತ್ತದೆ. ದಶಕದ ಅವಧಿಯಲ್ಲಿ ಗಲ್ಲಿಗೆ ಏರಲ್ಪಡುತ್ತಿರುವ ನಾಲ್ಕನೇ ವ್ಯಕ್ತಿ, ಮೂರನೇ ಭಾರತೀಯ ಎಂಬ ಕೆಟ್ಟ ದಾಖಲೆಯನ್ನು ತನ್ನೊಂದಿಗೆ ಕೊಂಡೊಯ್ಯಲಿದ್ದಾನೆ.
2004 ಮತ್ತು 2013ರ ಅವಧಿಯಲ್ಲಿ ನ್ಯಾಯಾಲಯ ಒಟ್ಟು 1,303 ಕಠಿಣ ತೀರ್ಮಾನಗಳನ್ನು ನೀಡಿದೆ. ಆದರೆ ಈ ಅವಧಿಯಲ್ಲಿ ಗಲ್ಲು ಶಿಕ್ಷೆಯಾಗಿದ್ದು ಕೆಲವರಿಗೆ ಮಾತ್ರ ಎಂದು ಕೇಂದ್ರ ಅಪರಾಧ ದಾಖಲೆ ಹೇಳುತ್ತದೆ.[ಯಾಕೂಬ್ ಮೆಮನ್ ಗೆ ಗಲ್ಲುಶಿಕ್ಷೆ ಕಾಯಂ : ಸುಪ್ರೀಂ]

ಈ ಅವಧಿಯಲ್ಲಿ ಮೂರು ಜನರನ್ನು ಮಾತ್ರ ನೇಣುಗಂಬಕ್ಕೆ ಏರಿಸಲಾಗಿದೆ. ಪಶ್ಚಿಮ ಬಂಗಾಳ, ಮಾಹಾರಾಷ್ಟ್ರ ಮತ್ತು ದೆಹಲಿ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣಗಳಿಗೆ ಗಲ್ಲು ಶಿಕ್ಷೆ ಹೊರಬಿದ್ದಿದೆ.
ಗಲ್ಲು ಶಿಕ್ಷಗೆ ಗುರಿಯಾದವರ ಪಟ್ಟಿ
* ಧನಂಜಯ್ ಚಟರ್ಜಿ: ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಶಿಕ್ಷೆಗೆ ಗುರಿಯಾಗಿದ್ದ ಧನಂಜಯ್ ಚಟರ್ಜಿಯನ್ನು ಆತನ 42ನೇ ಹುಟ್ಟುಹಬ್ಬದ ದಿನದಂದೇ ಅಂದರೆ ಆಗಸ್ಟ್ 14, 2004 ರಲ್ಲಿ ಗಲ್ಲಿಗೆ ಏರಿಸಲಾಯಿತು.
* ಅಜ್ಮಲ್ ಅಮೀರ್ ಕಸಬ್: ಮುಂಬೈ ದಾಳಿ ವೇಳೆ ಸೆರೆಸಿಕ್ಕ ಉಗ್ರ ಕಸಬ್ ನನ್ನು ಅನೇಕ ತಿಂಗಳುಗಳ ವಿಚಾರಣೆ ಬಳಿಕ 2012 ರ ನವೆಂಬರ್ 21ರಂದು ಗಲ್ಲಿಗೆ ಏರಿಸಲಾಯಿತು.(ಪಾಕಿಸ್ತಾನ)
* ಅಫ್ಜಲ್ ಗುರು: 2001ರ ಸಂಸತ್ ಭವನ ದಾಳಿ ರೂವಾರಿ ಅಫ್ಜಲ್ ಗುರು ನನ್ನು 2013ರ ಫೆಬ್ರವರಿ 9 ರಂದು ನೇಣಿಗೆ ಹಾಕಲಾಯಿತು. (1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು: ಟೈಮ್ ಲೈನ್)
ಈ ಅವಧಿಯಲ್ಲಿ ಸುಮಾರು 3,751 ಪ್ರಕರಣಗಳು ಗಲ್ಲಿನಿಂದ ಜೀವಾವಧಿಯಾಗಿ ಪರಿವರ್ತನೆಗೊಂಡಿವೆ. 1993 ಮುಂಬೈ ಸರಣಿ ಬಾಂಬ್ ಸ್ಫೋಟ ನಡೆಸಿ 260 ಜೀವಗಳನ್ನು ಬಲಿ ಪಡೆದಿದ್ದ ಯಾಕೂಬ್ ಮತ್ತು 11 ಜನರಿಗೆ 2007ರಲ್ಲೇ ಶಿಕ್ಷೆ ವಿಧಿಸಲಾಗಿತ್ತು.
ಮಾರ್ಚ್ 2013ರಲ್ಲಿ ಕೆಳ ನ್ಯಾಯಾಲಯದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಇದೀಗ ಕೊನೆಗೂ ಉಗ್ರ ಯಾಕೂಬ್ ನೇಣು ಕುಣಿಕೆಗೆ ಕುತ್ತಿಗೆ ಒಡ್ಡಲಿದ್ದಾನೆ. ಬಾಬು ಜಲ್ಲಾದ್ ಗುರುವಾರ ಬೆಳಗ್ಗೆ ಮುಂಬೈ ದಾಳಿ ಪಾತಕಿಯನ್ನು ಗಲ್ಲಿಗೆ ಹಾಕಲಿದ್ದಾರೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications