ಮದ್ರಸಾ ಎಂದರೇನು? #banmadrasa ಏಕೆ?
ಮದ್ರಸಾಗಳಲ್ಲಿ ಕುರಾನ್ ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಆಧುನಿಕ ಶಿಕ್ಷಣ ಪದ್ಧತಿಯ ಯಾವುದೇ ಮಾನದಂಡವನ್ನು ಮದ್ರಸಾಗಳು ಅನುಸರಿಸುತ್ತಿಲ್ಲ ಗಣಿತ, ವಿಜ್ಞಾನದ ಪರಿಚಯವಿಲ್ಲ. ಉರ್ದು ಮತ್ತು ಅರೇಬಿಕ್ ಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತದೆ.
ವೈದಿಕ ಪಾಠಶಾಲೆಗಳಂತೆ ಮದ್ರಸಾಗಳು ಕಾಡಾ ಆರ್ ಟಿಇ ಕಾಯ್ದೆ ವ್ಯಾಪ್ತಿಯಿಂದ ಹೊರಗುಳಿದಿವೆ. ಹಲವೆಡೆ ಮದ್ರಸಾಗಳಿಗೆ ಸ್ವಂತ ಕಟ್ಟಡಗಳಿಲ್ಲ, ಮೈದಾನಗಳಿಲ್ಲ, ಗ್ರಂಥಾಲಯಗಳಿಲ್ಲ, ಶಿಕ್ಷಕರು ಮೌಲ್ವಿಗಳ ಕೊರತೆ ಇದ್ದೇ ಇದೆ, ವಿದ್ಯಾರ್ಥಿಗಳಿಗೆ ವೈದ್ಯಕೀಯ ನೆರವು ತಕ್ಷಣವೇ ನೀಡಲಾಗುವುದಿಲ್ಲ, ಇಂಗ್ಲೀಷ್, ಕನ್ನಡ ಭಾಷೆ, ಕಂಪ್ಯೂಟರ್ ಶಿಕ್ಷಣ ಇನ್ನೂ ಒಗ್ಗಿಕೊಂಡಿಲ್ಲ.
ಏನಿದು #banmadrasa ಏಕೆ ಇದು ಟ್ವಿಟ್ಟರ್ ನಲ್ಲಿ ಚಾಲ್ತಿಯಲ್ಲಿತ್ತು. ಇತ್ತೀಚೆಗೆ ಮೀರತ್ ನಲ್ಲಿ 20 ವರ್ಷದ ಬಿಎ ಪದವೀಧರೆಯೊಬ್ಬಳನ್ನು ಅಪಹರಣ ಮಾಡಿದ ಕೆಲ ದುಷ್ಕರ್ಮಿಗಳ ಗುಂಪು, ಹಾಪುರ್ ನ ಮದರಸಾ ಹೊತ್ತೊಯ್ದು ಬಂಧನದಲ್ಲಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿತ್ತು. ಮದ್ರಸಾದ ನವಾಬ್ ಹಾಗೂ ನಾಲ್ವರ ಈ ನೀಚ ಕೃತ್ಯ ಎಸಗಿದ ಆರೋಪ ಹೊತ್ತಿದ್ದರು ಇದನ್ನು ಖಂಡಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿಭಟನೆ, ಟೀಕೆ, ನಿಷೇಧ ಹೇರಿಕೆ ಆಗ್ರಹ ಕಂಡು ಬಂದಿತ್ತು.[ಯುವತಿ ಅಪರಹಣ, ಸಾಮೂಹಿಕ ಅತ್ಯಾಚಾರ, ಮತಾಂತರ ]
ಮದ್ರಸಾಎಂದರೇನು? ಮದ್ರಸಾದಲ್ಲಿ ಏನು ಹೇಳಿಕೊಡಲಾಗುತ್ತದೆ? ಭಾರತದಲ್ಲಿ ಎಷ್ಟು ಮದ್ರಸಾಗಳಿವೆ?#banmadrasa ಕಾರಣವೇನು? ಮದ್ರಸಾದಲ್ಲಿ ಕಲಿಕೆ ನಂತರ ಮುಂದೇನು? ಎಂಬುದರ ಬಗ್ಗೆ ಮುಂದೆ ಓದಿ...

ಮದ್ರಸಾ ಎಂದರೇನು?
ಮದ್ರಸಾಗಳಲ್ಲಿ ಕುರಾನ್ ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಅರೇಬಿಕ್ ನಲ್ಲಿ ಮದ್ರಸಾ ಎಂದರೆ ಶಿಕ್ಷಣ ಸಂಸ್ಥೆ ಎಂಬರ್ಥ ಬರುತ್ತದೆ.
ಈ ಕಾಲದ ಮದ್ರಾಗಳಲ್ಲಿ ಬಡ ಮುಸ್ಲಿಂ ವಿದ್ಯಾರ್ಥಿಗಳು ಮಾತ್ರ ಕಲಿಕೆ ಮೀಸಲಾಗಿಬಿಟ್ಟಿದೆ. ಮೆರಿ ವೆಬ್ ಸ್ಟರ್ ಶಬ್ದಕೋಶದ ಪ್ರಕಾರ ಮುಸ್ಲಿಂ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಿಗೂ ಈ ಪದ ಬಳಸಬಹುದಾಗಿದೆ. ಬಹುತೇಕ ಮಸೀದಿಗೆ ಹೊಂದಿಕೊಂಡಂತೆ ಇರುತ್ತದೆ. ಹೀಗಾಗಿ ಧಾರ್ಮಿಕ ವಿಧಿ ಕಲಿಕೆಗೆ ಅನುಕೂಲಕರ
ಮದ್ರಸಾದಲ್ಲಿ ಏನು ಹೇಳಿಕೊಡಲಾಗುತ್ತದೆ?
* ಧಾರ್ಮಿಕ ಸಾಂಸ್ಕೃತಿಕ ಸಂಸ್ಥೆಗಳಾಗಿ ಇಸ್ಲಾಂ ಧರ್ಮದ ಮೂಲ ಉದ್ದೇಶಗಳನ್ನು ಹೇಳಿಕೊಡುವ ಸಂಸ್ಥೆಯಾಗಿ ಮದ್ರಸಾ ಉಳಿದುಕೊಳ್ಳಬೇಕಿದೆ ಯಾವುದೇ ರಾಜಕೀಯ ಸಿದ್ಧಾಂತ ಅಥವಾ ಉದ್ದೇಶಗಳ ಪರ ವಾಲಬಾರದು ಎಂದು ದೆಹಲಿ ಮೂಲದ ಶಾಂತಿ ಸೌಹಾರ್ದ ಸಂಸ್ಥೆ ವರದಿ ಹೇಳುತ್ತದೆ.
* ಕುರಾನಿನ ಪಠಣದ ಜತೆಗೆ ವಿದ್ಯಾರ್ಥಿಗಳಿಗೆ ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಆಧುನಿಕ ಶಿಕ್ಷಣ ಪದ್ಧತಿಯ ಯಾವುದೇ ಮಾನದಂಡವನ್ನು ಮದ್ರಸಾಗಳು ಅನುಸರಿಸುತ್ತಿಲ್ಲ ಗಣಿತ, ವಿಜ್ಞಾನದ ಪರಿಚಯವಿಲ್ಲ. ಉರ್ದು ಮತ್ತು ಅರೇಬಿಕ್ ಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತದೆ.
* ಇಂಗ್ಲೀಷ್, ಕನ್ನಡ ಭಾಷೆ, ಕಂಪ್ಯೂಟರ್ ಶಿಕ್ಷಣ ಇನ್ನೂ ಒಗ್ಗಿಕೊಂಡಿಲ್ಲ. ಈ ಪಠ್ಯ ಅಳವಡಿಕೆ ಯತ್ನ ನಡೆಯುತ್ತಲೇ ಇದೆ.
* ಬ್ರಿಟಿಷರ ಕಾಲದಲ್ಲಿ 1866ರಲ್ಲಿ ಆರಂಭಗೊಂಡ ದರೂಲ್ ಉಲೂಮ್ ಮದ್ರಸಾದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿತು. ಇಸ್ಲಾಂ ಜ್ಞಾನವನ್ನು ಹರಡುವುದರ ಜೊತೆಗೆ ಭಾರತೀಯ ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಪ್ರಚೋದಿಸಿತ್ತು.

ಭಾರತದಲ್ಲಿ ಎಷ್ಟು ಮದ್ರಸಾಗಳಿವೆ?
* ಐಪಿಸಿಎಸ್ ಪ್ರಕಾರ ಸುಮಾರು 35,000 ಮದ್ರಸಾಗಳನ್ನು ಭಾರತದೆಲ್ಲೆಡೆ ಗುರುತಿಸಲಾಗಿದೆ. ಸುಮಾರು 1.5 ಮಿಲಿಯನ್ ವಿದ್ಯಾರ್ಥಿಗಳು ಇದ್ದಾರೆ. ಮುಸ್ಲಿಮ್ ಹಾಗೂ ಹಿಂದೂ ವಿದ್ಯಾರ್ಥಿಗಳು ಇದರಲ್ಲಿ ಸೇರಿದ್ದಾರೆ.
* ಅಲ್ ಜಮೈತುಲ್ ಅಶ್ರಫಿಯಾ, ಮುಬರಾಕ್ಪುರ್, ಮಂಜರ್ ಇಸ್ಲಾಂ ಬರೇಲಿ, ಜಮೀಯಾ ನಿಜಾಮಾದಿನ, ನವದೆಹಲಿ, ಜಮೀಯಾ ನಯೀಮಿಯಾ, ಮುರಾದಾಬಾದ್ ಪ್ರಮುಖ ಮದ್ರಸಾಗಳು.
* 13ನೇ ಶತಮಾನದಿಂದಲೂ ಭಾರತದಲ್ಲಿ ಮದ್ರಸಾಗಳು ಇವೆ.
* ಮೊಘಲ್ ಸಾಮ್ರಾಜ್ಯದ ಕಾಲದಲ್ಲಿ ಉತ್ತಮ ಅಧಿಕಾರಿಗಳು, ಆಡಳಿತಗಾರರು, ನ್ಯಾಯಾಧೀಶರನ್ನು ನೀಡಿದ ಕೀರ್ತಿ ಮದ್ರಸಾಗಳಿಗೆ ಸಲ್ಲುತ್ತದೆ

ಮೋದಿ ಸರ್ಕಾರದಿಂದ ನೆರವು
* ನರೇಂದ್ರ ಮೋದಿ ಸರ್ಕಾರ ಕೇಂದ್ರ ಬಜೆಟ್ ನಲ್ಲಿ ಮದ್ರಸಾಗಳ ಅಭಿವೃದ್ಧಿಗೆ, ವಿದ್ಯಾರ್ಥಿಗಳ ಕೌಶಲ್ಯ ತರಬೇತಿಗೆ 100 ಕೋಟಿ ರು ಮೀಸಲಿಟ್ಟಿದೆ.
* ಆದರೆ, ಅನೇಕ ಮೂಲಭೂತವಾದಿಗಳು ಮದ್ರಸಾಗಳನ್ನು ಉಗ್ರರ ಅಡಗುತಾಣಗಳನ್ನಾಗಿಸಿಕೊಂಡಿರುವುದು ದುರಂತವಾಗಿದ್ದು, ಅಮಾಯಕ ಯುವಕರನ್ನು ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಗೆ ತಳ್ಳುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಮೋದಿ ಸರ್ಕಾರ ಎಚ್ಚರವಹಿಸಿದೆ.
*ಮದ್ರಸಾಗಳಿಗೂ ಸಮಾಜ ಘಾತುಕ ಶಕ್ತಿಗಳಿಗೂ ಸಂಬಂಧವಿಲ್ಲ ಎಂಬುದನ್ನು ಪ್ರತ್ಯೇಕಿಸಿ ಹೇಳಬೇಕಾಗಿಲ್ಲ. ಉಗ್ರರು ಮದ್ರಸಾಗಳನ್ನು ದುರುಪಯೋಗಪಡಿಸಿಕೊಳ್ಳಲು ಸತತ ಯತ್ನ ನಡೆಸುತ್ತಲೆ ಇದ್ದಾರೆ.
|
ಮೀರತ್ ಬಿಜೆಪಿ ಘಟಕದ ಟ್ವೀಟ್
ಮೀರತ್ ಬಿಜೆಪಿ ಘಟಕದ ಟ್ವೀಟ್

#banmadrasa ಏಕೆ?
ಇತ್ತೀಚೆಗೆ ಮೀರತ್ ನಲ್ಲಿ 20 ವರ್ಷದ ಬಿಎ ಪದವೀಧರೆಯೊಬ್ಬಳನ್ನು ಅಪಹರಣ ಮಾಡಿದ ಕೆಲ ದುಷ್ಕರ್ಮಿಗಳ ಗುಂಪು, ಹಾಪುರ್ ನ ಮದರಸಾ ಹೊತ್ತೊಯ್ದು ಬಂಧನದಲ್ಲಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿತ್ತು.
ಈಕೆ ಮದ್ರಸಾದಲ್ಲಿ ಅರೆ ಕಾಲಿಕ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು.ಮದ್ರಸಾದ ನವಾಬ್ ಹಾಗೂ ನಾಲ್ವರ ಈ ನೀಚ ಕೃತ್ಯ ಎಸಗಿದ ಆರೋಪ ಹೊತ್ತಿದ್ದರು ಇದನ್ನು ಖಂಡಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿಭಟನೆ, ಟೀಕೆ, ನಿಷೇಧ ಹೇರಿಕೆ ಆಗ್ರಹ ಕಂಡು ಬಂದಿತ್ತು.-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications