ಸಿಆರ್ ಪಿಎಫ್ ಮುಖ್ಯಸ್ಥರ ನೇಮಕ ಸರಕಾರದ ಆದ್ಯತೆ ಆಗಬೇಕು ಏಕೆ?
ಎರಡು ತಿಂಗಳಿಂದ ಸಿಆರ್ ಪಿಎಫ್ ಗೆ ಮುಖ್ಯಸ್ಥರು ಇಲ್ಲದಂತಾಗಿದೆ. ಈ ಅವಧಿಯಲ್ಲಿ ಎರಡು ಪ್ರಮುಖ ದಾಳಿಗಳು ಆಗಿವೆ. ಸರಕಾರ ಕೂಡಲೇ ಸಿಆರ್ ಪಿಎಫ್ ಗೆ ತುರ್ತಾಗಿ ಮುಖ್ಯಸ್ಥರ ನೇಮಕ ಮಾಡಬೇಕಾಗಿದೆ
ಬೆಂಗಳೂರು, ಏಪ್ರಿಲ್ 25: ಸಿಆರ್ ಪಿಎಫ್ ನ ಇಪ್ಪತ್ತಾರು ಮಂದಿ ನಕ್ಸಲರ ದಾಳಿಯಿಂದ ಛತ್ತೀಸ್ ಗಢದಲ್ಲಿ ಹುತಾತ್ಮರಾಗಿದ್ದಾರೆ. ಆದರೆ ಸಿಆರ್ ಪಿಎಫ್ ಗೆ ಮುಖ್ಯಸ್ಥರೇ ಇಲ್ಲದೆ ಎರಡು ತಿಂಗಳು ಕಳೆದಿದ್ದು, ಈ ಬಗ್ಗೆ ಸರಕಾರ ತುಟಿ ಬಿಚ್ಚಿಲ್ಲ. ಗೃಹ ಸಚಿವಾಲಯದ ಮೂಲದ ಪ್ರಕಾರ ಹೊಸ ಡೈರೆಕ್ಟರ್ ಜನರಲ್ (ಡಿಜಿ) ನೇಮಕ ಶೀಘ್ರದಲ್ಲೇ ಆಗಲಿದೆ.
ಆದರೆ, ಸಿಆರ್ ಪಿಎಫ್ ಅಧಿಕಾರಿಗಳೇ ಹೇಳುವ ಪ್ರಕಾರ ನೇಮಕದ ಬಗ್ಗೆ ಯಾವುದೇ ಅಧಿಕೃತ ಸುದ್ದಿ ಇಲ್ಲ. ಮುಖ್ಯಸ್ಥರೇ ಇಲ್ಲದ ಈ ಅವಧಿಯಲ್ಲಿ ಸಿಆರ್ ಪಿಎಫ್ ಮೇಲೆ ಎರಡು ಪ್ರಮುಖ ದಾಳಿಗಳಾಗಿವೆ. ಇವುಗಳಲ್ಲಿ ನಲವತ್ತರಷ್ಟು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.[ಛತ್ತೀಸ್ ಗಢ ನಕ್ಸಲರ ದಾಳಿ, ಗುರುತೇ ಸಿಗದಂತಾಗಿದ್ದ ಯೋಧರ ದೇಹ]

ಕೆ ದುರ್ಗಾಪ್ರಸಾದ್ ಸಿಆರ್ ಪಿಎಫ್ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾದ ನಂತರ ಗೃಹ ಸಚಿವಾಲಯವು ಸುದೀಪ್ ಲಕ್ಟಕಿ ಅವರಿಗೆ ಹೆಚ್ಚುವರಿ ಹೊಣೆ ಹೊರಿಸಿತು. ಸದ್ಯಕ್ಕೆ ಹೊಸ ಮುಖ್ಯಸ್ಥರ ಆಯ್ಕೆಗೆ ಮುಂದಾಗಿದೆ. ಒಂದು ಪಟ್ಟಿಯನ್ನೇನೋ ಸಿದ್ಧಪಡಿಸಿದರೂ ಯಾವುದೇ ಅಂತಿಮ ಆಯ್ಕೆ ಆಗಿಲ್ಲ.[ಅಪನಗದೀಕರಣದಿಂದ ನಕ್ಸಲರಿಗೆ ಸಮಸ್ಯೆಯಾಗಿದೆಯಾ? ಖಂಡಿತಾ ಹಾಗನಿಸಲ್ಲ]
ಮುಖ್ಯಸ್ಥರಿಲ್ಲದ ಸಿಆರ್ ಪಿಎಫ್ ಮೇಲೆ ತೀರಾ ಗಂಭೀರ ದಾಳಿಗಳಾಗಿವೆ. ದೈನಂದಿನ ವ್ಯವಹಾರಗಳಾನ್ನು ಆಯಾ ಬೆಟಾಲಿಯನ್ ಮುಖ್ಯಸ್ಥರು ನೋಡಿಕೊಳ್ಳುತ್ತಿದ್ದಾರೆ. ಆದರೆ ನಿರ್ಧಾರದ ವಿಷಯ ಬಂದಾಗ ಸಮಸ್ಯೆ ಎದುರಾಗುತ್ತದೆ. ಪೂರ್ಣಕಾಲಿಕ ಮುಖ್ಯಸ್ಥರು ಮಾತ್ರ ಮುಖ್ಯವಾಗಿ ನೀತಿ ನಿರೂಪಣೆ ವಿಚಾರವಾಗಿ ನಿರ್ಧಾರ ಮಾಡಲು ಸಾಧ್ಯ. ಮತ್ತು ಇಂಥ ಸವಾಲಿನ ಸನ್ನಿವೇಶದಲ್ಲಿ ಸಹಾಯ ಮಾಡಲು ಸಾಧ್ಯ
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications