ವಿಜಯ ಪ್ರತಿ ಯಜ್ಞದ ಫಲ, ಡೊನಾಲ್ಡ್ ಟ್ರಂಪ್ ಜಯಭೇರಿ
ಯುಎಸ್ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಜಯಭೇರಿ ಬಾರಿಸಿದ್ದಾರೆ. ಟ್ರಂಪ್ ಜಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದ ಎನ್ನಾರೈಗಳು ಇದು ವಿಜಯಪ್ರತಿ ಯಜ್ಞದ ಫಲ ಎಂದು ಸಂಭ್ರಮಿಸಿದ್ದಾರೆ.
ಮುಂಬೈ, ನವೆಂಬರ್ 09: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ಸೋಲಿಸಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಜಯಭೇರಿ ಬಾರಿಸಿದ್ದಾರೆ. ಟ್ರಂಪ್ ಜಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದ ಎನ್ನಾರೈಗಳು ಇದು ವಿಜಯಪ್ರತಿ ಯಜ್ಞದ ಫಲ ಎಂದು ಸಂಭ್ರಮಿಸಿದ್ದಾರೆ.
ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟ್ರಂಪ್ ಗೆಲುವಿಗಾಗಿ ಮುಂಬೈನಲ್ಲಷ್ಟೇ ಅಲ್ಲದೆ ದೇಶದ ವಿವಿಧೆಡೆ ಪೂಜೆ, ಪ್ರಾರ್ಥನೆ, ಯಾಗಗಳನ್ನು ಹಮ್ಮಿಕೊಳ್ಳಲಾಗಿತ್ತು.[ಚಾಣಕ್ಯನ ಭವಿಷ್ಯ: ಅಮೆರಿಕದ ಮುಂದಿನ ಅಧ್ಯಕ್ಷ ಹೆಸರು ಬಹಿರಂಗ]
ಮೀರತ್ ನ ಅಖಿಲ ಭಾರತೀಯ ಹಿಂದೂ ಮಹಾಸಭಾ ವತಿಯಿಂದ ಟ್ರಂಪ್ ವಿಜಯಕ್ಕಾಗಿ ಸೋಮವಾರ ವಿಶೇಷ ಹೋಮ ಹವನವನ್ನು ಹಮ್ಮಿಕೊಳ್ಳಲಾಗಿತ್ತು. [ಟ್ರಂಪ್ ಗೆಲುವಿಗಾಗಿ ಎನ್ನಾರೈಗಳಿಂದ ವಿಶೇಷ ಪೂಜೆ!]
ಗೋಡ್ಸೆಯಂತೆ ಡೊನಾಲ್ಡ್ ಟ್ರಂಪ್: ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಸಿದ್ಧಾಂತಗಳು, ದೂರದೃಷ್ಟಿ ಎಲ್ಲವೂ ನಮ್ಮ ನಾಥುರಾಮ್ ಗೋಡ್ಸೆಯನ್ನು ಹೋಲುತ್ತದೆ. ಇಸ್ಲಾಮ್ ಭಯೋತ್ಪಾದಕರಿಂದ ವಿಶ್ವಕ್ಕೆ ಮುಕ್ತಿ ನೀಡಲು ಟ್ರಂಪ್ ರಿಂದ ಸಾಧ್ಯ. ವಿಶ್ವಶಾಂತಿ ಸ್ಥಾಪಕರಾಗಲು ಟ್ರಂಪ್ ಅಧಿಕಾರಕ್ಕೆ ಬಂದಿರುವುದು ಖುಷಿ ಕೊಟ್ಟಿದೆ ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಶೋಕ್ ಶರ್ಮ ಹೇಳಿದ್ದಾರೆ.[ಅಮೆರಿಕದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ]
ಮೇ ತಿಂಗಳಿನಿಂದಲೇ ಟ್ರಂಪ್ ಪರ ಪೂಜೆಗಳು ಭಾರತದಲ್ಲಿ ಆರಂಭವಾಗಿತ್ತು. ಹಿಂದೂ ಸೇನಾ ಎಂಬ ಸಂಘಟನೆಯೊಂದು ನಿರಂತರವಾಗಿ ಟ್ರಂಪ್ ಪರ ಪೂಜೆ ಸಲ್ಲಿಸುತ್ತಾ ಬಂದಿತ್ತು.

ಹಿಂದೂಸೇನಾದ ಸ್ಥಾಪಕ ವಿಷ್ಣು ಗುಪ್ತಾ
ಜಗತ್ತನ್ನು ಭಯೋತ್ಪಾದನೆಯಿಂದ ಮುಕ್ತಿಗೊಳಿಸಲು ಟ್ರಂಪ್ ರಿಂದ ಮಾತ್ರ ಸಾಧ್ಯ, ಇಸ್ಲಾಮಿಕ್ ಉಗ್ರರನ್ನು ಟ್ರಂಪ್ ಸದೆಬಡಿಯಲಿದ್ದಾರೆ ಎಂದು ಹಿಂದೂಸೇನಾದ ಸ್ಥಾಪಕ ವಿಷ್ಣು ಗುಪ್ತಾ ಅವರು ಎಪಿ ನ್ಯೂಸ್ ಏಜೆನ್ಸಿಗೆ ಹೇಳಿದ್ದರು.

ಟ್ರಂಪ್ ಅವರಿಗೂ ವಿಷ್ಯ ಮುಟ್ಟಿಸಿ
ಈಗ ಟ್ರಂಪ್ ವಿಜಯಕ್ಕೆ ನಾವು ಮಾಡಿದ ಯಾಗದ ಫಲವೇ ಕಾರಣ ಎಂದು ಅನೇಕ ಹಿಂದೂ ಪರ ಸಂಘಟನೆಗಳು ವಿಜಯೋತ್ಸವ ಆಚರಣೆಗೆ ಮುಂದಾಗಿವೆ. ಈ ಬಗ್ಗೆ ಟ್ರಂಪ್ ಅವರಿಗೂ ವಿಷ್ಯ ಮುಟ್ಟಿಸಲು ಎನ್ನಾರೈಗಳಿಗೆ ಕೋರಲಾಗಿದೆ.

ಟ್ರಂಪ್ ಗೆಲುವಿಗಾಗಿ ನಡೆಸಲಾದ ಯಾಗ
ಮುಂಬೈನ ಉತ್ತರ ಭಾಗದ ಕಂಡಿವ್ಲಿಯ ಹೊರ ವಲಯದಲ್ಲಿರುವ ಈ ದೇಗುಲದಲ್ಲಿ ಮೂರು ಗಂಟೆಗಳಿಗೂ ಅಧಿಕ ಕಾಲ ನಡೆದ ಈ ಯಾಗದಲ್ಲಿ ಎನ್ನಾರೈಗಳ ಪರವಾಗಿ ಪೂಜೆ ಸಲ್ಲಿಸಲಾಗಿದೆ. ಟ್ರಂಪ್ ಗೆಲುವಿಗಾಗಿ ನಡೆಸಲಾದ ಯಾಗವನ್ನು 'ವಿಜಯ ಪ್ರತಿ ಯಜ್ಞ' ಎಂದು ಕರೆಯಲಾಗಿದೆ. ಶಾಸನ ಪ್ರತಿ ಯಜ್ಞ ನಡೆಸಿ ಟ್ರಂಪ್ ಅಧಿಕಾರ ನಡೆಸಲು ಅನುಕೂಲವಾಗಲಿ ಎಂದು ಹಾರೈಸಲಾಗಿತ್ತು

ಭಯೋತ್ಪಾದನೆ ಸಮಸ್ಯೆಗೆ ಟ್ರಂಪ್ ಉತ್ತರ ನೀಡಲಿದ್ದಾರೆ
ಭಾರತದಲ್ಲಿರುವ ಭಯೋತ್ಪಾದನೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಭರವಸೆಯನ್ನು ಅನಿವಾಸಿ ಭಾರತೀಯರಿಗೆ ಟ್ರಂಪ್ ನೀಡಿದ್ದಾರೆ ಹೀಗಾಗಿ ಅವರ ಪರ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ದೇಗುಲದ ಟ್ರಸ್ಟಿ ಹೇಳಿದ್ದಾರೆ
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications