ಏನಿದು ಇ ಪಾಸ್ ಪೋರ್ಟ್? ಏನು ಪ್ರಯೋಜನ?
ಹಲವಾರು ದೇಶಗಳಲ್ಲಿ ಚಾಲ್ತಿಯಲ್ಲಿರುವ ಜನಪ್ರಿಯ ಯೋಜನೆಯೊಂದು 2016ರಲ್ಲಿ ಭಾರತದಲ್ಲೂ ಸಾಕಾರಗೊಳ್ಳಲಿದೆ. 2016ರ ವೇಳೆಗೆ ದೇಶದಲ್ಲಿ ಇ-ಪಾಸ್ಪೋರ್ಟ್ ಬಳಕೆ ಪ್ರಾರಂಭವಾಗಬಹುದು ಎಂದು ವಿದೇಶಾಂಗ ಸಚಿವಾಲಯದ ಮುಖ್ಯ ಪಾಸ್ಪೋರ್ಟ್ ಅಧಿಕಾರಿ ಮತ್ತು ಜಂಟಿ ನಿರ್ದೇಶಕ (ಪಾಸ್ಪೋರ್ಟ್ ಸೇವಾ ಯೋಜನೆ) ರಾದ ಮುಕ್ತೇಶ್ ಕೆ. ಪರದೇಸಿ ಇತ್ತೀಚೆಗೆ ತಿಳಿಸಿದ್ದಾರೆ. ಏನಿದು ಇ ಪಾಸ್ ಪೋರ್ಟ್? ಇದರಿಂದ ಏನು ಪ್ರಯೋಜನ? ಎಂಬುದರ ಬಗ್ಗೆ ವಿವರಣೆ ಇಲ್ಲಿದೆ...
ಇ ಪಾಸ್ ಪೋರ್ಟ್ : ಬಯೋಮೆಟ್ರಿಕ್ ಪಾಸ್ಪೋರ್ಟ್ ಅಥವಾ ಡಿಜಿಟಲ್ ಪಾಸ್ಪೋರ್ಟ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಬಳಕೆಯಲ್ಲಿರುವ ಪಾಸ್ ಪೋರ್ಟ್ ಬುಕ್ ನಂತೆ ಇರುತ್ತದೆ. ಅದರೆ, ಜೊತೆಗೊಂದು ಎಲೆಕ್ಟ್ರಾನಿಕ್ ಚಿಪ್ ಇರುತ್ತದೆ. ಈ ಚಿಪ್ ನಲ್ಲಿ ಪಾಸ್ ಪೋರ್ಟ್ ನ ಎರಡನೇ ಪುಟದ ವಿವರಗಳು (ಸರ್ ನೇಮ್, ಹೆಸರು, ಹುಟ್ಟಿದ ದಿನಾಂಕ, ಲಿಂಗ) ದಾಖಲಾಗಿರುತ್ತದೆ. ಡಿಜಿಟಲ್ ಭಾವಚಿತ್ರ, ಸಹಿ, ಬೆರಳಚ್ಚು ಮಾಹಿತಿ ಒಳಗೊಂಡಂತೆ ಅಗತ್ಯ ಮಾಹಿತಿಗಳಿರುತ್ತದೆ.
ಭಾರತದಲ್ಲಿ ಯಾವಾಗ ಬರಲಿದೆ?: ಇ-ಪಾಸ್ಪೋರ್ಟ್ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಟೆಂಡರ್ ಈಗಿನ್ನೂ ಕರೆದಿದೆ. 2015ರ ಕೊನೆ ಭಾಗದಲ್ಲಿ ಮುಕ್ತಾಯವಾಗಬೇಕಿದ್ದ ಪ್ರಕ್ರಿಯೆ ಈಗ 2016ರ ಪ್ರಾರಂಭದಲ್ಲಿ ಪೂರ್ತಿಗೊಂಡು ಇ-ಪಾಸ್ಪೋರ್ಟ್ ವಿತರಣೆ ಮಾಡಬಹುದು.

ಭಾರತ ಮಂಚೂಣಿಗೆ: ಚೀನಾ ಮತ್ತು ಅಮೆರಿಕದ ನಂತರ ಭಾರತ 1 ಕೋಟಿ ಪಾಸ್ಪೋರ್ಟ್ ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಪಾಸ್ಪೋರ್ಟ್ ವಿಲೇವಾರಿಯಲ್ಲಿ 3ನೇ ಸ್ಥಾನದಲ್ಲಿದೆ. 2014ರ ಜನವರಿ ಇಂದ ಡಿಸೆಂಬರ್ವರೆಗೆ ಪಾಸ್ಪೋರ್ಟ್ ಮತ್ತು ಪಾಸ್ಪೋರ್ಟ್ ಸಂಬಂಧಿ 1.01 ಕೋಟಿ ಅರ್ಜಿಗಳನ್ನು ವಿದೇಶಾಂಗ ಇಲಾಖೆ ವಿಲೇವಾರಿ ಮಾಡಿದೆ.
ಇ ಪಾಸ್ ಪೋರ್ಟ್ ಗೆ ಬೇಡಿಕೆ: 2013ನೇ ವರ್ಷಕ್ಕೆ ಹೋಲಿಸಿದರೆ 2014ರಲ್ಲಿ ಪಾಸ್ಪೋರ್ಟ್ ವಿತರಣೆಯಲ್ಲಿ 15 ರಿಂದ 20% ಹೆಚ್ಚಳವಾಗಿದೆ. ಜತೆಗೆ ಪಾಸ್ಪೋರ್ಟ್ ವಿತರಣೆಯಿಂದ ಸರ್ಕಾರಕ್ಕೆ 2000 ಕೋಟಿ ಆದಾಯ ಬಂದಿದೆ.
ಏನು ಪ್ರಯೋಜನ: ಪಾಸ್ ಪೋರ್ಟ್ ದುರ್ಬಳಕೆ, ನಕಲಿ ಪಾಸ್ ಪೋರ್ಟ್ ಬಳಕೆ ತಡೆಗಟ್ಟಬಹುದು. ಒಮ್ಮೆ ಚಿಪ್ ಗೆ ದಾಖಲಾದ ಮಾಹಿತಿ ಅಳಿಸಲು ಆಗುವುದಿಲ್ಲ. ಚಿಪ್ ನಲ್ಲಿರುವ ಮಾಹಿತಿಯನ್ನು ನಿಮ್ಮ ಗಮನಕ್ಕೆ ಬಾರದೆ ಬೇರೆಯೊಬ್ಬರು ಓದಲು ಬರುವುದಿಲ್ಲ. ಪಾಸ್ ಪೋರ್ಟ್ ಪುಟದಲ್ಲಿರುವ ಮಾಹಿತಿಯನ್ನೇ ಇ ಪಾಸ್ ಪೋರ್ಟ್ ನಲ್ಲೂ ದಾಖಲಿಸಿರುವುದರಿಂದ ಈ ಬಗ್ಗೆ ಹೆಚ್ಚಿನ ಅತಂಕ ಬೇಡ.
ನನ್ನ ಬಳಿ ಪಾಸ್ ಪೋರ್ಟ್ ಇದೆ. ಇ ಪಾಸ್ ಪೋರ್ಟ್ ಪಡೆಯುವುದು ಹೇಗೆ?
ಪಾಸ್ ಪೋರ್ಟ್ ಪರಿಷ್ಕರಣೆಗಾಗಿ ಸರಳ ಅರ್ಜಿ ಭರ್ತಿ ಮಾಡಿ ಚಾಲ್ತಿಯಲ್ಲಿರುವ ಪಾಸ್ ಪೋರ್ಟ್ ಬದಲಿಗೆ ಇ ಪಾಸ್ ಪೋರ್ಟ್ ಬಳಸುವುದರ ಬಗ್ಗೆ ಮನವಿ ಸಲ್ಲಿಸಬಹುದು. ಹಾಲಿ ಪಾಸ್ ಪೋರ್ಟ್ 12 ತಿಂಗಳುಗಳ ಕಾಲ ಅವಧಿ ಹೊಂದಿದ್ದರೆ ಬಾಕಿ ಮೊತ್ತವನ್ನು ಪಾವತಿಸಿ ಇ ಪಾಸ್ ಪೋರ್ಟ್ ಪಡೆದುಕೊಳ್ಳಬಹುದು. ಅದರೆ, ಬಳಕೆ ಮಾಡುತ್ತಿರುವ ಪಾಸ್ ಪೋರ್ಟ್ ಅನ್ನು ಬದಲಿಸಲೇಬೇಕಾದ ಯಾವುದೇ ನಿಯಮವಿಲ್ಲ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications