Get Updates
Get notified of breaking news, exclusive insights, and must-see stories!

Mizoram assembly election: 'ಶಾಂತಿ ಮತ್ತು ಸಮೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ನೀಡಿ' ಮಿಜೋರಾಂ ಮತದಾರರಿಗೆ ಸೋನಿಯಾ ಗಾಂಧಿ ಮನವಿ

ಮಿಜ್ರೋಮ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಸಂಪೂರ್ಣ ಸಿದ್ಧವಾಗಿವೆ. ಈ ನಡುವೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಿಜೋರಾಂ ಜನತೆಗೆ ಮನವಿ ಮಾಡುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ನವೆಂಬರ್ 7 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಆಯ್ಕೆ ಮಾಡುವಂತೆ ಮಿಜೋರಾಂ ಜನತೆಗೆ ಸೋನಿಯಾ ಗಾಂಧಿ ಅವರು ಬುಧವಾರ ಮನವಿ ಮಾಡಿದ್ದಾರೆ. ಯಾವುದೇ ಪ್ರಯೋಗಕ್ಕೆ ಸಮಯವಿಲ್ಲ, ಈಶಾನ್ಯ ರಾಜ್ಯದಲ್ಲಿ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ಹಾಕಬೇಕು ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

Vote Congress for peace and prosperity Sonia Gandhi appeals to Mizoram voters

ಸೋನಿಯಾ ಗಾಂಧಿ ವಿಡಿಯೋ ಶೇರ್

ವೀಡಿಯೊ ಸಂದೇಶದಲ್ಲಿ ಅವರು ವಿಶೇಷವಾಗಿ ಯುವಕರು ಮತ್ತು ಮಹಿಳೆಯರಿಗೆ ವೈಯಕ್ತಿಕವಾಗಿ ಮನವಿ ಮಾಡಿದರು. ಕಾಂಗ್ರೆಸ್ ಅನುಭವ ಮತ್ತು ಭದ್ರತೆಯ ಕೈಯಾಗಿದೆ. ಮಿಜೋರಾಂನ ಅಭಿವೃದ್ಧಿ, ಅದರ ಜನರ ಸಬಲೀಕರಣ ಮತ್ತು ಸಮಾಜದ ಅತ್ಯಂತ ದುರ್ಬಲರ ರಕ್ಷಣೆಯನ್ನು ಖಾತರಿಪಡಿಸುವ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ ಎಂದು ಅವರು ಹೇಳಿದರು. ಈ ವೇಳೆ ಕರ್ನಾಟಕ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ಪಕ್ಷವು ನೀಡಿದ ಭರವಸೆಗಳನ್ನು ಹೇಗೆ ಈಡೇರಿಸಿದೆ ಎಂಬುದನ್ನು ಸೋನಿಯಾ ಗಾಂಧಿ ನೆನಪಿಸಿದರು.

3 ನಿಮಿಷದ ವಿಡಿಯೋದಲ್ಲಿ ಸೋನಿಯಾ ಗಾಂಧಿ ಹೇಳಿದ್ದೇನು?

ಮೂರು ನಿಮಿಷಗಳ ವಿಡಿಯೋದಲ್ಲಿ ಸೋನಿಯಾ ಗಾಂಧಿ ಅವರು ಮಿಜೋರಾಂ ಜನರೊಂದಿಗಿನ ತಮ್ಮ ವೈಯಕ್ತಿಕ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ. ಅವರು ತಮ್ಮ ಪತಿ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೊಂದಿಗೆ ಮಿಜೋರಾಂ ಭೇಟಿಯನ್ನು ಪ್ರಸ್ತಾಪಿಸಿದರು.

'ನಿಮಗೆಲ್ಲ ತಿಳಿದಿರುವಂತೆ ಮಿಜೋರಾಂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನಾನು ವರ್ಷಗಳಲ್ಲಿ ಹಲವಾರು ಬಾರಿ ಭೇಟಿ ನೀಡಿದ್ದೇನೆ. ನಿಮ್ಮ ಸಂಪ್ರದಾಯಗಳು ಮತ್ತು ಸಂಸ್ಕೃತಿ, ನಿಮ್ಮ ನೆಲದ ಸೌಂದರ್ಯ ಮತ್ತು ಶ್ರೀಮಂತಿಕೆಯು ನನ್ನ ಮೇಲೆ ಆಳವಾದ ಪ್ರಭಾವ ಬೀರಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ನಿಮ್ಮ ಪ್ರೀತಿಯನ್ನು ಎಂದಿಗೂ ಮರೆಯುವುದಿಲ್ಲ. ಜೂನ್ 30, 1986 ರಂದು ಐತಿಹಾಸಿಕ ಮಿಜೋ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ನಾನು ನನ್ನ ಕುಟುಂಬದೊಂದಿಗೆ ಮಾಡಿದ ಭೇಟಿಯನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ' ಎಂದು ಅವರು ಹೇಳಿದರು.

ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಸೋನಿಯಾ ಗಾಂಧಿ ವಾಗ್ದಾಳಿ

ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದ ಸೋನಿಯಾ ಗಾಂಧಿ, 'ಮಿಜೋರಾಂ, ಈಶಾನ್ಯ ಮತ್ತು ಭಾರತದಾದ್ಯಂತ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ಪ್ರಜಾಪ್ರಭುತ್ವವು ಇಂದು ಅಪಾಯದಲ್ಲಿದೆ. ಅವರು ವೈವಿಧ್ಯತೆ, ಪ್ರಜಾಪ್ರಭುತ್ವ ಅಥವಾ ಸಂಭಾಷಣೆಗೆ ಬೆಲೆ ಕೊಡುವುದಿಲ್ಲ. ಅವರು ಭಾರತದಾದ್ಯಂತ ಏಕರೂಪತೆಯನ್ನು ಜಾರಿಗೊಳಿಸಲು ಬಯಸುತ್ತಾರೆ. ಸಂಸತ್ತಿನಲ್ಲಿ ಬಿಜೆಪಿಯು ಆದಿವಾಸಿಗಳ ಭೂಮಿ ಮತ್ತು ಅರಣ್ಯದ ಮೇಲಿನ ಹಕ್ಕುಗಳನ್ನು ದುರ್ಬಲಗೊಳಿಸುವ ಕಾನೂನುಗಳನ್ನು ಜಾರಿಗೊಳಿಸುತ್ತದೆ. ಮಿಜೋರಾಂ ಸಂಸದರಿಗೆ ಮಾತನಾಡಲು ಸಹ ಅವಕಾಶ ನೀಡುವುದಿಲ್ಲ' ಎಂದರು.

ಪ್ರಧಾನಿ ಮೋದಿ ಮೌನ

ಮಣಿಪುರದಲ್ಲಿ ಬಿಜೆಪಿ ಸಮಾಜವನ್ನು ಕೆಟ್ಟದಾಗಿ ವಿಭಜಿಸಿದೆ. ಸಂಕಟದಿಂದ ಆರು ತಿಂಗಳು ಕಳೆದರೂ ಶಾಂತಿ ಮತ್ತು ಸೌಹಾರ್ದತೆಯ ಕಡೆಗೆ ಯಾವುದೇ ಪ್ರಯತ್ನಗಳು ನಡೆದಿಲ್ಲ. ಪ್ರಧಾನಿಯವರು ಸಂಪೂರ್ಣವಾಗಿ ಮೌನವಾಗಿದ್ದಾರೆ. ಈವರೆಗೂ ಕೆಲವು ಗಂಟೆಗಳ ಕಾಲ ಮಣಿಪುರಕ್ಕೆ ಭೇಟಿ ನೀಡುವುದು ಸೂಕ್ತವೆಂದು ಪರಿಗಣಿಸಿಲ್ಲ ಎಂದು ಸೋನಿಯಾ ಕಿಡಿ ಕಾರಿದರು.

ಮಿಜೋರಾಂನ ಅಭಿವೃದ್ಧಿ, ಅದರ ಜನರ ಸಬಲೀಕರಣ ಮತ್ತು ಸಮಾಜದ ಅತ್ಯಂತ ದುರ್ಬಲರ ರಕ್ಷಣೆಯನ್ನು ಕಾಂಗ್ರೆಸ್ ಮಾತ್ರ ಖಾತರಿಪಡಿಸುತ್ತದೆ ಎಂದು ಪ್ರತಿಪಾದಿಸಿದ ಸೋನಿಯಾ ಗಾಂಧಿ, 'ಸರ್ಕಾರದಲ್ಲಿನ ನಮ್ಮ ಟ್ರ್ಯಾಕ್ ರೆಕಾರ್ಡ್ ನಾವು ನಮ್ಮ ಭರವಸೆಗಳನ್ನು ಉಳಿಸಿಕೊಂಡಿದ್ದೇವೆ ಎಂಬುದನ್ನು ತೋರಿಸುತ್ತದೆ. ಆದ್ದರಿಂದ, ನಾನು ವಿಶೇಷವಾಗಿ ಮಿಜೋರಾಂನ ಯುವಕರಿಗೆ, ಮಿಜೋರಾಂನ ಮಹಿಳೆಯರಿಗೆ ವೈಯಕ್ತಿಕ ಮನವಿ ಮಾಡುತ್ತೇನೆ. ಪ್ರಯೋಗ ಮಾಡಲು ಇದು ಸಮಯವಲ್ಲ. ದಯವಿಟ್ಟು ಅನುಭವದ ಹಸ್ತ ಮತ್ತು ಭದ್ರತೆಯ ಹಸ್ತದಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+