ಮದರಸಾಗಳಲ್ಲಿ ಎನ್ಸಿಇಆರ್ಟಿ ಪಠ್ಯಕ್ರಮ, ವಸ್ತ್ರಸಂಹಿತೆ ತರಲು ಉತ್ತರಾಖಂಡ ಸಜ್ಜು
ಡೆಹರಾಡೂನ್, ನವೆಂಬರ್ 24: ರಾಜ್ಯದಲ್ಲಿ ಮದರಸಾ ಶಿಕ್ಷಣವನ್ನು ಆಧುನೀಕರಿಸುವ ಪ್ರಯತ್ನದ ಭಾಗವಾಗಿ ಉತ್ತರಾಖಂಡ ವಕ್ಫ್ ಮಂಡಳಿಯು ಮುಂದಿನ ವರ್ಷದಿಂದ ತನ್ನ ಮದರಸಾಗಳಲ್ಲಿ ಎನ್ಸಿಇಆರ್ಟಿ ಪಠ್ಯಕ್ರಮ ಮತ್ತು ವಸ್ತ್ರಸಂಹಿತೆಯನ್ನು ಪರಿಚಯಿಸಲು ನಿರ್ಧರಿಸಿದೆ.
ಎಲ್ಲಾ ಧರ್ಮದ ಮಕ್ಕಳಿಗಾಗಿ ತನ್ನ ಮದರಸಾಗಳ ಬಾಗಿಲು ತೆರೆಯಲು ಮಂಡಳಿಯು ನಿರ್ಧರಿಸಿದೆ ಎಂದು ಉತ್ತರಾಖಂಡ ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಾಮ್ಸ್ ಗುರುವಾರ ಪಿಟಿಐಗೆ ತಿಳಿಸಿದ್ದಾರೆ. ಮಂಡಳಿಯು ಉತ್ತರಾಖಂಡದಲ್ಲಿ 103 ಮದರಸಾಗಳನ್ನು ನಡೆಸುತ್ತಿದೆ.
ಬೀದರ್ನ ಮದರಸಾಗೆ ಅಕ್ರಮ ಪ್ರವೇಶ, ಪೂಜೆ; 9 ಜನರ ವಿರುದ್ಧ ಪ್ರಕರಣ, ನಾಲ್ವರ ಬಂಧನ
ಮಂಡಳಿಯು ತನ್ನ ಮದರಸಾಗಳಲ್ಲಿ ಬೆಳಿಗ್ಗೆ 6.30 ರಿಂದ 7.30 ರವರೆಗೆ ಕೇವಲ ಒಂದು ಗಂಟೆ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡಲು ನಿರ್ಧರಿಸಿದೆ. ಇತರ ಶಾಲೆಗಳಂತೆ ಪ್ರತಿದಿನ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಸಾಮಾನ್ಯ ವಿಷಯಗಳ ತರಗತಿಗಳನ್ನು ನಡೆಸುತ್ತದೆ. ನಮ್ಮ ಮದರಸಾಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಮಾದರಿಯಲ್ಲಿ ಎನ್ಸಿಇಆರ್ಟಿ ಪಠ್ಯಕ್ರಮ ಮತ್ತು ವಸ್ತ್ರಸಂಹಿತೆಯನ್ನು ಪರಿಚಯಿಸುತ್ತೇವೆ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗುವ ಇತರ ಮಕ್ಕಳೊಂದಿಗೆ ಸಮಾನವಾಗಿ ಭಾವಿಸುತ್ತಾರೆ ಎಂದು ಶಾಮ್ಸ್ ಹೇಳಿದರು.
ಮದರಸಾ ವಿದ್ಯಾರ್ಥಿಗಳು ಶೈಕ್ಷಣಿಕ ಮುಖ್ಯವಾಹಿನಿಗೆ ಸೇರಲು ಮತ್ತು ಉತ್ತಮ ಭವಿಷ್ಯಕ್ಕಾಗಿ ಅವರನ್ನು ಸಿದ್ಧಪಡಿಸಲು ಈ ಆಲೋಚನೆ ಇದೆ. ಡೆಹ್ರಾಡೂನ್, ಹರಿದ್ವಾರ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳಲ್ಲಿ ತಲಾ ಎರಡು ಮತ್ತು ನೈನಿತಾಲ್ನಲ್ಲಿ ಸ್ಮಾರ್ಟ್ ತರಗತಿಗಳನ್ನು ನಡೆಸುವ ಏಳು ಮಾದರಿ ಮದರಸಾಗಳನ್ನು ರಚಿಸಲು ಮಂಡಳಿಯು ನಿರ್ಧರಿಸಿದೆ ಎಂದು ಅವರು ಹೇಳಿದರು.
Video: ಬೀದರ್ನಲ್ಲಿ ದಸರಾ ಆಚರಿಸಲು ಮದರಸಾಗೆ ನುಗ್ಗಿದ ಗುಂಪು!
"ಮದರಸಾಕ್ಕೆ ಹೋಗುವ ಮಕ್ಕಳು ಒಂದು ಕೈಯಲ್ಲಿ ಪವಿತ್ರ ಕುರಾನ್ ಮತ್ತು ಇನ್ನೊಂದು ಕೈಯಲ್ಲಿ ಲ್ಯಾಪ್ಟಾಪ್ ಹಿಡಿದುಕೊಂಡು ಹೋಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮದರಸಾಗಳು ಆಧುನಿಕ ಶಿಕ್ಷಣದ ಕೇಂದ್ರಗಳಾಗಿ ಹೊರಹೊಮ್ಮಬೇಕೆಂದು ನಾವು ಬಯಸುತ್ತೇವೆ" ಎಂದು ಶಾಮ್ಸ್ ಹೇಳಿದರು.
ಏತನ್ಮಧ್ಯೆ, ವಕ್ಫ್ ಮಂಡಳಿಯು ತನ್ನ ಮದರಸಾಗಳಲ್ಲಿ ಹಫೀಜ್-ಎ-ಕುರಾನ್ ಶಿಕ್ಷಣದ ಅವಧಿಯನ್ನು ನಾಲ್ಕು ವರ್ಷಗಳಿಂದ 10 ವರ್ಷಗಳಿಗೆ ವಿಸ್ತರಿಸಲು ನಿರ್ಧರಿಸಿದೆ. ಇದರಿಂದಾಗಿ ಕೋರ್ಸ್ ಮುಗಿಯುವ ಹೊತ್ತಿಗೆ ವಿದ್ಯಾರ್ಥಿಗಳು 10 ಅಥವಾ 12ನೇ ತರಗತಿಯಲ್ಲಿ ಉತ್ತೀರ್ಣರಾಗುತ್ತಾರೆ ಮತ್ತು ಸಾಕಷ್ಟು ಪ್ರಬುದ್ಧರಾಗುತ್ತಾರೆ. ಅವರು ಧಾರ್ಮಿಕ ಶಿಕ್ಷಣವನ್ನು ಪಡೆಯಬೇಕೆ ಅಥವಾ ವೈದ್ಯರು ಮತ್ತು ಇಂಜಿನಿಯರ್ಗಳಾಗಬೇಕೆ ಎಂದು ನಿರ್ಧರಿಸಲು ಅವರು ಹೇಳಿದರು.
"ಮದರಸಾ ಶಿಕ್ಷಣದ ಆಧುನೀಕರಣವು ಮಕ್ಕಳ ಚಟುವಟಿಕೆಗಳ ಮೇಲೆ ಆಗಾಗ್ಗೆ ಉಂಟಾಗುವ ಅನುಮಾನಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಉತ್ತರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಚಂದನ್ ರಾಮ್ ದಾಸ್ ಅವರು ಮದರಸಾಗಳನ್ನು ಆಧುನೀಕರಿಸುವ ಪ್ರಯತ್ನದಲ್ಲಿ ಮಂಡಳಿಗೆ ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಅವರು ಮದರಸಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಎನ್ಸಿಇಆರ್ಟಿ ಪುಸ್ತಕಗಳನ್ನು ನೀಡಲು ಮಂಡಳಿಯು ವಿನಂತಿಸುತ್ತದೆ ಎಂದು ಹೇಳಿದರು.