ನಕಲಿ ದಾಖಲೆಗಳು: ಇಬ್ಬರು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಲಿರುವ ಯುಪಿಎಸ್ಸಿ!
ನವದೆಹಲಿ, ಮೇ. 26: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದೇವೆ ಎಂದು ತಪ್ಪಿ ತಪ್ಪಾಗಿ ಘೋಷಿಸಿದ್ದ ಇಬ್ಬರು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮತ್ತು ಶಿಸ್ತಿನ ಕ್ರಮವನ್ನು ಪರಿಗಣಿಸುತ್ತಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಮಂಗಳವಾರ ಯುಪಿಎಸ್ಸಿ 2022 ರ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.
ಮಧ್ಯಪ್ರದೇಶದಿಂದ ಆಯಶಾ ಮಕ್ರಾನಿ ಮತ್ತು ಬಿಹಾರದ ತುಷಾರ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗುತ್ತಿದೆ. ಕೇಂದ್ರ ಲೋಕಸೇವಾ ಆಯೋಗವು 2022 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ನಿಜವಾಗಿ ಆಯ್ಕೆಯಾಗಿದ್ದ ಇಬ್ಬರು ಅಭ್ಯರ್ಥಿಗಳ ಎರಡು ರೋಲ್ ಸಂಖ್ಯೆ, ಸ್ಥಾನಗಳನ್ನು ಮೋಸದಿಂದ ಬಳಸಿದ್ದಾರೆ ಎಂದು ಆಯೋಗ ಹೇಳಿದೆ.

"ಇಬ್ಬರೂ ವ್ಯಕ್ತಿಗಳ ಹಕ್ಕುಗಳು ನಕಲಿಯಾಗಿದೆ. ಅವರು ತಮ್ಮ ಹಕ್ಕುಗಳನ್ನು ಸಮರ್ಥಿಸಲು ತಮ್ಮ ಪರವಾಗಿ ಎಲ್ಲಾ ದಾಖಲೆಗಳನ್ನು ನಕಲಿ ಮಾಡಿದ್ದಾರೆ" ಎಂದು ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ಹೀಗೆ ಮೋಸ ಮಾಡಿ ನಕಲಿ ದಾಖಲೆ ತಯಾರಿಸುವ ಮೂಲಕ, ಆಯಾಶಾ ಮಕ್ರಾನಿ ಮತ್ತು ತುಷಾರ್ ಇಬ್ಬರೂ ಭಾರತ ಸರ್ಕಾರ (ಸಿಬ್ಬಂದಿ ಮತ್ತು ತರಬೇತಿ ಇಲಾಖೆ) ಸೂಚಿಸಿರುವ ನಾಗರಿಕ ಸೇವಾ ಪರೀಕ್ಷೆಯ ನಿಯಮಗಳು, 2022 ರ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಆಯೋಗವು ಆರೋಪಿಸಿದೆ.
ಆದ್ದರಿಂದ, ಪರೀಕ್ಷಾ ನಿಯಮಗಳ ನಿಬಂಧನೆಗಳಿಗೆ ಅನುಸಾರವಾಗಿ, ಕೇಂದ್ರ ಲೋಕಸೇವಾ ಆಯೋಗವು ಇಬ್ಬರು ಅಭ್ಯರ್ಥಿಗಳ ವಿರುದ್ಧ ಅವರ ಮೋಸದ ಕೃತ್ಯಗಳಿಗಾಗಿ ಕ್ರಿಮಿನಲ್ ಮತ್ತು ಶಿಸ್ತಿನ ಕ್ರಮವನ್ನು ಆಲೋಚಿಸುತ್ತಿದೆ ಎಂದು ಹೇಳಿಕೆ ತಿಳಿಸಿದೆ.

" ಕೇಂದ್ರ ಲೋಕಸೇವಾ ಆಯೋಗವುದ ವ್ಯವಸ್ಥೆಯು ದೃಢವಾದ ಮತ್ತು ತಪ್ಪುಮಾಡಲು ಆಸ್ಪದವಿಲ್ಲದ ವ್ಯವಸ್ತೆಯಾಗಿದ್ದು, ಇಂತಹ ದೋಷಗಳು ಸಾಧ್ಯವಿಲ್ಲ" ಎಂದು ಹೇಳಿದೆ.
ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಇತ್ಯಾದಿಗಳ ಆಯ್ಕೆಗಾಗಿ ಅಧಿಕಾರಿಗಳಿಗೆ ಪೂರ್ವಭಾವಿ, ಮುಖ್ಯ ಮತ್ತು ಸಂದರ್ಶನವನ್ನು ಮೂರು ಹಂತಗಳಲ್ಲಿ ಯುಪಿಎಸ್ಸಿ ವಾರ್ಷಿಕವಾಗಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ನಡೆಸುತ್ತದೆ.
-
Gold Rate Jna 4: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬದಲಾವಣೆ -
KAS Officers Transfer: ರಾಜ್ಯ ಸರ್ಕಾರದಿಂದ 6 ಮಂದಿ ಕೆಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ -
ಉತ್ತರ ಕರ್ನಾಟಕದ ರೈಲು ಯೋಜನೆಗಳಿಗೆ ವೇಗ, ಹುಬ್ಬಳ್ಳಿಯಲ್ಲಿ 'ಮೆಗಾ ಟರ್ಮಿನಲ್' ನಿರ್ಮಾಣ: ಪ್ರಹ್ಲಾದ್ ಜೋಶಿ -
Ration Card: ಪಡಿತರ ಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ: ಇಲ್ಲಿದೆ ಬೇಕಾಗುವ ದಾಖಲೆಗಳ ವಿವರ -
Bengaluru Second Airport: ಬೆಂಗಳೂರು 2ನೇ ಏರ್ಪೋರ್ಟ್ ನಿರ್ಮಾಣಕ್ಕೆ ಈ ಭಾಗದ ಜಾಗಕ್ಕೆ ಆದ್ಯತೆ -
ಜನವರಿ 4 ರ ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ನಾಯಕತ್ವ ಸಾಮರ್ಥ್ಯ ನಿರೂಪಿಸಲು ಅವಕಾಶ -
ಮಾರ್ಚ್ನಿಂದ ₹500 ನೋಟು ರದ್ದಾಗಲಿದೆಯೇ? ವೈರಲ್ ಸುದ್ದಿ ಬಗ್ಗೆ ಇಲ್ಲಿದೆ ಸ್ಪಷ್ಟನೆ -
Teacher Recruitment: 4.47 ಲಕ್ಷ ಟಿಇಟಿ ಅರ್ಹರಲ್ಲಿ ಉದ್ಯೋಗ ಪಡೆದವರೆಷ್ಟು? ಪರೀಕ್ಷೆ ಸ್ಥಗಿತಕ್ಕೆ ಒತ್ತಾಯ -
Gold Price Today: ಬಂಗಾರ ಬೆಲೆ ಇಳಿಕೆ: ಇಲ್ಲಿದೆ ಜನವರಿ 3ರ ದರಪಟ್ಟಿ -
India vs New Zealand ODI: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಕನ್ನಡಿಗನಿಗೆ ಸ್ಥಾನ -
ಬೆಂಗಳೂರಿನ 65 ಎಕ್ರೆಯಲ್ಲಿ ಬೃಹತ್ ವೃಕ್ಷೋದ್ಯಾನ ನಿರ್ಮಾಣ, ಮಾರ್ಚ್ಗೆ ಗುಡ್ನ್ಯೂಸ್: ಎಂಬಿ ಪಾಟೀಲ್ -
Mysuru-Chitradurga Railway Line: ಮೈಸೂರು-ಚಿತ್ರದುರ್ಗ ರೈಲು ಮಾರ್ಗದ ಚಾಲನೆ ಬಗ್ಗೆ ಮಹತ್ವದ ಅಪ್ಡೇಟ್












Click it and Unblock the Notifications