ಸೆ.30: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್
ಬೆಂಗಳೂರು, ಸೆ. 30: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
14.50: ಏಷ್ಯನ್ ಗೇಮ್ಸ್ : ಮಂಗಳವಾರ ನಡೆದ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಅತಿಥೇಯ ದಕ್ಷಿಣ ಕೊರಿಯಾ ತಂಡವನ್ನು 0-1 ಅಂತರದಿಂದ ಸೋಲಿಸಿದ ಭಾರತದ ಪುರುಷರ ಹಾಕಿ ತಂಡ 17ನೇ ಏಷ್ಯನ್ ಗೇಮ್ಸ್ ನ ಫೈನಲ್ ತಲುಪಿ ಪದಕದ ಅಸೆ ಹುಟ್ಟಿಸಿದೆ.
14.15: ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಿ ಅಶ್ರಫ್ ಘನಿ ಅಹ್ಮದ್ಝಾಯಿ ಅಧಿಕಾರ ಸ್ವೀಕರಿಸಿದ್ದಾರೆ.
14.00: ಫೇಸ್ಬುಕ್ನಲ್ಲಿ ಅವಹೇಳನ ಚಿತ್ರವೊಂದು ಹಿನ್ನೆಲೆಯಲ್ಲಿ ಗುಜರಾತ್ನ ವಡೋದರಾ ನಗರದಲ್ಲಿ ಸಂಭವಿಸಿದ ಕೋಮು ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ಇಲ್ಲಿತನಕ 200 ಜನರನ್ನು ಬಂಧಿಸಲಾಗಿದೆ.
13.45: ಸ್ವಾತಂತ್ರ್ಯಹೋರಾಟಗಾರ ಭಗತ್ ಸಿಂಗ್ನ ಕಿರಿಯ ಸಹೋದರಿ ಬೀಬಿ ಪ್ರಕಾಶ್ ಕೌರ್ ಕೆನಡಾದ ಟೊರೊಂಟೊದಲ್ಲಿ ಇತ್ತೀಚೆಗೆ ನಿಧನರಾಗಿದ್ದಾರೆ.

10.20: ಬೆಂಗಳೂರಿಗೆ ಬಂದಿಳಿದ ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ. ಜಯಲಲಿತಾ ಅವರ ಪರ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಿದ್ದು 11.30 ನಂತರ ಕೋರ್ಟಿಗೆ ತೆರಳಿದ್ದಾರೆ.
10.15: ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಸೇರಿರುವ ಜಯಲಲಿತಾ ಅವರ ಆರೋಗ್ಯದಲ್ಲಿ ಏರುಪೇರಾಗಿಲ್ಲ. ಅವರು ಎಂದಿನಂತೆ ಆಹಾರ ಸೇವಿಸುತ್ತಿದ್ದು,ಹೊರಗಡೆ ಅಸ್ಪತ್ರೆಗೆ ಸೇರಿರುವ ಅಗತ್ಯ ಇಲ್ಲ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

9.50: ಗೃಹಸಚಿವ ರಾಜನಾಥ್ ಸಿಂಗ್ ಹಾಗೂ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ಅವರು ಸ್ವಚ್ಛತಾ ಅಭಿಯಾನ ಆರಂಭಿಸಿದ್ದಾರೆ.
9.45: ಜಯಲಲಿತಾ ಅವರ ಬಿಡುಗಡೆಗೆ ಆಗ್ರಹಿಸಿ ತಮಿಳುನಾಡಿನ ನಿರ್ಮಾಪಕರ ಸಂಘ ಮೌನಯುತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
9.30: ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.












Click it and Unblock the Notifications