ನ.20: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ನ.20: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
14.45: ನ್ಯಾಯಾಂಗ ನಿಂದನೆ ಆರೋಪದಡಿಯಲ್ಲಿ ಸ್ವಯಂ ಘೋಷಿತ ದೇವ ಮಾನವ ರಾಮ್ಪಾಲ್ ಜೈಲುಪಾಲಾಗಿದ್ದಾರೆ. ನ.28 ರ ತನಕ ನ್ಯಾಯಾಂಗ ಬಂಧನ ವಿಧಿಸಿ ಹರ್ಯಾಣ- ಪಂಜಾಬ್ ಹೈಕೋರ್ಟ್ ಆದೇಶಿಸಿದೆ.
13.30:
2006ರ
ಕೊಲೆ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಸ್ವಯಂಘೋಷಿತ
ದೇವಮಾನವ
ರಾಂಪಾಲ್
ಅವರ
ಜಾಮೀನನ್ನು
ಪಂಜಾಬ್
ಹಾಗೂ
ಹರ್ಯಾಣ
ಹೈಕೋರ್ಟ್
ಗುರುವಾರ
ರದ್ದುಮಾಡಿದೆ.
ತಕ್ಷಣವೇ
ಕಸ್ಟಡಿಗೆ
ತೆಗೆದುಕೊಳ್ಳುವಂತೆ
ಸೂಚಿಸಿದೆ.
11.30: ಮುಂದೊಂದು ದಿನ ನಾನು ಈ ದೇಶದ ಪ್ರಧಾನಮಂತ್ರಿಯಾಗಬಹುದು ಎಂದು ಬಿಹಾರ ಸಿಎಂ ಜಿತನ್ ರಾಮ್ ಮಂಝಿ ಅವರು ಬುಧವಾರ ಹೇಳಿದ್ದಾರೆ.
11.15:
ಮಣಿಪುರ
ಮೂಲದ
ಪಿಎಚ್
ಡಿ
ಪಡೆದಿರುವ
ವಿದ್ವಾಂಸ
ಜಿಂಗ್ರಾಂ
ಕೆಂಗೋ
ಅವರನ್ನು
ನವದೆಹಲಿಯ
ಕೋಟ್ಲಾದ
ಅವರ
ನಿವಾಸದಲ್ಲಿ
ಬರ್ಬರವಾಗಿ
ಹತ್ಯೆ
ಮಾಡಲಾಗಿದೆ.
ಘಟನೆ
ಬಗ್ಗೆ
ತಿಳಿದ
ಈಶಾನ್ಯ
ರಾಜ್ಯದ
ವಿದ್ಯಾರ್ಥಿಗಳು
ಆತಂಕ
ವ್ಯಕ್ತಪಡಿಸಿದ್ದಾರೆ.
11.10:
ಮಣಿಪುರ
ಮೂಲದ
22
ವರ್ಷ
ವಯಸ್ಸಿನ
ವಿದ್ಯಾರ್ಥಿ
ಸ್ಯಾಮುಯೆಲ್
ಎಂಬುವರ
ಮೇಲೆ
ಬೆಂಗಳೂರಿನಲ್ಲಿ
ಹಲ್ಲೆ
ನಡೆದಿದೆ,
ಪೊಲೀಸರು
ಪ್ರಕರಣ
ದಾಖಲಿಸಿಕೊಂಡು
ತನಿಖೆ
ನಡೆಸಿದ್ದಾರೆ.
11.00: ಇರಾಕಿನಲ್ಲಿ ಶಾಂತಿ ಮಾತುಕತೆಗಾಗಿ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಅವರು ಎರ್ಬಿಲ್ ಗೆ ತೆರಳಿದ್ದಾರೆ.
10.50: ಹತ್ತು ದಿನಗಳ ವಿದೇಶಿ ಪ್ರವಾಸ ಮುಗಿಸಿಕೊಂಡು ಭಾರತಕ್ಕೆ ಹಿಂತಿರುಗಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸ್ವಾಗತಿಸಿ ಬರಮಾಡಿಕೊಂಡಿದ್ದಾರೆ.