UP: ಕಪಾಳಮೋಕ್ಷ ಮಾಡಲು ಹೇಳಿದ್ದ ಶಾಲಾ ಶಿಕ್ಷಕಿ ಬಂಧನ, ಅಮಾನತು
ಬೆಂಗಳೂರು, ಸೆಪ್ಟಂಬರ್ 29: ಉತ್ತರ ಪ್ರದೇಶದ ಮುಜಾಫರ್ನಗರದ ಶಾಲಾ ಶಿಕ್ಷಕಿಯೊಬ್ಬರು ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು ತರಗತಿಯಲ್ಲಿ ಹಿಂದೂ ಹುಡುಗನಿಗೆ ಕಪಾಳಮೋಕ್ಷ ಮಾಡಲು ಹೇಳಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಜೊತೆಗೆ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಶಾಲಾ ಶಿಕ್ಷಕಿ ಹೇಳಿದರು ಎಂದು ಹಿಂದೂ ವಿದ್ಯಾರ್ಥಿಗೆ ತನ್ನ ಸಹಪಾಠಿ ಮುಸ್ಲಿಂ ಹುಡುಗನಿಗೆ ಕಪಾಳಮೋಕ್ಷ ಮಾಡುವಂತೆ ತಿಳಿಸಿದ್ದರು. ಅದರಂತೆ ಕಪಾಳಮೋಕ್ಷ ಘಟನೆ ನಡೆದಿತ್ತು ಎನ್ನಲಾದ ವಿಡಿಯೋವೊಂದು ಮುಜಾಫರ್ನಗರದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ನಂತರ ಕೆಲವು ವಾರಗಳ ಬಳಿಕ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.

ವರದಿಗಳ ಪ್ರಕಾರ, ಸೆಪ್ಟೆಂಬರ್ 26 ರಂದು ಸಜಿಶ್ತಾ ಎಂದು ಗುರುತಿಸಲಾದ ಶಿಕ್ಷಕಿ 5 ನೇ ತರಗತಿ ವಿದ್ಯಾರ್ಥಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಆ ವಿದ್ಯಾರ್ಥಿಗೆ ಪ್ರಶ್ನೆ ಕೇಳಲು ಉತ್ತರಿಸಲು ಸಾಧ್ಯವಾಗದ ನಂತರ, ಶಿಕ್ಷಕರು ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಲು ಹೇಳಿದರು.
ಕಪಾಳಮೋಕ್ಷಕ್ಕೆ ಒಳಗಾದ ಮುಸ್ಲಿಂ ವಿದ್ಯಾರ್ಥಿ ಘಟನೆ ನಂತರ ಅಸಮಾಧಾನಗೊಂಡು ಮನೆಯಲ್ಲಿ ವಿಷಯ ತಿಳಿಸಿದ್ದಾನೆ. ಆಗ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿ ತಂದೆ ಮಗನನ್ನು ಘಟನೆ ಕುರಿತು ವಿವರಣ ಪಡೆದಿದ್ದಾರೆ. ಮರುದಿನವೇ ಶಾಲಾ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಆಧರಿಸಿ ಶಿಕ್ಷಕರನ್ನು ಸೆಪ್ಟೆಂಬರ್ 28 ರಂದು ಬಂಧಿಸಲಾಗಿಯಿತು. ಇವತ್ತು ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಯಿತು. ಉತ್ತರ ಪ್ರದೇಶದ ಮುಜಾಫರ್ನಗರದ ಖಾಸಗಿ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಮುಸ್ಲಿಂ ಸಹಪಾಠಿಗೆ ಕಪಾಳಮೋಕ್ಷ ಮಾಡುವಂತೆ ತರಗತಿಯಲ್ಲಿ ವಿದ್ಯಾರ್ಥಿಗೆ ಸೂಚಿಸಿದ ತಿಂಗಳ ನಂತರ ಪ್ರಕರಣ ಬಗ್ಗೆ ಪ್ರಾಥಮಿಕ ವರದಿ ಪಡೆಯಲಾಗಿತ್ತು. ಅಲ್ಲಿಂದ ಒಂದು ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.












Click it and Unblock the Notifications