ನಾಪತ್ತೆಯಾದ ವ್ಯಕ್ತಿಗೆ ಮನೆ ಹುಡುಕಿ ಕೊಟ್ಟ ಆಧಾರ್ ಕಾರ್ಡ್!
ರಾಯ್ ಬರೇಲಿ, ಡಿಸೆಂಬರ್ 22: ಬ್ಯಾಂಕ್ ಅಕೌಂಟ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ ಕೊನೆಗೆ ಫೋನ್ ನಂಬರ್ ಗೂ ಆಧಾರ್ ಜೋಡಿಸಿ ಎಂದಾಗ, ಅಯ್ಯೋ ಇದೆಂಥ ತಾಪತ್ರಯ ಎಂದು ಮೂಗು ಮುರಿದವರೇ ಹೆಚ್ಚು. ಅಷ್ಟಕ್ಕೂ ಈ ಆಧಾರ್ ಕಾರ್ಡ್ ನಮಗೆ ಅಗತ್ಯವಿತ್ತಾ ಎಂದೂ ಕೆಲವರು ಪ್ರಶ್ನಿಸುತ್ತಲೇ ಇದ್ದಾರೆ. ಆದರೆ ಈ ಆಧಾರ್ ಕಾರ್ಡ್ ನಾಪತ್ತೆಯಾದ ಒಬ್ಬ ವ್ಯಕ್ತಿಯನ್ನು ವಾಪಸ್ ತನ್ನ ಮನೆಗೆ ತಲುಪಿಸಿದೆ ಎಂದರೆ ನಂಬುತ್ತೀರಾ..?
ಉತ್ತರ ಪ್ರದೇಶ ರಾಯ್ ಬರೇಲಿಯ ರಸ್ತೆಯೊಂದರಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬ, ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಸ್ವಾಮಿ ಭಾಸ್ಕರ್ ಎಂಬುವವರು ಹಿದಿಯಲ್ಲಿ ಮಾತನಾಡಿಸಿದರೂ ಅವರು ಯಾವ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಅವರಿಗೆ ಹಿಂದಿ ಮಾತನಾಡುವುದಕ್ಕೆ ಬರುತ್ತಿರಲಿಲ್ಲ. ನಂತರ ಅವರ ಬಟ್ಟೆಯಲ್ಲಿದ್ದ ಆಧಾರ್ ಕಾರ್ಡ್ ನೋಡಿದಾಗ ಅದರಲ್ಲಿದ್ದ ಅಡ್ರೆಸ್ ಮೂಲಕ ಅವರು ತಮಿಳುನಾಡಿನವರೆಂಬುದು ತಿಳಿದಿದೆ.

ಅಷ್ಟೇ ಅಲ್ಲ, ಅವರ ಬಳಿ ಇದ್ದ ಬ್ಯಾಂಕ್ ದಾಖಲೆ ಪತ್ರಗಳ ಮೂಲಕ ಅವರೊಬ್ಬ ಶ್ರೀಮಂತ ವ್ಯಾಪಾರಿಯಾಗಿದ್ದರು ಎಂಬುದೂ ಪತ್ತೆಯಾಗಿತ್ತು!
ಮತ್ತಯ್ಯ ನದಾರ್ ಎಂಬ ಹೆಸರಿನ ಅವರನ್ನು ಸೆಲೂನ್ ಗೆ ಕರೆದೊಯ್ದು ಕೂದಲು, ಗಡ್ಡವನ್ನು ಕತ್ತರಿಸಿ, ನಂತರ ಫೋನ್ ನಂಬರ್ ಪತ್ತೆ ಮಾಡಿ, ಅವರ ಕುಟುಂಬಕ್ಕೆ ಸ್ವಾಮಿ ಭಾಸ್ಕರ್ ಅವರು ಮಾಹಿತಿ ನೀಡಿದ್ದರು.
ವಿಷಯ ತಿಳಿದ ಅವರ ಮಗಳು ಗೀತಾ ರಾಯ್ ಬರೇಲಿಗೆ ಬಂದು, ಸ್ವಾಮಿ ಅವರಿಗೆ ಧನ್ಯವಾದ ಅರ್ಪಿಸಿ ಮುತ್ತಯ್ಯ ಅವರನ್ನು ಮನೆಗೆ ಕರೆದೊಯ್ದಿದ್ದಾರೆ. ತಾವು ಉತ್ತರ ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದ ಸಮಯದಲ್ಲಿ ಅವರು ರೈಲ್ವೇ ಸ್ಟೇಶನ್ನಿನಲ್ಲಿ ನಾಪತ್ತೆಯಾಗಿದ್ದರು. ನಂತರ ಅವರನ್ನು ಹುಡುಕಲು ಬಹಳ ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ. ಅಲ್ಲದೆ ಅವರಿಗೆ ನೆನಪಿನ ಶಕ್ತಿಯೂ ಇರಲಿಲ್ಲ ಎಂದು ಗೀತಾ ಅವರು ಹೇಳಿದ್ದಾರೆ.
-
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ












Click it and Unblock the Notifications