5ಲಕ್ಷ ತೆರಿಗೆ ಮಿತಿ ಏರಿಕೆ: ವಿಧಿಯಿಲ್ಲದೆ 1ನಿಮಿಷ ಬಜೆಟ್ ಭಾಷಣ ನಿಲ್ಲಿಸಿದ ಪಿಯೂಶ್
ಚುನಾವಣೆ ಹತ್ತಿರ ಬರುತ್ತಿರುವುದರಿಂದ ಯಾವುದೇ ಪಕ್ಷದ ಸರಕಾರ ಇದ್ದರೂ ಜನಪರ ಬಜೆಟ್ ಮಂಡಿಸುವುದು ಸಾಮಾನ್ಯ. ಅಂತೆಯೇ, ನರೇಂದ್ರ ಮೋದಿ ಸರಕಾರ ಕೂಡಾ ಅದನ್ನೇ ಮಾಡಿದೆ. ಅದರಲ್ಲಿ ಪ್ರಮುಖವಾದದ್ದು, ತೆರಿಗೆ ಮಿತಿ ಏರಿಕೆ.
ಇದನ್ನು ಕುಮಾರಸ್ವಾಮಿ ಬಾಂಬೆ ಮಿಠಾಯಿ ಎಂದಾದರೂ ಹೇಳಲಿ, ಸರಕಾರ ಮತದಾರರಿಗೆ ಲಂಚ ನೀಡುತ್ತಿದೆ ಎಂದು ಖರ್ಗೆ ಸಾಹೇಬ್ರಾದರೂ ಹೇಳಲಿ, ಮೋದಿ ಬಳಗದ ಕೊನೆಯ ನಾಟಕ ಎಂದು ರಾಹುಲ್ ಗಾಂಧಿ ಅಣಕವಾಡಿದರೂ, ಒಟ್ಟಿನಲ್ಲಿ ಚುನಾವಣೆಯ ಹೆಸರಿನಲ್ಲಾದರೂ ಮಧ್ಯಮವರ್ಗ ಕೊಂಚ ನಿಟ್ಟುಸಿರು ಬಿಡುವಂತಾಗಿದ್ದಂತೂ ಹೌದು.

ಮೂಲತಃ ಸಿಎ ರ್ಯಾಂಕ್ ಪಡೆದಿರುವ, ಹಣಕಾಸು ಸಚಿವ ಸ್ಥಾನವನ್ನೂ ನಿಭಾಯಿಸುತ್ತಿರುವ ಪಿಯೂಶ್ ಗೋಯಲ್, ಐದು ಲಕ್ಷದ ವರೆಗೆ ತೆರಿಗೆ ವಿನಾಯತಿ ಎಂದು ಬಜೆಟ್ ಪ್ರಸ್ತಾವನೆ ಸಲ್ಲಿಸುತ್ತಿದ್ದಂತೆಯೇ, ಅದು ಲೋಕಸಭೆಯೋ ಅಥವಾ ಸಾರ್ವಜನಿಕ ಸಭೆಯೋ ಎನ್ನುವ ರೀತಿಯಲ್ಲಿ ಬೆಂಬಲ ವ್ಯಕ್ತವಾಯಿತು. ಅದು ಎಷ್ಟರ ಮಟ್ಟಿಗೆ ಎಂದರೆ ಸುಮಾರು ಒಂದು ನಿಮಿಷ, ಪಿಯೂಶ್ ತಮ್ಮ ಬಜೆಟ್ ಭಾಷಣವನ್ನೇ ನಿಲ್ಲಿಸಬೇಕಾಯಿತು.
ಆಡಳಿತ ಪಕ್ಷದ ಸದಸ್ಯರು ಮೇಜುತಟ್ಟಿ ಸ್ವಾಗತಿಸುತ್ತಿದ್ದರೆ, ಪ್ರಧಾನಿ ಮೋದಿ ಕೂಡಾ ತಮ್ಮ ಸಂಸದರನ್ನು ಹುರಿದುಂಬಿಸಲು ತಾನೂ ಮೇಜು ತಟ್ಟಲಾರಂಭಿಸಿದರು. ಇದರಿಂದ ಇನ್ನಷ್ಟು ಉತ್ತೇಜಿತರಾದ ಎನ್ಡಿಎ ಮೈತ್ರಿಕೂಟದ ಸಂಸದರು, ಚಪ್ಪಾಳೆಯ ಜೊತೆ, 'ಮೋದಿ..ಮೋದಿ'' ಎಂದು ಘೋಷಣೆ ಕೂಗಲಾರಂಭಿಸಿದರು.
ಸುಮಾರು ಒಂದು ನಿಮಿಷ, ಪಿಯೂಶ್ ನಗುತ್ತಾ ಬಜೆಟ್ ಭಾಷಣವನ್ನು ಮುಂದುವರಿಸದೇ ಹಾಗೆಯೇ ನಿಂತಿದ್ದರು. ರಾಹುಲ್ ಗಾಂಧಿಯಾದಿಯಾಗಿ ವಿರೋಧ ಪಕ್ಷದ ಸದಸ್ಯರು ಮುಖದ ಮೇಲೆ ಕೈಯಿಟ್ಟುಕೊಂಡು ಗಂಭೀರವಾಗಿ ಕೂತಿದ್ದರು.
ಒಂದು ನಿಮಿಷದ ನಂತರವೂ ಸಂಸದರ ಕರತಾಡನ ಕಮ್ಮಿಯಾಗಿರಲಿಲ್ಲ, ಆದರೆ, ಪಿಯೂಶ್ ಗೋಯಲ್ ಇದರ ಮಧ್ಯೆಯೇ ಬಜೆಟ್ ಭಾಷಣ ಮುಂದುವರಿಸಲು ಆರಂಭಿಸಿದ್ದರಿಂದ, ಎಲ್ಲರೂ ಬಜೆಟ್ ಭಾಷಣ ಕೇಳಲಾರಂಭಿಸಿದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications