Uniform Civil Code: ಅಧಿವೇಶನಲ್ಲಿ ಯುಸಿಸಿ ಬಗ್ಗೆ ಪ್ರಸ್ತಾಪ ಸಾಧ್ಯತೆ : ಏನಿದು ಏಕರೂಪ ನಾಗರಿಕ ಸಂಹಿತೆ?
ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ, ಏಕರೂಪ ನಾಗರಿಕ ಸಂಹಿತೆ ಮತ್ತು ಮಹಿಳಾ ಮೀಸಲಾತಿ ಮಸೂದೆಗಳನ್ನು ಪರಿಚಯಿಸಲು ಸರ್ಕಾರ ಪರಿಗಣಿಸುತ್ತಿದೆ ಎಂದು ಹೇಳಲಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಐದು ದಿನಗಳ ಅಧಿವೇಶನ ನಡೆಯುವುದಾಗಿ ಮಾಹಿತಿ ನೀಡಿದ್ದಾರೆ. ಉತ್ತಮ ಚರ್ಚೆಗಳು ಮತ್ತು ವಾದಗಳು ನಡೆಯುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.
ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ವಿಚಾರ ಈಗಿನದ್ದಲ್ಲ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಇದನ್ನು ಜಾರಿ ಮಾಡಲು ಆಸಕ್ತಿ ಹೊಂದಿದೆ. ಈಗ ಲೋಕಸಭಾ ಚುನಾವಣೆ ಹತ್ತಿರುವಾಗುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇದನ್ನು ಜಾರಿ ಮಾಡುವ ಮೂಲಕ ರಾಜಕೀಯವಾಗಿಯೂ ಲಾಭ ಪಡೆಯುವ ಲೆಕ್ಕಾಚಾರ ಹೊಂದಿದೆ ಎಂದು ಹೇಳಲಾಗಿದೆ.

ಏಕರೂಪ ನಾಗರಿಕ ಸಂಹಿತೆ ಎಂದರೇನು?
ಏಕರೂಪ ನಾಗರಿಕ ಸಂಹಿತೆ (UCC) ಹೆಸರೇ ಹೇಳುವಂತೆ ದೇಶದ ಎಲ್ಲಾ ನಾಗರಿಕರಿಗೂ ಒಂದೇ ಕಾನೂನು ಎಂದು ಅರ್ಥ. ಪ್ರಸ್ತುತ ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರ ಸೇರಿದಂತೆ ವಿಷಯಗಳು ಧರ್ಮ ಆಧಾರಿತ ವೈಯಕ್ತಿಕ ಕಾನೂನುಗಳ ಮೇಲೆ ನಿರ್ಧಾರವಾಗುತ್ತಿವೆ. ಆದರೆ ಈ ಕಾಯ್ದೆ ಜಾರಿಯಾದ ಬಳಿಕ, ಎಲ್ಲಾ ಧರ್ಮದವರಿಗೂ ಒಂದೇ ಕಾನೂನು ಅನ್ವಯ ಆಗಲಿದೆ.
ಸಂಹಿತೆ ಬಗ್ಗೆ ಸಂವಿಧಾನ ಹೇಳುವುದೇನು
ಏಕರೂಪ ನಾಗರಿಕ ಸಂಹಿತೆಯು ರಾಜ್ಯ ನೀತಿಯ ನಿರ್ದೇಶನ ತತ್ವಗಳನ್ನು (DPSP) ಒಳಗೊಂಡಿರುವ ಸಂವಿಧಾನದ ಭಾಗ IV ರ ಭಾಗವಾಗಿದೆ. ಡಿಪಿಎಸ್ಪಿಯಲ್ಲಿನ 44 ನೇ ವಿಧಿಯು "ಭಾರತದ ಪ್ರದೇಶದಾದ್ಯಂತ ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಪಡೆಯಲು ರಾಜ್ಯವು ಪ್ರಯತ್ನಿಸುತ್ತದೆ" ಎಂದು ಹೇಳುತ್ತದೆ.
ಭಾರತೀಯ ಸಂವಿಧಾನದ ರಚನೆಯ ಸಮಯದಲ್ಲಿ ನಡೆದ ಚರ್ಚೆಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರಸ್ತಾವನ್ನು ನೋಡಬಹುದು. ಡಾ ಬಿ.ಆರ್ ಅಂಬೇಡ್ಕರ್ ಸೇರಿದಂತೆ ಸಂವಿಧಾನ ಸಭೆಯ ಕೆಲವು ಸದಸ್ಯರು ಲಿಂಗ ಸಮಾನತೆ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸಲು ಯುಸಿಸಿ ಅಗತ್ಯವೆಂದು ನಂಬಿದ್ದರು. ಆದರೂ, ನಜೀರುದ್ದೀನ್ ಅಹ್ಮದ್ ಸೇರಿದಂತೆ ಇತರ ಅನೇಕ ಸದಸ್ಯರು ತಮ್ಮ ಒಪ್ಪಿಗೆಯಿಲ್ಲದೆ ವಿವಿಧ ಸಮುದಾಯಗಳ ಧಾರ್ಮಿಕ ಕಾನೂನುಗಳನ್ನು ಹಾಳು ಮಾಡಬಾರದು ಎಂದು ಪ್ರತಿಪಾದಿಸಿದ್ದರು.
ವೈವಿಧ್ಯತೆಗೆ ಮಾರಕವಾಗುತ್ತಾ?
ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಹಲವು ಆತಂಕ ಕೂಡ ಇದೆ. ಭಾರತವು ವೈವಿಧ್ಯಮಯ ದೇಶವಾಗಿದ್ದು, ವಿವಿಧ ಧಾರ್ಮಿಕ ಸಮುದಾಯಗಳು ತಮ್ಮದೇ ಆದ ವೈಯಕ್ತಿಕ ಕಾನೂನುಗಳನ್ನು ಅನುಸರಿಸುತ್ತವೆ. ಉದಾಹರಣೆಗೆ : ಹೆಚ್ಚಿನ ಧರ್ಮಗಳಲ್ಲಿ ಉತ್ತರಾಧಿಕಾರದ ಕಾನೂನುಗಳು ಗಂಡು ಮಕ್ಕಳ ಪರವಾಗಿವೆ. ಮುಸ್ಲಿಂ ಮಹಿಳೆಯರಿಗೆ ಕಾನೂನುಬದ್ಧ ವಿವಾಹ ವಯಸ್ಸು ಇತರರಿಗಿಂತ ಭಿನ್ನವಾಗಿದೆ. ಕೆಲವು ಧಾರ್ಮಿಕ ಮತ್ತು ಸಾಂಪ್ರದಾಯಿಕ ವೈಯಕ್ತಿಕ ಕಾನೂನುಗಳು ಬಹುಪತ್ನಿತ್ವಕ್ಕೆ ಅನುಮತಿ ಕೊಟ್ಟರೆ, ಬೇರೆ ಧರ್ಮಗಳಲ್ಲಿ ಅದಕ್ಕೆ ಅವಕಾಶ ಇರುವುದಿಲ್ಲ. ಅದೇ ರೀತಿ, ವಿವಿಧ ಧಾರ್ಮಿಕ ಕಾನೂನುಗಳಲ್ಲಿ ವಿಚ್ಛೇದನ ಮತ್ತು ಜೀವನಾಂಶದ ಆಧಾರಗಳು ಕೂಡ ವಿಭಿನ್ನವಾಗಿರುತ್ತವೆ.
ಯಾವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಇದನ್ನು ಅಳವಡಿಸಿಕೊಂಡಿವೆ?
ಗುಜರಾತ್, ಮಧ್ಯಪ್ರದೇಶ ಮತ್ತು ಅಸ್ಸಾಂ ಸೇರಿದಂತೆ ಹಲವು ಬಿಜೆಪಿ ಆಡಳಿತದ ರಾಜ್ಯಗಳು ಏಕರೂಪ ನಾಗರಿಕ ಸಂಹಿತೆಯನ್ನು ಅನುಸರಿಸಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದರೂ, ಯಾರೂ ಅದನ್ನು ಅಧಿಕೃತವಾಗಿ ಅಳವಡಿಸಿಕೊಂಡಿಲ್ಲ.
ಆದರೂ, ಯುಸಿಸಿಯ ಮಾದರಿಯು ಗೋವಾದಲ್ಲಿ ಜಾರಿಯಲ್ಲಿದೆ. ಇದು 1867 ರ ಪೋರ್ಚುಗೀಸ್ ಸಿವಿಲ್ ಕೋಡ್ ಅನ್ನು ಅನುಸರಿಸುತ್ತದೆ, ಗೋವಾದ ಎಲ್ಲಾ ಧರ್ಮಗಳ ಜನರು ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರದ ಮೇಲೆ ಒಂದೇ ಕಾನೂನುಗಳಿಗೆ ಒಳಪಟ್ಟಿರುತ್ತಾರೆ. 1961 ರಲ್ಲಿ ಗೋವಾ ಒಕ್ಕೂಟಕ್ಕೆ ಸೇರಿದ ನಂತರ ಅಂಗೀಕರಿಸಲ್ಪಟ್ಟ 1962 ರ ಗೋವಾ ದಮನ್ ಮತ್ತು ದಿಯು ಆಡಳಿತ ಕಾಯಿದೆಯು ಗೋವಾಗೆ ನಾಗರಿಕ ಸಂಹಿತೆಯನ್ನು ಅನ್ವಯಿಸಲು ಅನುಮತಿ ನೀಡಿದೆ.
ಶಾ ಬಾನೋ ಪ್ರಕರಣ
1985 ರಲ್ಲಿ ಶಾ ಬಾನೋ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಬೇಕೆಂಬ ಬೇಡಿಕೆಯು ಹಲವು ಬಾರಿ ಬಂದಿತ್ತು. ಪತಿಯಿಂದ ವಿಚ್ಛೇದನ ಪಡೆದಿರುವ ಮುಸ್ಲಿಂ ಮಹಿಳೆ ಶಾ ಬಾನೊ ಅವರಿಗೆ ಆರ್ಥಿಕ ನೆರವು ನೀಡುವಂತೆ ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ. ಇದು ಮುಸ್ಲಿಂ ವೈಯಕ್ತಿಕ ಕಾನೂನುಗಳಿಗೆ ವಿರುದ್ಧವಾದ ಕಾರಣದಿಂದ ಹಿನ್ನಡೆಗೆ ಕಾರಣವಾಯಿತು. ಆದರೆ, ಧಾರ್ಮಿಕ ಸಂಪ್ರದಾಯವಾದಿಗಳನ್ನು ಕೆಣಕಲು ಬಯಸದ ರಾಜೀವ್ ಗಾಂಧಿ ಸರ್ಕಾರ ಇದನ್ನು ರದ್ದುಗೊಳಿಸಿತು.
ಯುಸಿಸಿ ಪರವಾಗಿ ವಾದಗಳು
ರಾಷ್ಟ್ರೀಯ ಸಮಗ್ರತೆ ಮತ್ತು ಲಿಂಗಗಳು ಮತ್ತು ಧರ್ಮಗಳ ಸಮಾನತೆಗೆ ಯುಸಿಸಿ ಮುಖ್ಯವಾಗಿದೆ ಎಂದು ಹಲವರು ನಂಬುತ್ತಾರೆ. ಧರ್ಮವನ್ನು ಆಧರಿಸಿದ ವೈಯಕ್ತಿಕ ಕಾನೂನುಗಳು ಕೆಲವೊಮ್ಮೆ ತಾರತಮ್ಯದ ಆಚರಣೆಗಳಿಗೆ ಕಾರಣವಾಗಬಹುದು, ವಿಶೇಷವಾಗಿ ಮಹಿಳೆಯರ ವಿರುದ್ಧ ಎಂದು ಸಂಹಿತೆಯನ್ನು ಬೆಂಬಲಿಸುವವರ ವಾದವಾಗಿದೆ.
ಮತ್ತೊಂದು ವಾದವೆಂದರೆ ಸಾಮಾನ್ಯ ನಾಗರಿಕ ಸಂಹಿತೆಯು ಭಾರತದಲ್ಲಿ ಜಾತ್ಯತೀತತೆಯ ತತ್ವಗಳನ್ನು ಬಲಪಡಿಸುತ್ತದೆ. ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನವು ಉತ್ತರಾಧಿಕಾರ ಮತ್ತು ವಿಚ್ಛೇದನದ ವಿಷಯದಲ್ಲಿ ಕಾನೂನನ್ನು ಸುಲಭಗೊಳಿಸುತ್ತದೆ ಮತ್ತು ಬಹಳಷ್ಟು ಹಳೆಯ ಧಾರ್ಮಿಕ ವೈಯಕ್ತಿಕ ಕಾನೂನುಗಳನ್ನು ಹೊರಹಾಕುತ್ತದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಯುಸಿಸಿ ಜಾರಿಗೆ ವಿರೋಧ ಯಾಕೆ?
ಇದನ್ನು ವಿರೋಧಿಸುವ ಜನರು ಯುಸಿಸಿ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಬಹುದು ಮತ್ತು ಧಾರ್ಮಿಕ ಆಚರಣೆಗಳೊಂದಿಗೆ ಸಂಘರ್ಷ ಉಂಟು ಮಾಡಬಹುದು ಎಂದು ಹೇಳುತ್ತಾರೆ. ಭಾರತವು ವಿವಿಧ ಸಂಸ್ಕೃತಿಗಳನ್ನು ಹೊಂದಿರುವ ವೈವಿಧ್ಯಮಯ ರಾಷ್ಟ್ರವಾಗಿರುವುದರಿಂದ, ವಿವಿಧ ಸಮುದಾಯಗಳು ತಮ್ಮ ವಿಭಿನ್ನ ಪದ್ಧತಿಗಳು ಮತ್ತು ಆಚರಣೆಗಳನ್ನು ಕಾಪಾಡಿಕೊಳ್ಳುವ ಹಕ್ಕನ್ನು ಹೊಂದಿರಬೇಕು ಮತ್ತು ಅವರ ಒಪ್ಪಿಗೆಯಿಲ್ಲದೆ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಕಾನೂನನ್ನು ಜಾರಿಗೊಳಿಸಬಾರದು ಎಂದು ವಾದಿಸುತ್ತಾರೆ.
-
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ












Click it and Unblock the Notifications