ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸೇರಿದ ಶಾಸಕರಿಂದ ಮಮತಾ ಬ್ಯಾನರ್ಜಿಗೆ ಆಘಾತದ ಸುದ್ದಿ!

|
Google Oneindia Kannada News

ನವದೆಹಲಿ, ಮೇ 28: ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಿದೆ.

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನ ಇಬ್ಬರು ಮತ್ತು ಸಿಪಿಎಂ ನ ಓರ್ವ ಶಾಸಕ ಬಿಜೆಪಿ ಸೇರಿದ್ದಾರೆ. ಇಂದು ಬಿಜೆಪಿ ಮುಖಂಡರ ನೇತೃತ್ವದಲ್ಲಿ ಅವರು ಪಕ್ಷಕ್ಕೆ ಸೇರಿದರು. ಟಿಎಂಸಿಯಿಂದ ಅಮಾನತುಗೊಂಡ ಸುಬ್ರಂಗ್ಶು ರಾಯ್(ಮುಕುಲ್ ರಾಯ್ ಪುತ್ರ),ತುಷಾರಕ್ರಾಂತಿ ಭಟ್ಟಾಚಾರ್ಜಿ, ಸಿಪಿಎಂನ ದೇವೇಂದ್ರ ರಾಯ್ ಬಿಜೆಪಿ ಸೇರಿದ್ದಾರೆ. ಈ ಸಂದರ್ಭದಲ್ಲಿ ಟಿಎಂಸಿಯ 60 ಕ್ಕೂ ಹೆಚ್ಚು ಕಾರ್ಯಕರ್ತರು ಸಹ ಬಿಜೆಪಿ ಸೇರಿದರು. ಬಿಜೆಪಿ ಸೇರಿದ ನಂತರ ಶಾಸಕರು 'ಜೈ ಶ್ರೀರಾಮ್' ಘೋಷಣೆ ಕೂಗಿದ್ದು ವಿಶೇಷವಾಗಿತ್ತು.

Two TMC MLAs and one CPM MLA from West Bengal join BJP

 ಮಮತಾ ಬ್ಯಾನರ್ಜಿಗೆ ಮತ್ತೆ ಭಾರೀ ಆಘಾತ, ಬಿಜೆಪಿಯತ್ತ ಮೂವರು ಶಾಸಕರು ಮಮತಾ ಬ್ಯಾನರ್ಜಿಗೆ ಮತ್ತೆ ಭಾರೀ ಆಘಾತ, ಬಿಜೆಪಿಯತ್ತ ಮೂವರು ಶಾಸಕರು

ಪಕ್ಷಕ್ಕೆ ಸೇರಿದ ನಂತರ ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಿದ ಮೂವರು ಶಾಸಕರೂ, 'ಲೋಕಸಭೆ ಚುನಾವಣೆ ಬೇರೆ ಬೇರೆ ಹಂತಗಳಲ್ಲಿ ನಡೆದಂತೆಯೇ ಇನ್ನೂ ಹಲವರು ಬಿಜೆಪಿ ಸೇರಲಿದ್ದಾರೆ. ಇದು ಹಂತ ಹಂತವಾಗಿ ನಡೆಯಲಿದೆ. ಇದು ಮೊದಲ ಹಂತ ಅಷ್ಟೇ' ಎಂದು ಶಾಸಕರು ಹೇಳಿದ್ದು, ಮಮತಾ ಬ್ಯಾನರ್ಜಿಗೆ ಈ ಸುದ್ದಿ ಆಘಾತವನ್ನುಂಟು ಮಾಡಿದೆ. ಬಿಜೆಪಿಯೂ ಶಾಸಕರ ಮಾತನ್ನೇ ಮುನರುಚ್ಚರಿಸಿದ್ದು, ಇನ್ನೂ ಹಲವರು ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಸೂಚನೆಯನ್ನು ನೀಡಿದೆ.

ಆಘಾತಕಾರಿ ಸೋಲು: ರಾಜೀನಾಮೆಗೆ ಮಮತಾ ಬ್ಯಾನರ್ಜಿ ನಿರ್ಧಾರಆಘಾತಕಾರಿ ಸೋಲು: ರಾಜೀನಾಮೆಗೆ ಮಮತಾ ಬ್ಯಾನರ್ಜಿ ನಿರ್ಧಾರ

2017 ರಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಮುಕುಲ್ ರಾಯ್ ಅವರ ನೇತೃತ್ವದಲ್ಲಿ ಶಾಸಕರು ಬಿಜೆಪಿ ಸೇರಿದ್ದು, ಮೂವರೂ ಬಾರಾಕ್ಪೋರ್ ಲೋಕಸಭೆ ಕ್ಷೇತ್ರದ ಅಡಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಸದಸ್ಯರಾಗಿದ್ದರು.

English summary
Two TMC MLAs and one CPM MLA from West Bengal join BJP at party headquarters in Delhi. More than 50 Councillors also join BJP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X