ಕೇಬಲ್ ಟಿವಿ ಶುಲ್ಕ ಇಳಿಕೆ; ಕಡಿಮೆ ಬೆಲೆಗೆ ಹೆಚ್ಚು ಚಾನೆಲ್
ಬೆಂಗಳೂರು, ಜನವರಿ 02 : ಹೊಸ ವರ್ಷದ ಆರಂಭದಲ್ಲಿ ಟ್ರಾಯ್ ಕೇಬಲ್ ಟಿವಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಹಲವು ನಿಯಮಗಳು ಬದಲಾಗಲಿದ್ದು, ಇದರಿಂದಾಗಿ ಮಾಸಿಕ ದರಗಳು ಸಹ ಕಡಿಮೆಯಾಗಲಿವೆ.
ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ( ಟ್ರಾಯ್) ಕೇಬಲ್ ಟಿವಿ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರಲಿದೆ. ಕೇಬಲ್ ದರಗಳು ಜಾಸ್ತಿ ಎಂಬ ದೂರಿನ ಹಿನ್ನಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. 2020ರ ಮಾರ್ಚ್ 1ರಿಂದ ಅನ್ವಯವಾಗುವಂತೆ ಹೊಸ ನಿಯಮ ಜಾರಿಗೆ ಬರಲಿವೆ.
ಹೊಸ ನಿಯಮಗಳ ಅನ್ವಯ ಗ್ರಾಹಕರು ಕಡಿಮೆ ಶುಲ್ಕದಲ್ಲೇ ಹೆಚ್ಚಿನ ಮೊತ್ತದ ಚಾನೆಲ್ಗಳನ್ನು ಪಡೆಯಬಹುದು. ಕೇಬಲ್ ಟಿವಿ ಮತ್ತು ಡಿಟಿಎಚ್ ಗ್ರಾಹಕರು ಅಗ್ಗದ ದರದಲ್ಲಿ ಸೇವೆಗಳನ್ನು ಪಡೆಯಬಹುದಾಗಿದೆ.
ಕೇಬಲ್ ಟಿವಿ ಪ್ರಸಾರಕರು ಟ್ರಾಯ್ ನಿಯಮಗಳ ಅನ್ವಯ ಬದಲಾವಣೆಗಳನ್ನು ಮಾಡಿ ಜನವರಿ 15ರೊಳಗೆ ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು. ಮಾರ್ಚ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಕಡಿಮೆ ದರದಲ್ಲಿ ಗ್ರಾಹಕರಿಗೆ ಹೆಚ್ಚಿನ ಚಾನೆಲ್ ಸಿಗಲಿದೆ. ಬದಲಾವಣೆಯಾದ ನಿಯಮಗಳ ವಿವರಗಳು ಇಲ್ಲಿವೆ...

ಎನ್ಸಿಎಫ್ ಶುಲ್ಕ
ಟ್ರಾಯ್ ಹೊಸ ನಿಯಮಗಳ ಅನ್ವಯ ಮಾಸಿಕ ಕಡ್ಡಾಯವಾಗಿ ಪಾವತಿ ಮಾಡಬೇಕಾದ ಎನ್ಸಿಎಫ್ ಶುಲ್ಕವನ್ನು 130ಕ್ಕೆ ಸೀಮಿತಗೊಳಿಸಲಾಗಿದೆ (ತೆರಿಗೆ ಬಿಟ್ಟು). ಅಂದರೆ ಕೇಬಲ್ ಆಪರೇಟರ್ಗಳು 150 ರೂ.ಗಳಿಗೆ 200 ಉಚಿತ ಚಾನೆಲ್ ಕೊಡಬೇಕು. ಈಗ ಕೇವಲ 100 ಚಾನೆಲ್ ನೀಡುತ್ತಿದ್ದಾರೆ. ಒಂದು ವೇಳೆ ಎನ್ಸಿಎಫ್ ಶುಲ್ಕವನ್ನು 160 ರೂ. ಪಡೆದರೆ (ತೆರಿಗೆ ಬಿಟ್ಟು) ಅದಕ್ಕೆ ಲಭ್ಯವಿರುವ ಎಲ್ಲಾ ಉಚಿತ ಚಾನೆಲ್ಗಳನ್ನು ನೀಡಬೇಕು.

200 ಚಾನೆಲ್ ವ್ಯಾಪ್ತಿಗೆ ಬರುವುದಿಲ್ಲ
ಕೇಂದ್ರ ಸರ್ಕಾರ ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ಪಟ್ಟಿ ಮಾಡಿರುವ 200 ಚಾನೆಲ್ ಎನ್ಸಿಎಫ್ ವ್ಯಾಪ್ತಿಗೆ ಸೇರುವುದಿಲ್ಲ. ಈ ಚಾನೆಲ್ ಹೊರತುಪಡಿಸಿ 150 ರೂ.ಗೆ ಕೇಬಲ್ ಆಪರೇಟರ್ಗಳು 200 ಉಚಿತ ಚಾನೆಲ್ ನೀಡಬೇಕು.
ಪ್ರಸಾರಕರು ಕ್ಯಾರಿಯೇಜ್ ಶುಲ್ಕದ ರೂಪದಲ್ಲಿ ಡಿಪಿಒಗಳಿಗೆ ನೀಡಬೇಕಿದ್ದ ಶುಲ್ಕದ ಮೇಲೆ ಗರಿಷ್ಠ 4 ಲಕ್ಷ ರೂ. ಮಿತಿಯನ್ನು ಹೇರಲಾಗಿದೆ.

ಶೇ 40ರಷ್ಟು ಶುಲ್ಕ ವಿಧಿಸಬಹುದು
ಒಬ್ಬ ಬಳಕೆದಾರನ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸಂಪರ್ಕವಿದ್ದರೆ ಆತನಿಗೆ 2 ಮತ್ತು ಆ ನಂತರ ಪಡೆಯುವ ಪ್ರತಿ ಮೊದಲ ಸಂಪರ್ಕಕ್ಕೆ ಶೇ 40ರಷ್ಟನ್ನು ಮಾತ್ರ ಎನ್ಸಿಎಫ್ ಶುಲ್ಕವಾಗಿ ವಿಧಿಸಬಹುದಾಗಿದೆ.
12 ರೂ. ಮತ್ತು ಅದಕ್ಕಿಂತ ಕಡಿಮೆ ಶುಲ್ಕ ಹೊಂದಿರುವ ಚಾನೆಲ್ಗಳನ್ನು ಮಾತ್ರ ಆಪರೇಟರ್ಗಳು ಚಾನೆಲ್ ಗುಚ್ಛದಲ್ಲಿ ಸೇರಿಸಬೇಕಾಗಿದೆ.

ಚಾನೆಲ್ಗಳ ಗುಚ್ಛ
ಗುಚ್ಛಗಳಲ್ಲಿ ಲಭ್ಯವಿರುವ ಚಾನೆಲ್ಗಳನ್ನು ಗ್ರಾಹಕರು ಪ್ರತ್ಯೇಕವಾಗಿ ಪಡೆಯಲು ಬಯಸಿದರೆ ಸೇವಾ ಕಂಪನಿಗಳು ಪ್ರತಿ ಚಾನೆಲ್ಗೆ ವಿಧಿಸುವ ಶುಲ್ಕವು ಗುಚ್ಛದಲ್ಲಿ ಲಭ್ಯವಿರುವ ಎಲ್ಲಾ ಚಾನೆಲ್ಗಳ ಸರಾಸರಿ ಶುಲ್ಕದ ಒಂದೂವರೆ ಪಟ್ಟಿಗಿಂತ ಹೆಚ್ಚಾಗಿರಬಾರದು.
ಜನವರಿ 15ರೊಳಗೆ ಕೇಬಲ್ ಆಪರೇಟರ್ ಮತ್ತು ಸೇವಾ ಕಂಪನಿಗಳು ಅಗತ್ಯ ಬದಲಾವಣೆ ಮಾಡಿ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು.
-
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ












Click it and Unblock the Notifications