ಬಾಲ್ಯದ ಗೆಳತಿಗಾಗಿ ಸನ್ಯಾಸತ್ವ ತೊರೆದ ಬೌದ್ಧಗುರು
ಬಾಲ್ಯದ ಗೆಳತಿಯೊಬ್ಬಳ ಬಗ್ಗೆ ನನ್ನ ಹೃದಯಾಂತರಾಳದಲ್ಲಿ ಇರುವ ಅನುರಾಗವು ನನ್ನನ್ನು ಆಕೆಯತ್ತ ಸೆಳೆದಿದೆ. ಹಾಗಾಗಿ, ಮದುವೆಯಾಗಲು ನಿರ್ಧರಿಸಿದ್ದು, ನನ್ನ ಬೌದ್ಧ ಸನ್ಯಾಸತ್ವವನ್ನು ತೊರೆಯುತ್ತಿದ್ದೇನೆ ಎಂದ ಬೌದ್ಧ ಸನ್ಯಾಸಿ ಥಾಯೆ ದೋರ್ಜೆ.
ನವದೆಹಲಿ, ಮಾರ್ಚ್ 30: ಟಿಬೆಟ್ ನ ಬೌದ್ಧ ಗುರು (ಲಾಮಾ) ಪದವಿಯ ಪ್ರಮುಖ ಆಕಾಂಕ್ಷಿಯಾಗಿದ್ದ ಟಿಬೆಟ್ ನ ಬೌದ್ಧ ಸನ್ಯಾಸಿಯೊಬ್ಬರು, ಭಾರತದಲ್ಲಿರುವ ತಮ್ಮ ಬಾಲ್ಯದ ಗೆಳತಿಯೊಂದಿಗೆ ವಿವಾಹವಾಗಿ ಸನ್ಯಾಸತ್ವ ತೊರೆದಿದ್ದಾರೆಂದು ಮೂಲಗಳು ತಿಳಿಸಿದೆ.
ಹೀಗೆ, ಲಾಮಾ ಪದವಿಯ ರೇಸ್ ನಿಂದ ದೂರ ಸರಿದು ಸಂಸಾರಿಯಾದವರ ಹೆಸರು ಥಾಯೆ ದೋರ್ಜೆ (33).
ಗುರುವಾರ ಅವರ ಕಚೇರಿಯಿಂದ ಈ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಖುದ್ದು ಥಾಯೆ ಅವರೇ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಬಾಲ್ಯದ ಗೆಳತಿಯೊಬ್ಬಳ ಬಗ್ಗೆ ನನ್ನ ಹೃದಯಾಂತರಾಳದಲ್ಲಿ ಇರುವ ಅನುರಾಗವು ನನ್ನನ್ನು ಆಕೆಯತ್ತ ಸೆಳೆದಿದೆ. ಹಾಗಾಗಿ, ಮದುವೆಯಾಗಲು ನಿರ್ಧರಿಸಿದ್ದು, ನನ್ನ ಬೌದ್ಧ ಸನ್ಯಾಸತ್ವವನ್ನು ತೊರೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಯಾರು ಈ ಥಾಯೆ ದೋರ್ಜೆ?: ಹಲವಾರು ವರ್ಷಗಳ ಹಿಂದೆ ಜೀವಿಸಿದ್ದ ಕರ್ಮಾಪ ಲಾಮಾ ಎಂಬುವರ ಪುನರ್ಜನ್ಮ ಎಂದು ಚಿಕ್ಕವರಿದ್ದಾಗಿನಿಂದಲೂ ಹೇಳಿಕೊಳ್ಳುತ್ತಿದ್ದರು.
ಈಗ ಟಿಬೆಟ್ ನ ಬೌದ್ಧಗುರುವಾಗಿರುವ ದಲೈಲಾಮಾ ಅವರ ಉತ್ತರಾಧಿಕಾರಿ ಹುಡುಕಾಟ ನಡೆಯುತ್ತಿರುವುದರಿಂದ ಇವರೇ ಲಾಮಾ ಅವರ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿತ್ತು.
ಆದರೆ, ಇತ್ತೀಚೆಗೆ, ಥಾಯೆ ಅವರ ಆಶ್ರಮದ ಭಕ್ತರಲ್ಲಿ ಹಲವಾರು ಮಂದಿ, ದಲೈಲಾಮಾ ಅವರ ಪದವಿಗೆ ಉತ್ತರಾಧಿಕಾರಿಯಾಗಿ ಉರ್ಜಿನ್ ಟ್ರಿನ್ಲೆ (ಮತ್ತೊಬ್ಬ ಬೌದ್ಧ ಧರ್ಮಗುರು) ಅವರು ಆಯ್ಕೆಯಾಗಬೇಕೆಂದು ಬಯಸಿದ್ದರು. ಇದು, ಆಶ್ರಮದ ಭಕ್ತರು ಹಾಗೂ ಥಾಯೆ ಅವರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು.
ಇದೆಲ್ಲರ ನಂತರ, ಗುರುವಾರ ಥಾಯೆ ಅವರ ಕಚೇರಿಯು ಅವರ ಮದುವೆಯ ಬಗ್ಗೆ ಅಚ್ಚರಿಯ ಮಾಹಿತಿ ನೀಡಿ ಎಲ್ಲರನ್ನೂ ಚಕಿತಗೊಳಿಸಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications