Tomato price: ಟೊಮೆಟೊ ಬೆಳೆಗೆ ಕಾವಲು ಕಾಯುತ್ತಿದ್ದ ಆಂಧ್ರಪ್ರದೇಶದ ರೈತ ಬಲಿ, ವಾರದಲ್ಲಿ ಎರಡನೇ ಸಾವು

ಅಮರಾವತಿ, ಜುಲೈ. 18: ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಟೊಮೆಟೊ ಬೆಳೆಗೆ ಕಾವಲು ಕಾಯುತ್ತಿದ್ದ ವೇಳೆ ನಿದ್ದೆಗೆ ಜಾರಿದ ರೈತನ ಕತ್ತು ಹಿಸುಕಿ ಅಪರಿಚಿತರು ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಕಳೆದ ಏಳು ದಿನಗಳಲ್ಲಿ ಈ ಪ್ರದೇಶದಲ್ಲಿ ವರದಿಯಾದ ಎರಡನೇ ಸಾವು ಇದು. ದೇಶಾದ್ಯಂತ ಟೊಮೆಟೋ ಬೆಳೆಗೆ ಬೆಲೆ ಏರಿಕೆಯಾಗಿರುವ ಸಂದರ್ಭದಲ್ಲಿಯೇ ಈ ದಾರುಣ ಘಟನೆಗಳು ವರದಿಯಾಗುತ್ತಿವೆ.

ಅನ್ನಮಯ ಜಿಲ್ಲೆಯ ಪೆದ್ದ ತಿಪ್ಪಸಮುದ್ರ ಗ್ರಾಮದ ರೈತ ಬಟ್ಟುಲ ಮಧುಕರ ರೆಡ್ಡಿ (28) ಭಾನುವಾರ ರಾತ್ರಿ ತನ್ನ ಹೊಲದಲ್ಲಿ ಹಾಕಿರುವ ಟೊಮೆಟೋ ಬೆಳೆಗೆ ಕಾವಲು ಕಾಯಲು ಜಮೀನಿನಲ್ಲಿ ಮಲಗಿದ್ದಾಗ ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

Tomato Crisis

ಮೂಲಗಳ ಪ್ರಕಾರ, ಭಾನುವಾರ ಮಧ್ಯರಾತ್ರಿ ಅನ್ನಮಯ ಜಿಲ್ಲೆಯ ಪೆದ್ದ ತಿಪ್ಪ ಸಮುದ್ರದ ಬಳಿ ತನ್ನ ಹೊಲದಲ್ಲಿ ಹಾಕಿರುವ ಟೊಮೆಟೋ ಬೆಳೆಗೆ ಕಾವಲು ಕಾಯಲು ಜಮೀನಿನಲ್ಲಿ ಮಲಗಿದ್ದ ರೈತ ಮಧುಕರ್ ರೆಡ್ಡಿ ಅವರನ್ನು ದುಷ್ಕರ್ಮಿಗಳು ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ರಾಜ್ಯದಲ್ಲಿ ಇಬ್ಬರು ರೈತರನ್ನು ಕೇವಲ ಏಳು ದಿನಗಳ ಅಂತರದಲ್ಲಿ ಕೊಲೆ ಮಾಡಲಾಗಿದೆ.

ಸೋಮವಾರ ಬೆಳಗ್ಗೆ ಮಧುಕರ್ ರೆಡ್ಡಿ ಅವರ ಜಮೀನಿನ ಮೂಲಕ ಹೋಗುತ್ತಿದ್ದ ಸ್ಥಳೀಯರ ಮೃತದೇಹವನ್ನು ನೋಡಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ವಿವಾಹೇತರ ಸಂಬಂಧವೇ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಸ್ಥಳೀಯ ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿಎಸ್ಪಿ ಕೇಶಪ್ಪ ಅವರು ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲು ನಿರ್ಧರಿಸಲಾಗಿದೆ ಎಂದು ಭರವಸೆ ನೀಡಿದ್ದಾರೆ. "ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಾವು ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ಮಾಡುತ್ತಿದ್ದೇವೆ. ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ" ಎಂದು ಹೇಳಿದ್ದಾರೆ.

Tomato Crisis

ಇದಕ್ಕೂ ಮುನ್ನ ಜುಲೈ ಮೊದಲ ವಾರದಲ್ಲಿ ಟೊಮೇಟೊ ಮಾರಾಟ ಮಾಡಿ 30 ಲಕ್ಷ ರೂಪಾಯಿ ಗಳಿಸಿದ್ದ 62 ವರ್ಷದ ವ್ಯಕ್ತಿಯೊಬ್ಬನನ್ನು ಹಣಕ್ಕಾಗಿ ದರೋಡೆಕೋರರು ಕೊಲೆ ಮಾಡಲಾಗಿತ್ತು. ಇದೇ ಜಿಲ್ಲೆಯ ಮದನಪಲ್ಲಿ ಮಂಡಲದ ಬೋಡುಮಲ್ಲದಿನ್ನೆ ಗ್ರಾಮದಲ್ಲಿ ಜುಲೈ 13 ರಂದು ಟೊಮೆಟೊ ಕೃಷಿಕ ನರೇಂ ರಾಜಶೇಖರ್ ರೆಡ್ಡಿ (62) ಅವರ ಹತ್ಯೆಯ ನಂತರ ಈ ದುರಂತ ಘಟನೆ ನಡೆದಿದೆ.

"ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಮಾರಾಟ ಮಾಡುವ ಮೂಲಕ ಅಪಾತ ಪ್ರಮಾಣದ ಹಣವನ್ನು ಗಳಿಸಿದ ರೈತನನ್ನು ದರೋಡೆ ಮಾಡಲು ಯತ್ನಿಸಿದ್ದ ಆರೋಪಿಗಳು ಅವರನ್ನು ಕೊಲೆ ಮಾಡಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. 70 ಕ್ರೇಟ್ ಟೊಮೆಮೊ ಮಾರಾಟ ಮಾಡಿದ್ದ ರೈತ ರಾಜಶೇಖರ್ ರೆಡ್ಡಿ 30 ಲಕ್ಷ ಗಳಿಸಿದ್ದರು ಎಂದು ವರದಿಯಾಗಿದೆ.

ಅನ್ನಮಯ ಜಿಲ್ಲೆಯಲ್ಲಿ ಟೊಮೆಟೊ ರೈತರ ವಿರುದ್ಧ ಪದೇ ಪದೇ ನಡೆಯುತ್ತಿರುವ ಹಿಂಸಾಚಾರಗಳು ರೈತ ಸಮುದಾಯ ಮತ್ತು ಸ್ಥಳೀಯ ಅಧಿಕಾರಿಗಳಲ್ಲಿ ಕಳವಳವನ್ನು ಹೆಚ್ಚಿಸಿವೆ. ಪೊಲೀಸರು ಮತ್ತು ಸಂಬಂಧಿತ ಅಧಿಕಾರಿಗಳು ತಪ್ಪಿತಸ್ಥರನ್ನು ಬಂಧಿಸಲು ಮತ್ತು ಪ್ರದೇಶದ ರೈತರ ಸುರಕ್ಷತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಹೆಚ್ಚಿನ ರಾಜ್ಯಗಳಲ್ಲಿ, ಟೊಮೆಟೊ ಕೆಜಿಗೆ 150 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ ಮಾರುಕಟ್ಟೆಲ್ಲಿ ಕೇವಲ 2 ರೂಪಾಯಿಗೆ ಕೆಜಿ ಸಿಗುತ್ತಿದ್ದ ಟೊಮೆಟೊ ರೈತರು ಇಂದು ಕೆಜಿಗೆ 80 ರಿಂದ 100 ರೂಪಾಯಿಗೆ ಮಾರುತ್ತಿದ್ದಾರೆ. ಚಿಲ್ಲರೆ ವಲಯದಲ್ಲಿ ಟೊಮೆಟೊ ಬೆಲೆ 150 ದಾಟಿರುವುದು ಇದೇ ಮೊದಲು. ಕೆಲವು ವರ್ಷಗಳ ಹಿಂದೆ ಪ್ರತಿ ಕೆಜಿಗೆ 100 ರೂಪಾಯಿಗೆ ತಲುಪಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+