Tomato Price: ಟೊಮೆಟೊ ಹಾರದ ಜೊತೆ ರಾಜ್ಯಸಭೆಗೆ ಸಂಸದನ ಎಂಟ್ರಿ!
ದೇಶದಲ್ಲಿ ಎಲ್ಲಿ ಕೇಳಿದರೂ ಬರೀ ಟೊಮೆಟೊ ಸುದ್ದಿ, ಬರೀ ಟೊಮೆಟೊ ಬಗ್ಗೆ ಮಾತು. ಬೆಲೆ ಬಿದ್ದಾಗ ರಸ್ತೆಗೆ ಬೀಳುವ ಟೊಮೆಟೊ ದಿಢೀರ್ ಉಪ್ಪರಿಗೆ ಮೇಲೆ ಕೂತಿದೆ. ಅದ್ರಲ್ಲೂ ಕೆಲ ಭಾಗಗಳಲ್ಲಿ ಸೇಬು ರೇಟ್ನ ಮೀರಿಸಿ ಟೊಮೆಟೊ ಸೇಲ್ ಆಗ್ತಿದೆ. ಆದರೆ ಇದೇ ವೇಳೆ ಸಂಸದರೊಬ್ಬರು ಟೊಮೆಟೊ ಹಾರ ಹಾಕಿಕೊಂಡು ರಾಜ್ಯಸಭೆಗೆ ಎಂಟ್ರಿ ಕೊಟ್ಟಿದ್ದರು. ಈ ಅವತಾರ ನೋಡಿ ಸದನದಲ್ಲಿ ಅಲ್ಲೋಲ, ಕಲ್ಲೋಲವೇ ಉಂಟಾಗಿತ್ತು.
ದಿಢೀರ್ ಟೊಮೆಟೊ ಬೆಲೆ ಡಬಲ್ ಸೆಂಚ್ಯುರಿ ಭಾರಿಸಿದ್ದೇ ಭಾರಿಸಿದ್ದು ದೇಶದಲ್ಲಿ ಆಕ್ರೋಶ ಮೊಳಗಿತ್ತು. ಅದರಲ್ಲೂ ಬೆಲೆ ಏರಿಕೆಯನ್ನೇ ಅಸ್ತ್ರ ಮಾಡಿಕೊಂಡು ವಿಪಕ್ಷಗಳ ನಾಯಕರು ಕೇಂದ್ರ ಸರ್ಕಾರಕ್ಕೆ ಚಳಿ ಬಿಡಿಸುತ್ತಿದ್ದಾರೆ. ಇದೇ ವೇಳೆ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಆಮ್ ಆದ್ಮಿ ಪಕ್ಷದ ಸಂಸದ ಸುಶೀಲ್ ಕುಮಾರ್ ಗುಪ್ತಾ ರಾಜ್ಯಸಭೆಗೆ ಟೊಮೆಟೊ & ಶುಂಠಿಯ ಹಾರ ಹಾಕಿಕೊಂಡು ಎಂಟ್ರಿ ಕೊಟ್ಟಿದ್ದರು. ಇದನ್ನ ಕಂಡ ತಕ್ಷಣ ಸದನದಲ್ಲಿ ತಿಕ್ಕಾಟವೂ ಜೊರಾಗಿತ್ತು. ಅದರಲ್ಲೂ ರಾಜ್ಯಸಭೆ ಸಭಾಧ್ಯಕ್ಷರು ಆಪ್ ಸಂಸದನ ಈ ಅವತಾರ ನೋಡಿ ಏನಂದ್ರು ಗೊತ್ತಾ? ಮುಂದೆ ಓದಿ.

ಟೊಮೆಟೊ ಹಾರ ನೋಡಿ ಬೇಸರ!
ಹೌದು, ಟೊಮೆಟೊ ನೋಡಿದರೆ ಫುಲ್ ಖುಷ್ ಆಗೋ ಜನರು ಇರುವಾಗ ಇವತ್ತು ಮಾತ್ರ ಟೊಮೆಟೊ ಬೇಸರ ತರಿಸಿದೆ. ಅದರಲ್ಲೂ ಆಮ್ ಆದ್ಮಿ ಪಕ್ಷದ ಸಂಸದ ಸುಶೀಲ್ ಕುಮಾರ್ ಗುಪ್ತಾ ರಾಜ್ಯಸಭೆಗೆ ಟೊಮೆಟೊ & ಶುಂಠಿಯ ಹಾರ ಹಾಕಿಕೊಂಡು ಬಂದಿದ್ದಕ್ಕೆ ಆಕ್ರೋಶವೂ ವ್ಯಕ್ತವಾಗಿದೆ. ಆಪ್ ಸಂಸದನ ವಿರುದ್ಧ ಸಭಾಧ್ಯಕ್ಷ ಜಗದೀಪ್ ಧನಕರ್ ಆಕ್ಷೇಪ ವ್ಯಕ್ತಡಿಸಿದ್ದು, ಇದರಿಂದ ಭಾರಿ ನೋವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ರಾಜ್ಯಸಭೆಗೆ ಶುಂಟಿ ಮತ್ತು ಟೊಮೆಟೊ ಇದ್ದ ಹಾರ ಹಾಕಿಕೊಂಡ ಎಎಪಿ ಸಂಸದ ಎಂಟ್ರಿ ಕೊಟ್ಟ ಸಮಯ ಕೂಡ ಸಾಕಷ್ಟು ಗಮನ ಸೆಳೆಯಿತು. ರಾಜ್ಯಸಭೆಯಲ್ಲಿ ಅಧಿಕೃತ ದಾಖಲೆಗಳನ್ನು ಮಂಡಿಸುವಾಗ ಗುಪ್ತಾ ಟೊಮೆಟೊ ಹಾಗೂ ಶುಂಠಿಯ ಹಾರ ಧರಿಸಿ ಸದನಕ್ಕೆ ಎಂಟ್ರಿ ಕೊಟ್ಟರು. ಅಷ್ಟೇ ಅಲ್ಲ ಭಾರಿ ಗದ್ದಲದ ನಡುವೆ ಟೊಮೆಟೊ ಹಾಗೂ ಶುಂಠಿಯ ಹಾರ ಹಾಕಿಕೊಂಡಿದ್ದ ಸಂಸದ ಸುಶೀಲ್ ಕುಮಾರ್ ಗುಪ್ತಾ ಸಿಕ್ಕಿಹಾಕಿಕೊಂಡಿದ್ದು ಹೇಗೆ? ಮುಂದೆ ಓದಿ.
ಗದ್ದಲದ ನಡುವೆ ಕಂಡಿದ್ದು ಟೊಮೆಟೊ!
ಇನ್ನು ಕಲಾಪದ ವೇಳೆ ಕ್ವಿಟ್ ಇಂಡಿಯಾ ಚಳವಳಿ ಉಲ್ಲೇಖಿಸಿದ ಜಗದೀಪ್ ಧನಕರ್ ಎರಡು ನಿಮಿಷ ಮೌನಾಚರಣೆ ಮಾಡಲು ಸೂಚಿಸಿದರು. ಇದಾದ ನಂತರ ಅಧಿಕೃತ ದಾಖಲೆಗಳನ್ನು ಮಂಡಿಸಲಾಯಿತು. ಇದೇ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, 'ನೀವು ಕ್ವಿಟ್ ಇಂಡಿಯಾ ಚಳವಳಿ ಉಲ್ಲೇಖಿಸಿದ್ದೀರಿ. ನಾವು ಎರಡು ನಿಮಿಷ ಮೌನಾಚರಣೆ ಮಾಡಿದೆವು. ಆದರೆ ತುಷಾರ್ ಗಾಂಧಿಯನ್ನು ಇಂದು ಬಂಧಿಸಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಟಾಪಟಿ ನಡೆಯುವಾಗ ಸಂಸದ ಗುಪ್ತಾ ಅವರ ಕತ್ತಿನಲ್ಲಿದ್ದ ಟೊಮೆಟೊ ಹಾರ ಗಮನಿಸಿದ ಧನಕರ್ ಅವರು, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ग़रीब लोगों का ख़ून चूस रही 'Modi की महंगाई डायन'‼️
— AAP (@AamAadmiParty) August 9, 2023
Modi सरकार का ध्यान महंगाई की तरफ आकर्षित करने के लिए टमाटर और अदरक की माला पहन कर संसद पहुँचे AAP MP @DrSushilKrGupta pic.twitter.com/FkLEQxQAe7

ಖಡಕ್ ಎಚ್ಚರಿಕೆ ನೀಡಿದ ಸಭಾಧ್ಯಕ್ಷರು!
ಆಪ್ ಸಂಸದ ಗುಪ್ತಾ ಅವರ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಭಾಧ್ಯಕ್ಷ ಧನಕರ್ ಅವರು, 'ನಮ್ಮ ನಡವಳಿಕೆಗೆ ನಾವೇ ಗೆರೆ ಹಾಕಿಕೊಳ್ಳಬೇಕು. ಸುಶೀಲ್ ಗುಪ್ತಾ ಅವರು ಸಭೆಗೆ ಬಂದ ರೀತಿ ಸಭೆಯ ಅಧ್ಯಕ್ಷನಾಗಿ ನನಗೆ ಬೇಸರ ತರಿಸಿದೆ. ಯಾವ ಕ್ರಮ ತೆಗೆದುಕೊಳ್ಳಬಹುದು ಎಂದು ಆಡಳಿತ ಪಕ್ಷದ ಹಾಗೂ ವಿರೋಧ ಪಕ್ಷದ ನಾಯರ ಜತೆ ಚರ್ಚೆ ಮಾಡುತ್ತೇನೆ' ಎಂದು ಎಚ್ಚರಿಕೆ ಸಂದೇಶ ರವಾನಿಸಿದರು. ನಂತರ ಮಧ್ಯಾಹ್ನ 2ಕ್ಕೆ ಕಲಾಪವನ್ನ ಮುಂದೂಡಿದ್ರು. ಆದರೆ ಈ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಆಮ್ ಆದ್ಮಿ ಪಾರ್ಟಿ, 'ಮೋದಿ ಹಣದುಬ್ಬರ ಜನರ ರಕ್ತ ಹೀರುತ್ತಿದೆ. ಮೋದಿ ಸರ್ಕಾರದ ಗಮನ ಸೆಳೆಯಲು ಟೊಮೆಟೊ ಹಾಗೂ ಶುಂಠಿಯ ಹಾರ ಧರಿಸಿ ಸಂಸದರು ಸದನಕ್ಕೆ ಆಗಮಿಸಿದರು' ಎಂದು ಬರೆದುಕೊಂಡಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications