ಚಿತ್ರಗಳಲ್ಲಿ: ಕಮಲ್, ನೀತಾ ಅಂಬಾನಿಗೆ ಸನ್ಮಾನ
ಬೆಂಗಳೂರು, ಅ.18 : ಖ್ಯಾತ ಉದ್ಯಮಿ ರಿಲಯನ್ಸ್ ಸಂಸ್ಥೆ ಮಾಲೀಕ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರನ್ನು ಕಾಂಚಿ ಕಾಮಕೋಟಿ ಪೀಠ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಗಿದೆ.
ಕಾಂಚಿಪುರಂನ ಶ್ರೀಚಂದ್ರಶೇಖರ ಸರಸ್ವತಿ ವಿಶ್ವ ಮಹಾವಿದ್ಯಾಲಯದ ವತಿಯಿಂದ ನೀತಾ ಅಂಬಾನಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮಿಗಳು ನೀತಾ ಅವರಿಗೆ ಸನ್ಮಾನ ಪತ್ರ ನೀಡಿ ಆಶೀರ್ವಾದ ನೀಡಿದ್ದಾರೆ.
ಅತ್ತ ಮುಂಬೈನಲ್ಲಿ ಮುಂಬೈನಲ್ಲಿ ನಟ ಕಮಲ್ ಹಾಸನ್ ಅವರಿಗೆ ಮಹಾರಾಷ್ಟ್ರ ಚಲನಚಿತ್ರೋತ್ಸವದಲ್ಲಿ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಲಾಗಿದೆ. 15ನೇ ಮುಂಬೈ ಫಿಲಂ ಫೆಸ್ಟಿವಲ್ ನಲ್ಲಿ ಕಮಲ್ ಹಾಸನ್ ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಜಲಂಧರ್ ನಲ್ಲಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಪ್ರತಾಪ್ ಸಿಂಗ್ ಬಾಜ್ವಾ ಅವರು ಹಿಂದೂ ಸಮಾಚಾರ್ ಸಮೂಹ ಜತೆ ಸೇರಿ ಭಗವಾನ್ ವಾಲ್ಮೀಕಿ ಶೋಭಾ ಯಾತ್ರೆ ನಡೆಸಿದರು. ಉಳಿದಂತೆ ಮೈಸೂರಿನ ಬೆಟ್ಟದ ತಾಯಿ ಚಾಮುಂಡೇಶ್ವರಿ ಜಾತ್ರೆ ಚಿತ್ರ, ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ, ದೇವ್ ಪಟೇಲ್ ಜತೆ ಪಿಂಟೋ, ಚೆನ್ನೈನಲ್ಲಿ ಜಯಲಲಿತಾ ಸಂಭ್ರಮದ ಚಿತ್ರಗಳು ಇಲ್ಲಿವೆ ನೋಡಿ...

ನೀತಾ ಅಂಬಾನಿಗೆ ಸನ್ಮಾನ
ಕಾಂಚಿಪುರಂನ ಶ್ರೀಚಂದ್ರಶೇಖರ ಸರಸ್ವತಿ ವಿಶ್ವ ಮಹಾವಿದ್ಯಾಲಯದ ವತಿಯಿಂದ ನೀತಾ ಅಂಬಾನಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ನೀತಾ ಅಂಬಾನಿಗೆ ಆಶೀರ್ವಾದ
ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮಿಗಳು ನೀತಾ ಅವರಿಗೆ ಸನ್ಮಾನ ಪತ್ರ ನೀಡಿ ಆಶೀರ್ವಾದ ನೀಡಿದ್ದಾರೆ.

ಮುಂಬೈನಲ್ಲಿ
ಮುಂಬೈನಲ್ಲಿ ನಟ ಕಮಲ್ ಹಾಸನ್ ಅವರಿಗೆ ಮಹಾರಾಷ್ಟ್ರ ಚಲನಚಿತ್ರೋತ್ಸವದಲ್ಲಿ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಲಾಗಿದೆ.

ಪೋಸ್ ಕೋಡಿ ಪ್ಲೀಸ್
ಮುಂಬೈ: ಭಾರತೀಯ ನಟ ಕಮಲ್ ಹಾಸನ್ ಜತೆ ಗ್ರೀಕ್ ಮೂಲದ ಫ್ರೆಂಚ್ ಚಿತ್ರಕರ್ಮಿ ಕೋಸ್ಟಾ ಗವ್ರಾಸ್ ಪೋಸ್ ಕೊಟ್ಟಿದ್ದಾರೆ. ಗೌತಮಿ ಚಿತ್ರ ತೆಗೆಯುತ್ತಿದ್ದಾರೆ.

ಕಮಲ್ ಫ್ಯಾಮಿಲಿ
ಕಮಲ್ ಅವರ ಹೊಸ ಫ್ಯಾಮಿಲಿ ಫೋಟೊ, ಗೌತಮಿ, ಕಮಲ್ ಜತೆ ಪುತ್ರಿ ಸುಬ್ಬಲಕ್ಷ್ಮಿ

ಬೆವರ್ಲಿ ಹಿಲ್ಸ್ ನಲ್ಲಿ ಜೋಡಿ
ನಟ ದೇವ್ ಪಟೇಲ್ ಹಾಗೂ ಫ್ರೀಡಾ ಪಿಂಟೋ ಅವರು ವಾಲ್ಲಿಸ್ ಅನ್ನೆನ್ ಬರ್ಗ್ ಸೆಂಟರ್ ಫಾರ್ ಫರ್ಫಾಮಿಂಗ್ ಆರ್ಟ್ಸ್ ಗಾಲಾ ಉದ್ಘಾಟನೆ ಗೆ ಬಂದಿದ್ದು ಹೀಗೆ

ಮಿಲನ್ ನಲ್ಲಿ ಸಾಕರ್ ಹೀರೋ
ಇಟಲಿಯ ಮಿಲನ್ ನಲ್ಲಿ ಅರ್ಜೆಂಟೀನಾದ ಫುಟ್ಬಾಲ್ ತಾರೆ ಡಿಯಾಗೋ ಅರ್ಮಾಂಡೋ ಮರಡೋನಾ ಅವರು ನಿನ್ನೆ ಕಾಣಿಸಿಕೊಂಡಿದ್ದು ಹೀಗೆ

ತಮಿಳುನಾಡಿನಲ್ಲಿ ಕಿಂಗ್ ಖಾನ್
ಶ್ರೀಪೆರಂಬದೂರು: ಬಾಲಿವುಡ್ ನಟ ಹಾಗೂ ಹ್ಯುಂಡೈ ಇಂಡಿಯಾ ಮೋಟರ್ಸ್ ರಾಯಭಾರಿ ಶಾರುಖ್ ಖಾನ್ ಅವರು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಬೊ ಶಿನ್ ಸಿಯೋ ಜತೆ 5 millionth ಕಾರಿನ ಜತೆ PTI Photo by R Senthil Kumar

ಮೈಸೂರಿನಲ್ಲಿ
ಗುರುವಾರದ ಬೆಟ್ಟದ ತಾಯಿ ಚಾಮುಂಡೇಶ್ವರಿ ರಥಯಾತ್ರೆ ಸಂಭ್ರಮ

ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರತನ್ ಘರ್ ದೇಗುಲ ಕಾಲ್ತುಳಿತ ಸಂತಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಜಲಂಧರ್ ನಲ್ಲಿ
ಜಲಂಧರ್ ನಲ್ಲಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಪ್ರತಾಪ್ ಸಿಂಗ್ ಬಾಜ್ವಾ ಅವರು ಹಿಂದೂ ಸಮಾಚಾರ್ ಸಮೂಹ ಜತೆ ಸೇರಿ ಭಗವಾನ್ ವಾಲ್ಮೀಕಿ ಶೋಭಾ ಯಾತ್ರೆ ನಡೆಸಿದರು.

ಚೆನ್ನೈನಲ್ಲಿ
ತಮಿಳುನಾಡು ಮುಖ್ಯಮಂತ್ರಿ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ಪಕ್ಷ ಸ್ಥಾಪಕ ಎಂಜಿ ರಾಮಚಂದ್ರನ್ ಅವರಿಗೆ ಹಾರ ಅರ್ಪಿಸಿದ್ದಾರೆ. ಪಕ್ಷ ಸ್ಥಾಪನೆಯಾಗಿ 42ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದೆ.












Click it and Unblock the Notifications