ಪಕ್ಷಾಂತರಿಗಳಿಗೆ ಕರ್ನಾಟಕದ ಜನ ಪಾಠ ಕಲಿಸಿದ್ದಾರೆ ಎಂದಿದ್ದೇಕೆ ಎನ್ಸಿಪಿ ನಾಯಕ ಶರದ್ ಪವಾರ್?
ನವದೆಹಲಿ, ಮೇ. 18: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಪಕ್ಷಾಂತರದ ವಿರುದ್ಧ ಪಕ್ಷದ ನಾಯಕರಿಗೆ ಬುಧವಾರ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಇತ್ತೀಚೆಗೆ ನಡೆದ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಹೀನಾಯವಾಗಿ ಸೋಲು ಕಂಡಿರುವ ಮಾಜಿ ಶಾಸಕರನ್ನು ಉದಾಹರಣೆಯಾಗಿ ತೋರಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಕರೆದಿದ್ದ ಎನ್ಸಿಪಿ ಸಭೆಯನ್ನುದ್ದೇಶಿಸಿ ಶರದ್ ಪವಾರ್ ಮಾತನಾಡಿದ್ದಾರೆ. "ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷ (ಬಿಜೆಪಿ) ಜೊತೆ ಹೋದ ಶಾಸಕರ ವಿರುದ್ಧ ಕರ್ನಾಟಕದ ಜನರು ಮತ ಹಾಕಿದ್ದಾರೆ. ಈ ಪಕ್ಷಾಂತರಿಗಳನ್ನು ಗೆಲ್ಲಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ" ಎಂದು ಶರದ್ ಪವಾರ್ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಎನ್ಸಿಪಿಯ ಒಂದು ಬಣ ಬಿಜೆಪಿಯೊಂದಿಗೆ ಕೈಜೋಡಿಸುತ್ತದೆ ಎಂಬ ವದಂತಿಗಳ ನಡುವೆ ಈ ಸಭೆ ಗಮನ ಸೆಳೆದಿದೆ. ಈ ರೀತಿಯಾಗಿ ಕರ್ನಾಟಕ ಚುನಾವಣಾ ಫಲಿತಾಂಶಗಳನ್ನು ಹೈಲೈಟ್ ಮಾಡುವ ಮೂಲಕ, ಎನ್ಸಿಪಿ ಸದಸ್ಯರಾಗಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಒಕ್ಕೂಟವನ್ನು ತ್ಯಜಿಸಿದ ಶಾಸಕರಿಗೆ ಪವಾರ್ ಸಂದೇಶವನ್ನು ರವಾನಿಸಿದ್ದಾರೆ.
"ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ- ದೇವೇಂದ್ರ ಫಡ್ನವೀಸ್ ಸರ್ಕಾರದ ವಿರುದ್ಧ ಕರ್ನಾಟಕದಂತೆಯೇ ಆಡಳಿತ ವಿರೋಧಿ ಅಲೆ ಮೇಲುಗೈ ಸಾಧಿಸಿದೆ" ಎಂದು ಎನ್ಸಿಪಿ ವಕ್ತಾರ ಮಹೇಶ್ ತಾಪಸೆ ವಿವರಿಸಿದ್ದಾರೆ. ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿರುವ ಶಿವಸೇನೆಯ ಶಾಸಕರಿಗೆ ಈ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದ್ದು, ಮುಂದೆ ಪಕ್ಷ ಬಿಟ್ಟು ಹೋಗುವವರಿಗೂ ಮುನ್ನೆಚ್ಚರಿಕೆ ನೀಡಿದ್ದಾರೆ.
ಲೋಕಸಭೆ ಚುನಾವಣೆಗೆ ಯೋಜನೆ
ಇನ್ನು, ಲೋಕಸಭೆ ಚುನಾವಣೆಗೆ ಪ್ರತಿ ಬೂತ್ ನಿರ್ವಹಿಸಲು 20 ಯುವಕರನ್ನು ನಿಯೋಜಿಸುವ ಗುರಿಯೊಂದಿಗೆ ಮಹಾರಾಷ್ಟ್ರದ ಎನ್ಸಿಪಿ ಬೂತ್ ಮಟ್ಟದ ಚುನಾವಣಾ ನಿರ್ವಹಣೆಗೆ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಮುಂದಿನ ಎರಡು ತಿಂಗಳೊಳಗೆ ಎಲ್ಲಾ ಕ್ಷೇತ್ರಗಳಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ನೇಮಿಸುವ ಜವಾಬ್ದಾರಿಯನ್ನು ಎನ್ಸಿಪಿಯ ಮಾಜಿ ಸಚಿವರನ್ನು ಜಿಲ್ಲಾ ಉಸ್ತುವಾರಿಗಳಾಗಿ ನೇಮಿಸಲಾಗಿದೆ.

ಈ ನೇಮಕಗೊಂಡ ನಾಯಕರು ತಮ್ಮ ತಮ್ಮ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ಸ್ಥಳೀಯ ಎನ್ಸಿಪಿ ನಾಯಕರು ಮತ್ತು ಪಕ್ಷದ ಅಂಗಸಂಸ್ಥೆ ನಡುವೆ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪಕ ಪ್ರವಾಸವನ್ನು ಒಳಗೊಂಡಿರುತ್ತದೆ.
ಹೆಚ್ಚುವರಿಯಾಗಿ, ಎನ್ಸಿಪಿ ತನ್ನ 24 ನೇ ಸಂಸ್ಥಾಪನಾ ದಿನಕ್ಕಾಗಿ ತಯಾರಿ ನಡೆಸುತ್ತಿದೆ. ಇದನ್ನು ಜೂನ್ 10 ರಂದು ಅಹ್ಮದ್ನಗರದಲ್ಲಿ ಅದ್ಧೂರಿ ಕಾರ್ಯಕ್ರಮದೊಂದಿಗೆ ಆಚರಿಸಲಾಗುತ್ತದೆ. ಎನ್ಸಿಪಿ ಕೋರ್ ಕಮಿಟಿ ಸಭೆಯಲ್ಲಿ ಪ್ರಫುಲ್ ಪಟೇಲ್, ವಿರೋಧ ಪಕ್ಷದ ನಾಯಕ ಅಜಿತ್ ದಾದಾ ಪವಾರ್, ರಾಜ್ಯ ಎನ್ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಮತ್ತು ಹಿರಿಯ ನಾಯಕರಾದ ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್, ಸುನೀಲ್ ತಟ್ಕರೆ, ಜಿತೇಂದ್ರ ಅವ್ಹಾದ್, ಸುಪ್ರಿಯಾ ಸುಳೆ ಮತ್ತು ಫೌಜಿಯಾ ಖಾನ್ ಉಪಸ್ಥಿತರಿದ್ದರು.












Click it and Unblock the Notifications