ಜ್ಞಾನೋದಯವಾಗಬೇಕಂದ್ರೆ ಕೇಸರಿ ಬಣ್ಣವನ್ನು ಅಪ್ಪಿಕೊಳ್ಳಿ: ಮೊಹ್ಸಿನ್ ರಾಜಾ
ಲಕ್ನೋ, ಅಕ್ಟೋಬರ್ 31: ಯಾರಿಗೆ ಜೀವನದಲ್ಲಿ ಜ್ಞಾನೋದಯವಾಗಬೇಕೆಂದಿದೆಯೋ, ಅವರೆಲ್ಲ ಕೇಸರಿ ಬಣ್ಣವನ್ನು ಅಪ್ಪಿಕೊಳ್ಳಿ ಎಂದು ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಮೊಹ್ಸಿನ್ ರಾಜಾ ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಬೆಳಕನ್ನು ತರಲು ಯತ್ನಿಸುತ್ತಿದ್ದಾರೆ. ಏಕೆಂದರೆ ವಿಪಕ್ಷಗಳು ತಮ್ಮ ಆಡಳಿತಾವಧಿಯಲ್ಲಿ ರಾಜ್ಯವನ್ನು ಕತ್ತಲಲ್ಲಿ ನೂಕಿವೆ. ಯಾರಿಗೆ ಬೆಳಕು ಅಥವಾ ಜ್ಞಾನೋದಯದ ಅಗ್ಯವಿದೆಯೋ ಅವರೆಲ್ಲ ಕೇಸರಿಯನ್ನು ಅಪ್ಪಿಕೊಳ್ಳಿ ಎಂದು ಅವರು ಹೇಳಿದ್ದಾರೆ.

ಒಮ್ಮೆ ಕೇಸರಿ ಬಣ್ಣವನ್ನು ಅಪ್ಪಿಕೊಂಡು ನೋಡಿ, ಜ್ಞಾನೋದಯವಾಗಿಯೇ ಆಗುತ್ತದೆ. ಏಕೆಂದರೆ ಕೇಸರಿ ಎಂಬುದು ಶಕ್ತಿಯ ಸಂಕೇತ. ಅದು ಬದುಕಿಗೆ ಶಕ್ತಿಯನ್ನು ನೀಡುತ್ತದೆ ಎಂದಿದ್ದಾರೆ.
ಉತ್ತರ ಪ್ರದೇಶದ ಸೆಕ್ರೇಟರಿಯೇಟ್ ಕಟ್ಟಡಕ್ಕೆ ಕೇಸರಿ ಬಣ್ಣ ಬಳಿದಿದ್ದರ ಕುರಿತು ಹಲವರು ಅಪಸ್ವರ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಮೊಹ್ಸಿನ್ ರಾಜಾ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications