ಅರವಿಂದ್ ಕೇಜ್ರಿವಾಲ್ ಅತ್ಯಾಚಾರ ಆರೋಪ ಸುದ್ದಿಯ ಪತ್ರಿಕೆ ತುಣುಕು ನಕಲಿ
ಅರವಿಂದ್ ಕೇಜ್ರಿವಾಲ್ ಐಐಟಿ ಖರಗ್ ಪುರ್ ನಲ್ಲಿ ವ್ಯಾಸಂಗ ಮಾಡುವಾಗ ಅತ್ಯಾಚಾರ ಆರೋಪದಲ್ಲಿ ಪೊಲೀಸರಿಂದ ಬಂದಿಯಾಗಿದ್ದರು ಎಂಬ ಸುದ್ದಿ, ಅದಕ್ಕೆ ಪೂರಕ ಎಂಬಂತೆ ಪತ್ರಿಕೆ ತುಣುಕು ಹರಿದಾಡುತ್ತಿದೆ. ಆ ಸುದ್ದಿ, ಪತ್ರಿಕೆ ತುಣುಕು ಎರಡೂ ನಕಲಿ.
ಬೆಂಗಳೂರು, ಡಿಸೆಂಬರ್ 24: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿ ಎಂದು ಬಿಂಬಿಸಲಾದ ನಕಲಿ ಅತ್ಯಾಚಾರ ಪ್ರಕರಣ ಸುದ್ದಿಯೊಂದು ಮತ್ತೆ ಚಲಾವಣೆಯಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಚಾಟ್ ಗುಂಪುಗಳ ಮಧ್ಯೆ ದಿನಪತ್ರಿಕೆಯೊಂದರ ತುಣುಕು ಹರಿದಾಡುತ್ತಿದೆ.
ಹತ್ತೊಂಬತ್ತು ವರ್ಷದ ಐಐಟಿ ಖರಗ್ ಪುರ್ ನ ವಿದ್ಯಾರ್ಥಿ ಅರವಿಂದ್ ಕೇಜ್ರಿವಾಲ್ ನನ್ನು ಅತ್ಯಾಚಾರ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿ ಇರುವ ಪತ್ರಿಕೆಯೊಂದರ ತುಣುಕನ್ನು ಹಬ್ಬಿಸುತ್ತಿದ್ದಾರೆ. ಅದು ದಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ಜೂನ್ 18, 1987ರಲ್ಲಿ ಪ್ರಕಟವಾಗಿದ್ದಾಗಿ ಆ ನಕಲಿ ಸುದ್ದಿ ಎಲ್ಲ ಕಡೆ ಕಂಡುಬರುತ್ತಿದೆ.[ಮೋದಿ ವಿರುದ್ಧ ಸಾಕ್ಷ್ಯವಿದ್ದರೆ ರಾಹುಲ್ ಬಯಲು ಮಾಡಿ: ಕೇಜ್ರಿವಾಲ್]

"ಪೊಲೀಸರು ಹೇಳಿದ ಪ್ರಕಾರ, ಹತ್ತೊಂಬತ್ತು ವರ್ಷದ ವಿದ್ಯಾರ್ಥಿ ಅರವಿಂದ್ ಕೇಜ್ರಿವಾಲ್ ಮತ್ತಿತರ ಸ್ನೇಹಿತರು ಶುಕ್ರವಾರ ರಾತ್ರಿ ಪಾರ್ಟಿಗಾಗಿ ತೆರಳಿದವರು ಹಾಸ್ಟೆಲ್ ಗೆ ಹಿಂತಿರುಗಲಿಲ್ಲ. ಶನಿವಾರ ಅಪರಾತ್ರಿಯಲ್ಲಿ ಅರವಿಂದ ಸ್ನೇಹಿತರು ವಾಪಸ್ ಬಂದರು. ಆದರೆ ಆತ ಭಾನುವಾರ ರಾತ್ರಿ ಹಿಂತಿರುಗಿದರು. ಈ ಮಧ್ಯೆ ಯುವತಿಯೊಬ್ಬಳು ಗೋಪಾಲ್ ನಗರ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.

ಅತ್ಯಾಚಾರ ಸಂತ್ರಸ್ತೆಯು ಆರೋಪಿ ವಿದ್ಯಾರ್ಥಿಯ ಗುರುತಿನ ಚೀಟಿಯನ್ನು ಪೊಲೀಸರಿಗೆ ನೀಡಿದ್ದಾಳೆ. ಆ ಮೂಲಕ ಐಐಟಿ ಖರಗ್ ಪುರ್ ನ ಕ್ಯಾಂಪಸ್ ನಲ್ಲಿ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ ಎಂಬುದು ಸುದ್ದಿಯ ಹೂರಣ. ಈ ಸುದ್ದಿಯ ಸಾಚಾತನದ ಬಗ್ಗೆ ವಿಚಾರಿಸಲು ಟೆಲಿಗ್ರಾಫ್ ಪತ್ರಿಕೆಯ ನೌಕರರು ಸೇರಿ ಹಲವರನ್ನು ಒನ್ಇಂಡಿಯಾ ಪ್ರಶ್ನಿಸಿತು.[ಕೇಜ್ರಿವಾಲ್ ಗೆ ಹಿನ್ನಡೆ: ಜೇಟ್ಲಿ ಮೊಕದ್ದಮೆ ತಡೆಗೆ ಸುಪ್ರೀಂ ನಕಾರ]
ಎಲ್ಲರೂ ಸ್ಪಷ್ಟಪಡಿಸಿದ್ದೆಂದರೆ, ಇದು ಸುಳ್ಳು ಸುದ್ದಿ. ಈ ತುಣುಕನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ. ಹಿರಿಯ ಪತ್ರಕರ್ತರೊಬ್ಬರು ಹೇಳುವಂತೆ, ಈ ರೀತಿ ಸುದ್ದಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಚಲಾವಣೆಗೆ ಬರುತ್ತದೆ. ಅವುಗಳ ಸಾಚಾತನ ಜನರಿಗೆ ತಿಳಿಸುವುದು ನಮ್ಮ ಜವಾಬ್ದಾರಿ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ












Click it and Unblock the Notifications