ಅರವಿಂದ್ ಕೇಜ್ರಿವಾಲ್ ಅತ್ಯಾಚಾರ ಆರೋಪ ಸುದ್ದಿಯ ಪತ್ರಿಕೆ ತುಣುಕು ನಕಲಿ
ಅರವಿಂದ್ ಕೇಜ್ರಿವಾಲ್ ಐಐಟಿ ಖರಗ್ ಪುರ್ ನಲ್ಲಿ ವ್ಯಾಸಂಗ ಮಾಡುವಾಗ ಅತ್ಯಾಚಾರ ಆರೋಪದಲ್ಲಿ ಪೊಲೀಸರಿಂದ ಬಂದಿಯಾಗಿದ್ದರು ಎಂಬ ಸುದ್ದಿ, ಅದಕ್ಕೆ ಪೂರಕ ಎಂಬಂತೆ ಪತ್ರಿಕೆ ತುಣುಕು ಹರಿದಾಡುತ್ತಿದೆ. ಆ ಸುದ್ದಿ, ಪತ್ರಿಕೆ ತುಣುಕು ಎರಡೂ ನಕಲಿ.
ಬೆಂಗಳೂರು, ಡಿಸೆಂಬರ್ 24: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿ ಎಂದು ಬಿಂಬಿಸಲಾದ ನಕಲಿ ಅತ್ಯಾಚಾರ ಪ್ರಕರಣ ಸುದ್ದಿಯೊಂದು ಮತ್ತೆ ಚಲಾವಣೆಯಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಚಾಟ್ ಗುಂಪುಗಳ ಮಧ್ಯೆ ದಿನಪತ್ರಿಕೆಯೊಂದರ ತುಣುಕು ಹರಿದಾಡುತ್ತಿದೆ.
ಹತ್ತೊಂಬತ್ತು ವರ್ಷದ ಐಐಟಿ ಖರಗ್ ಪುರ್ ನ ವಿದ್ಯಾರ್ಥಿ ಅರವಿಂದ್ ಕೇಜ್ರಿವಾಲ್ ನನ್ನು ಅತ್ಯಾಚಾರ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿ ಇರುವ ಪತ್ರಿಕೆಯೊಂದರ ತುಣುಕನ್ನು ಹಬ್ಬಿಸುತ್ತಿದ್ದಾರೆ. ಅದು ದಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ಜೂನ್ 18, 1987ರಲ್ಲಿ ಪ್ರಕಟವಾಗಿದ್ದಾಗಿ ಆ ನಕಲಿ ಸುದ್ದಿ ಎಲ್ಲ ಕಡೆ ಕಂಡುಬರುತ್ತಿದೆ.[ಮೋದಿ ವಿರುದ್ಧ ಸಾಕ್ಷ್ಯವಿದ್ದರೆ ರಾಹುಲ್ ಬಯಲು ಮಾಡಿ: ಕೇಜ್ರಿವಾಲ್]

"ಪೊಲೀಸರು ಹೇಳಿದ ಪ್ರಕಾರ, ಹತ್ತೊಂಬತ್ತು ವರ್ಷದ ವಿದ್ಯಾರ್ಥಿ ಅರವಿಂದ್ ಕೇಜ್ರಿವಾಲ್ ಮತ್ತಿತರ ಸ್ನೇಹಿತರು ಶುಕ್ರವಾರ ರಾತ್ರಿ ಪಾರ್ಟಿಗಾಗಿ ತೆರಳಿದವರು ಹಾಸ್ಟೆಲ್ ಗೆ ಹಿಂತಿರುಗಲಿಲ್ಲ. ಶನಿವಾರ ಅಪರಾತ್ರಿಯಲ್ಲಿ ಅರವಿಂದ ಸ್ನೇಹಿತರು ವಾಪಸ್ ಬಂದರು. ಆದರೆ ಆತ ಭಾನುವಾರ ರಾತ್ರಿ ಹಿಂತಿರುಗಿದರು. ಈ ಮಧ್ಯೆ ಯುವತಿಯೊಬ್ಬಳು ಗೋಪಾಲ್ ನಗರ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.

ಅತ್ಯಾಚಾರ ಸಂತ್ರಸ್ತೆಯು ಆರೋಪಿ ವಿದ್ಯಾರ್ಥಿಯ ಗುರುತಿನ ಚೀಟಿಯನ್ನು ಪೊಲೀಸರಿಗೆ ನೀಡಿದ್ದಾಳೆ. ಆ ಮೂಲಕ ಐಐಟಿ ಖರಗ್ ಪುರ್ ನ ಕ್ಯಾಂಪಸ್ ನಲ್ಲಿ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ ಎಂಬುದು ಸುದ್ದಿಯ ಹೂರಣ. ಈ ಸುದ್ದಿಯ ಸಾಚಾತನದ ಬಗ್ಗೆ ವಿಚಾರಿಸಲು ಟೆಲಿಗ್ರಾಫ್ ಪತ್ರಿಕೆಯ ನೌಕರರು ಸೇರಿ ಹಲವರನ್ನು ಒನ್ಇಂಡಿಯಾ ಪ್ರಶ್ನಿಸಿತು.[ಕೇಜ್ರಿವಾಲ್ ಗೆ ಹಿನ್ನಡೆ: ಜೇಟ್ಲಿ ಮೊಕದ್ದಮೆ ತಡೆಗೆ ಸುಪ್ರೀಂ ನಕಾರ]
ಎಲ್ಲರೂ ಸ್ಪಷ್ಟಪಡಿಸಿದ್ದೆಂದರೆ, ಇದು ಸುಳ್ಳು ಸುದ್ದಿ. ಈ ತುಣುಕನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ. ಹಿರಿಯ ಪತ್ರಕರ್ತರೊಬ್ಬರು ಹೇಳುವಂತೆ, ಈ ರೀತಿ ಸುದ್ದಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಚಲಾವಣೆಗೆ ಬರುತ್ತದೆ. ಅವುಗಳ ಸಾಚಾತನ ಜನರಿಗೆ ತಿಳಿಸುವುದು ನಮ್ಮ ಜವಾಬ್ದಾರಿ.
-
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ












Click it and Unblock the Notifications