ಗುಜರಾತ್ ಚುನಾವಣೆ: ಮೋದಿ ಮೇಲೆ ಲಷ್ಕರ್ ಉಗ್ರರ ಕಣ್ಣು
Recommended Video

ಬೆಂಗಳೂರು, ಅಕ್ಟೋಬರ್ 30: ಲಷ್ಕರ್ ಇ ತೋಯ್ಬಾದ 10 ಮಂದಿ ಉಗ್ರರ ತಂಡವು ಪಾಕ್ ಆಕ್ರಮಿತ ಕಾಶ್ಮೀರದ ಮುಝಾಫರಾಬಾದ್ ನಲ್ಲಿ ಬೀಡುಬಿಟ್ಟಿದೆ. ಗುಜರಾತ್ ಸಮುದ್ರ ತೀರದ ಮೂಲಕ ಭಾರತ ಪ್ರವೇಶಿಸಲು ಹೊಂಚು ಹಾಕುತ್ತಿದ್ದು, ಪ್ರಧಾನಿ ಮೋದಿ ಇವರ ಮುಖ್ಯ ಟಾರ್ಗೆಟ್.
ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ತೆರಳುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟಾರ್ಗೆಟ್ ಮಾಡಿಕೊಂಡಿರುವ 10 ಮಂದಿ ಉಗ್ರರ ತಂಡ ಬಗ್ಗೆ ಈ ಹಿಂದೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು.

ಪಾಕಿಸ್ತಾನದ ಮೂಲದ 70ಕ್ಕೂ ಅಧಿಕ ಬೋಟುಗಳನ್ನು ವಶಕ್ಕೆ ಪಡೆಯಲಾಗಿದ್ದು, 400ಕ್ಕೂ ಅಧಿಕ ಮೀನುಗಾರರನ್ನು ಸರಿಯಾದ ದಾಖಲೆಗಳಿಲ್ಲದ ಕಾರಣ ಬಂಧಿಸಲಾಗಿದೆ. ಪಾಕಿಸ್ತಾನವು ಅನಗತ್ಯವಾಗಿ ಹೆಚ್ಚೆಚ್ಚು ಬೋಟುಗಳನ್ನು ಈ ಕಡೆಗೆ ಬಿಡುತ್ತಿದ್ದು, ಗೊಂದಲ ಸೃಷ್ಟಿಸುವುದು ಮುಖ್ಯ ಉದ್ದೇಶವಾಗಿದೆ.
26/11 ಮುಂಬೈ ದಾಳಿ ಮಾದರಿಯಲ್ಲಿ ಗುಜರಾತ್ ನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯತ್ನಿಸಲಾಗುತ್ತಿದೆ. ಹೀಗಾಗಿ, ಉತ್ತರಪ್ರದೇಶ ಸಿಎಂ ಯೋಗಿ ಸುತ್ತಲೂ 24/7 ಗಂಟೆ ಕಾರ್ಯ ನಿರ್ವಹಿಸುವ 36 ಶಸ್ತ್ರಸಜ್ಜಿತ ಕಮಾಂಡೋಗಳ ಭದ್ರತೆ. ಝೆಡ್++ ಗುಣಮಟ್ಟದಲ್ಲಿ ಸೂಚಿಸಿದಂತೆ ವಿಶೇಷ ವಾಹನಗಳು ಸಿಎಂಗೆ ರಕ್ಷಣೆಯಾಗಿರುತ್ತವೆ.
ಪ್ರಧಾನಿ ಭದ್ರತೆಯ ಜವಾಬ್ದಾರಿ ಯನ್ನು ವಿಶೇಷ ಸುರಕ್ಷತಾ ದಳ (ಎಸ್ಪಿಜಿ)ಹೊತ್ತಿರುತ್ತದೆ .ಒಟ್ಟು 3 ಸಾವಿರ ಕಮಾಂಡೋಗಳು ಎಸ್ಪಿಜಿಯಲ್ಲಿದ್ದಾರೆ.
ಎಸ್ಪಿಜಿ ಬುಲೆಟ್ಪ್ರೂಫ್ ವಾಹನ, ಅತ್ಯಾಧುನಿಕ ಗನ್, ಸುರಕ್ಷತಾ ಪರಿಶೀಲನಾ ಸಾಧನ ಒಳಗೊಂಡಿರುತ್ತದೆ. ಬಾಂಬ್, ಉಷ್ಣತೆ ಪತ್ತೆ ಸೆನ್ಸರ್ ಒಳಗೊಂಡ ಹಾಗೂ ಸ್ಪೋಟಕ ತೀವ್ರತೆ ನಿರೋಧಕ ಲೋಹದಿಂದ ತಯಾರಿಸಲಾದ ಬುಲೆಟ್ಪ್ರೂಫ್ ಕಾರಿನಲ್ಲಿ ಪ್ರಧಾನಿ ಪ್ರಯಾಣಿಸುತ್ತಾರೆ.
ಪ್ರಧಾನಿ ಕಾರಿಗೆ ಕಮಾಂಡೋಗಳ ಸರ್ಪಗಾವಲಿರುತ್ತದೆ, ಪ್ರಧಾನಿ ಕಾರಿನ ಜತೆಯಲ್ಲೇ ಮೊಬೈಲ್ ಜ್ಯಾಮರ್ ಕೂಡ ಸಾಗುತ್ತದೆ, ದೇಶದ 14 ವಿವಿಐಪಿಗಳಿಗೆ ಎನ್ಎಸ್ಜಿ ಭದ್ರತೆ ನೀಡಲಾಗಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications