Get Updates
Get notified of breaking news, exclusive insights, and must-see stories!

Telangana Polls: ಮತದಾರರಿಗೆ ಕಾಂಗ್ರೆಸ್‌ನತ್ತ ಒಲವು?, ವಿಶ್ಲೇಷಣೆ

ಬೆಂಗಳೂರು, ನವೆಂಬರ್ 26: ತೆಲಂಗಾಣ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಸದ್ಯ ತೆಲಂಗಾಣದಲ್ಲಿ ಮತದಾರರು ಈ ಬಾರಿ ಕಾಂಗ್ರೆಸ್‌ನತ್ತ ವಾಲುವರೆ, 'ಕೈ' ನಾಯಕರ ಕೈ ಹಿಡಿಯುವರೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಏಕೆಂದರೆ ಪ್ರತ್ಯೇಕರಾಜ್ಯವಾದ ತೆಲಂಗಾಣದಲ್ಲಿ ಕಾಂಗ್ರೆಸ್‌ನ ಸೋನಿಯಾ ಗಾಂಧಿ ಪಾತ್ರ, ಪಕ್ಷದ ಆಲೋಚನೆ ಆಧಾರವಾಗಿಟ್ಟುಕೊಂಡು ಮತಯಾಚನೆ ಮಾಡಲಾಗಿತ್ತು.

ಪ್ರತಿ ಪ್ರಚಾರದಲ್ಲೂ ಅಳೆದು ತೂಗಿ ಕಾಂಗ್ರೆಸ್ ಹಿರಿಯ ನಾಯಕರು ಭಾಷಣೆ ಮಾಡಿದ್ದಾರೆ. ಸೂಕ್ಷ್ಮವಾಗಿ ಮತದಾರರನ್ನು ಕೆಣಕಿದ್ದಾರೆ ಎನ್ನಲಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಪ್ರತ್ಯೇಕ ರಾಜ್ಯ ಆಗುವಲ್ಲಿ ಕಾಂಗ್ರೆಸ್‌ ನ ಹೆಜ್ಜೆ ಗುರುತುಗಳನ್ನು ರಾಜಕೀಯ ಭಾಷಣದ ಮೂಲ ಆಧಾರವಾಗಿಟ್ಟುಕೊಳ್ಳಲಾಗಿದೆ.

Telangana Voters Will Give Power to Congress This Time, Which Played Important Role in Form of state?

ತೆಲಂಗಾಣದ ಜನರ ದೀರ್ಘಾವಧಿಯ ಆಕಾಂಕ್ಷೆಗಳನ್ನು ಪೂರೈಸಿದ್ದಕ್ಕಾಗಿ ಕೃತಜ್ಞತೆಯಾರ್ಥವಾಗಿ ಮತಗಳನ್ನು ಕೇಳಲಾಗಿದೆ. ಈ ಮೂಲಕ ಭಾವನಾತ್ಮಕವಾಗಿ ಕಾಂಗ್ರೆಸ್ ಕಲ್ಲು ಹೊಡೆದಿದೆ. ಹೀಗಾಗಿ ಈ ಬಾರಿ ಮತದಾರರು ಕಾಂಗ್ರೆಸ್‌ನತ್ತ ಒಲವು ತೋರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯ ರಚನೆಯಲ್ಲಿ ತನ್ನ ಪಾತ್ರ ನೆನಪಿಸಿದ ಕಾಂಗ್ರೆಸ್
ರಾಜ್ಯ ರಚನೆಯಲ್ಲಿ ತನ್ನ ನಿರ್ಣಾಯಕ ಪಾತ್ರವನ್ನು ಮತದಾರರಿಗೆ ನೆನಪಿಸಿದೆ. ಕಾಂಗ್ರೆಸ್‌ ಇಲ್ಲಿ ಏನೇನು ಮಾಡಲಿದೆ ಎಂಬ ಕನಸುಗಳನ್ನು ಜನರಲ್ಲಿ ಬಿತ್ತುವ ಮೂಲಕ ಗೆಲುವಿನ ಕಾರ್ಯತಂತ್ರ ರೂಪಿಸಲಾಗಿದೆ. ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ಬದ್ಧತೆಗಳನ್ನು ಅಭಿಯಾನದಲ್ಲಿ ಕೇಂದ್ರ ಬಿಂದುವಾಗಿ ಭಾಷಣ ಮಾಡಿದ್ದಾರೆ.

ತೆಲಂಗಾಣದಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುವ ಮೊದಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೆಪ್ಟೆಂಬರ್‌ನಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದರು. ಕಾಂಗ್ರೆಸ್‌ ತನನ್ನು ತೆಲಂಗಾಣಕ್ಕೆ ಸಮರ್ಪಣೆ ಮಾಡಿಕೊಂಡಿದ್ದಾಗಿ ವಿವರಿಸಿದ್ದರು. ಸೆಪ್ಟೆಂಬರ್ 17 ರಂದು ಭಾವೋದ್ರಿಕ್ತ ಭಾಷಣದಲ್ಲಿ ಅವರು ಸಮಾಜದ ಎಲ್ಲಾ ವರ್ಗಗಳಿಗೆ ಬದ್ಧವಾಗಿರುವ ಕಾಂಗ್ರೆಸ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅರಳಬೇಕು ಎಂದು ಕರೆ ನೀಡಿದ್ದರು.

Telangana Voters Will Give Power to Congress This Time, Which Played Important Role in Form of state?

ಅಭಿವೃದ್ಧಿ ಕನಸು ಸಾಕಾರಕ್ಕೆ ಬಂಬಲಿಸಲು ಮನವಿ
ತೆಲಂಗಾಣ ರಚನೆಯಲ್ಲಿ ಪಕ್ಷದ ಕಾರ್ಯ, ಪಾತ್ರದ ಸ್ಮರಿಸಿದ ಅವರು, ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ಕುರಿತು ಭಾಷಣ ಮಾಡಿದ್ದರು. ತೆಲಂಗಾಣದಲ್ಲಿ ಅಭಿವೃದ್ಧಿ ಕನಸನ್ನು ಕಾಂಗ್ರೆಸ್ ಸಾಕಾರಗೊಳಿಸಲಿದೆ. ಆದ್ದರಿಂದ ಈ ಬಾರಿ ಪಕ್ಷವನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದರು.

ಈ ಮಹಾನ್ ರಾಜ್ಯವಾದ ತೆಲಂಗಾಣದ ಭಾಗವಾಗಲು ನಮಗೆ ಅವಕಾಶವಿದೆ. ಈಗ, ರಾಜ್ಯವನ್ನು ಹೊಸ ಎತ್ತರಕ್ಕೆ ಏರಿಸುವುದು ನಮ್ಮ ಕರ್ತವ್ಯ. ನೀವು ನಮ್ಮನ್ನು ಬೆಂಬಲಿಸುತ್ತೀರಾ? ಸೋನಿಯಾ ಕೇಳಿದ್ದರು. ಅದಾದ ಮೇಲೆ ಚುನಾವಣೆ ಅಭಿಯಾನದಲ್ಲಿ ಕರ್ನಾಟಕದಲ್ಲಿ ಬಹುಮತ ಗಳಿಸಲು ಕಾರಣವಾಗಿ ಗ್ಯಾರಂಟಿ ಯೋಜನೆಗಳನ್ನು ಅಲ್ಲಿ ಸಹ ಘೋಷಿಸಿದ್ದಾರೆ. ಇದು ಸಹ ಕಾಂಗ್ರೆಸ್‌ನತ್ತ ಮತದಾರರು ಒಲವು ತೋರಲು ಕಾರಣ ಎನ್ನಲಾಗಿದೆ. ಅದೇನೆ ಇದ್ದರೂ ರಾಜ್ಯದಲ್ಲಿ ಗೆಲುವು ಯಾರ ಪಾಲಾಗಲಿದೆ ಎಂದು ಕಾಯಲು ಡಿಸೆಂಬರ್ 3ರವರೆಗೆ ಕಾಯಬೇಕಿದೆ.

ಡಿಸೆಂಬರ್ 3ಕ್ಕೆ ಪಂಚ ರಾಜ್ಯಗಳ ಫಲಿತಾಂಶ
ರಾಜಸ್ಥಾನದಲ್ಲಿ ನ.25ರಂದು ಮತದಾನ ನಡೆದಿದೆ. ಇನ್ನೂ ನವೆಂಬರ್ 30ರಂದು ತೆಲಂಗಾಣ, ಮಿಜೋರಾಂ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಮತದಾನ ನಡೆಯಲಿದೆ. ನಂತರ ಡಿಸೆಂಬರ್ 3 ರಂದು ಭಾನುವಾರ ಐದು ರಾಜ್ಯಗಳ ಫಲಿತಾಂಶ ಪ್ರಕಟಗೊಳ್ಳಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+