Get Updates
Get notified of breaking news, exclusive insights, and must-see stories!

ಸುಪ್ರೀಂ ಕೋರ್ಟ್‌ನಲ್ಲಿ ಬಲ್ವಂತ್ ಸಿಂಗ್ ಕ್ಷಮಾದಾನ ಅರ್ಜಿ; ನ.1ರಂದು ವಿಚಾರಣೆ

ನವದೆಹಲಿ, ಅಕ್ಟೋಬರ್ 11: ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಆಪಾದಿತ ಬಲ್ವಂತ್ ಸಿಂಗ್ ಕ್ಷಮಾದಾನದ ಅರ್ಜಿಯನ್ನು ನವೆಂಬರ್ 1ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಮಂಗಳವಾರ ತಿಳಿಸಿದೆ.

ಕಳೆದ 26 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಲ್ವಂತ್ ಸಿಂಗ್ ಕ್ಷಮಾದಾನದ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್, ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಲಿದೆ.

ಆಪಾದಿತ ಬಲ್ವಂತ್ ಸಿಂಗ್ ಪರ ವಾದ ಮಂಡಿಸಲಿರುವ ಹಿರಿಯ ವಕೀಲ ಮುಕುಲ್ ರೋಹಟಗಿ, ತಮ್ಮ ಕಕ್ಷಿದಾರನ ಜೀವಾವಧಿ ಶಿಕ್ಷೆಯನ್ನು ತಗ್ಗಿಸುವಂತೆ ವಾದಿಸಲಿದ್ದಾರೆ. "ನನ್ನ ಕಕ್ಷಿದಾರರು 26 ವರ್ಷಗಳಿಂದ ಜೈಲಿನಲ್ಲಿದ್ದು, ಕೇಂದ್ರ ಗೃಹ ಸಚಿವಾಲಯದ ಅಫಿಡವಿಟ್ ಕ್ಷಮಾಪಣೆಯಾಗಿದೆ. ನಾನು ಅವರ ಆದೇಶವನ್ನು ಅವಲಂಬಿಸಲು ಬಯಸುವುದಿಲ್ಲ. ನನ್ನನ್ನು ಮರಣದಂಡನೆಗೆ ಒಳಪಡಿಸುವ ಮೂಲಕ ಆರ್ಟಿಕಲ್ 21ರ ಅಡಿಯಲ್ಲಿ ನನ್ನ ಬದುಕುವ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ. ಈ ಪೂರ್ವನಿದರ್ಶನಗಳ ಆಧಾರದ ಮೇಲೆ ನಾನು ವಸ್ತುನಿಷ್ಠ ಪ್ರಕರಣವನ್ನು ಮಾಡುತ್ತಿದ್ದೇನೆ," ಎಂದು ವಾದಿಸಿದ್ದಾರೆ.

ಬಲ್ವಂತ್ ಸಿಂಗ್ ಮೇಲ್ಮನವಿ ಅರ್ಜಿ ಬಗ್ಗೆ ಉಲ್ಲೇಖ

ಬಲ್ವಂತ್ ಸಿಂಗ್ ಮೇಲ್ಮನವಿ ಅರ್ಜಿ ಬಗ್ಗೆ ಉಲ್ಲೇಖ

ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಬಲ್ವಂತ್ ಸಿಂಗ್ ಜೊತೆಗಿನ ಸಹ ಆರೋಪಿಗಳು ಸಲ್ಲಿಸಿದ ಮೇಲ್ಮನವಿ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಈ ಮೇಲ್ಮನವಿ ಅರ್ಜಿಯೊಂದಿಗೆ ಬಲ್ವಂತ್ ಸಿಂಗ್ ತಮ್ಮ ಶಿಕ್ಷೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿಲ್ಲ. ಆದ್ದರಿಂದ ಅವರ ಮನವಿಯನ್ನು ಪರಿಗಣಿಸಬಹುದು ಎಂದು ಸಿಜೆಐ ಲಲಿತ್ ಸೂಚಿಸಿದರು. ಒಂದು ವೇಳೆ ಸಹ ಆರೋಪಿಗಳು ಖುಲಾಸೆಗೊಂಡರೆ ಅದು ರಾಷ್ಟ್ರಪತಿಗಳ ಪರಿಗಣನೆಗೆ ಒಂದು ಅಂಶವಾಗಬಹುದು ಎಂದು ಸಿಜೆಐ ಹೇಳಿದರು.

ಮೇಲ್ಮನವಿ ಬಗ್ಗೆ ಸಿಜೆಐ ಹೇಳಿದ್ದೇನು?

ಮೇಲ್ಮನವಿ ಬಗ್ಗೆ ಸಿಜೆಐ ಹೇಳಿದ್ದೇನು?

"ನಾವು ಮರಣದಂಡನೆ ಶಿಕ್ಷೆಗೆ ಒಳಗಾದ ವ್ಯಕ್ತಿಯನ್ನು ಖುಲಾಸೆಗೊಳಿಸುತ್ತೇವೆ ಎಂದು ಭಾವಿಸೋಣ. ಆಗ ರಾಷ್ಟ್ರಪತಿಗಳು ನಿಮಗೆ ಸಂಪೂರ್ಣ ಕ್ಷಮೆಯನ್ನು ನೀಡಬಹುದು. ಇತರ ಕೆಲವು ಪ್ರಕರಣಗಳಲ್ಲಿ ಈ ನ್ಯಾಯಾಲಯವು ಮೇಲ್ಮನವಿ ಸಲ್ಲಿಸದಿದ್ದರೂ ಸಹ ಖುಲಾಸೆಯನ್ನು ನೀಡಿದೆ. ಅದನ್ನು ನೋಡಲು ಎರಡು ಶಿಕ್ಷೆ ವಿಧಿಸುವುದು ಅಥವಾ ಪ್ರಮಾಣವನ್ನು ತಗ್ಗಿಸುವ ಎರಡು ಮಾರ್ಗಗಳಿವೆ. ಆದರೆ ಸಹ-ಆರೋಪಿಯ ಪ್ರಕರಣವು ನಮ್ಮ ಮುಂದೆ ಬಾಕಿ ಉಳಿದಿದೆ. ನಾವು ಎರಡನ್ನೂ ಪಟ್ಟಿ ಮಾಡಬಹುದು. ನಿಮ್ಮ ವಿಷಯದಲ್ಲಿ ಮರಣದಂಡನೆ ಅನ್ನು ತಗ್ಗಿಸಲಿ ಎಂದು ಹೇಳುವ ಮೂಲಕ ನಿಮ್ಮ ಸಹ-ಆರೋಪಿಗಳ ಮೇಲ್ಮನವಿಯು ವಸ್ತುನಿಷ್ಠವಾಗಿದೆಯೇ," ಎಂದು ಸಿಜೆಐ ಲಲಿತ್ ಹೇಳಿದರು.

ನಾನೇ ಬೇರೆ ನನ್ನ ಮೇಲ್ಮನವಿಯೇ ಬೇರೆ ಎಂದು ವಾದ ಮಂಡನೆ!

ನಾನೇ ಬೇರೆ ನನ್ನ ಮೇಲ್ಮನವಿಯೇ ಬೇರೆ ಎಂದು ವಾದ ಮಂಡನೆ!

ತಮ್ಮ ಕಕ್ಷಿದಾರನು ಮರಣ ದಂಡನೆ ಬದಲಿಗೆ ಜೀವಾವಧಿ ಶಿಕ್ಷೆಗೆ ಅರ್ಹರು ಎಂದು ವಾದಿಸಲು ಹಿರಿಯ ವಕೀಲ ರೋಹಟಗಿ ಬಯಸಿದ್ದಾರೆ. ಸಹ-ಆರೋಪಿಗಳ ಮೇಲ್ಮನವಿ ಜೊತೆ ತಾವು ಸೇರುವುದಕ್ಕೆ ಬಯಸುವುದಿಲ್ಲ ಎಂದು ಪುನರುಚ್ಚರಿಸಿದರು.

"ನಾನು ಯಾರೊಂದಿಗೂ ಬೆರೆಯಲು ಬಯಸುವುದಿಲ್ಲ, ನಾನು ಜನವರಿ 1996 ರಿಂದ ಜೈಲಿನಲ್ಲಿ ಇದ್ದೇನೆ. ನನ್ನ ಕ್ಷಮಾದಾನ ಅರ್ಜಿಯನ್ನು 2012ರಲ್ಲಿ ಸಲ್ಲಿಸಲಾಗಿದೆ. ಈಗ 2022 ಆಗಿದ್ದು, 10 ವರ್ಷಗಳೇ ಕಳೆದಿವೆ. ನಾನು 2007 ರಿಂದ 2012 ರವರೆಗೆ ಮರಣದಂಡನೆಯಲ್ಲಿ ಇದ್ದೇನೆ. ಅವರನ್ನು ಬೇಡಿಕೊಳ್ಳಲು ಬಯಸುವುದಿಲ್ಲ. ಈ ಅಫಿಡವಿಟ್‌ನಲ್ಲಿ ಬರೆದಿರುವ ಕಾಗದಕ್ಕೆ ಏನೂ ಬೆಲೆಯಿಲ್ಲ. ನೀವು ಇಂದು ಅಥವಾ ನಾಳೆ ನನ್ನ ಪ್ರಕರಣವನ್ನು ಆಲಿಸಬಹುದು ಮತ್ತು ಅದನ್ನು ಮುಗಿಸಬಹುದು," ಎಂದು ಉಲ್ಲೇಖಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಏನಿದೆ?

ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಏನಿದೆ?

ಕಳೆದ ಏಪ್ರಿಲ್ 30ರಂದು ಸಲ್ಲಿಸಿದ ಅಫಿಡವಿಟ್‌ನಲ್ಲಿ ಎರಡು ಪ್ರಾಥಮಿಕ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಆ ಪ್ರಕಾರ, ಮೊದಲನೆಯದಾಗಿ ಕ್ಷಮಾದಾನ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ, ಏಕೆಂದರೆ ಅದು ಬೇರೆ ಸಂಸ್ಥೆಯಿಂದ ಸಲ್ಲಿಸಲ್ಪಟ್ಟಿದೆ ಮತ್ತು ಅಪರಾಧಿ ಸ್ವತಃ ಸಲ್ಲಿಸಿದ್ದಲ್ಲ. ಎರಡನೆಯದ್ದಾಗಿ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ಇತರ ಅಪರಾಧಿಗಳು ಸಲ್ಲಿಸಿದ ಮೇಲ್ಮನವಿಗಳು ವಿಲೇವಾರಿಯಾಗದವರೆಗೆ ಕ್ಷಮಾದಾನ ಅರ್ಜಿಯನ್ನು ನಿರ್ಧರಿಸಲಾಗುವುದಿಲ್ಲ.

ಮುಖ್ಯಮಂತ್ರಿ ಬಿಯಾಂತ್ ಸಿಂಗ್‌ ಹತ್ಯೆ ಪ್ರಕರಣದಲ್ಲಿ ಆಪಾದಿತ ಬಲ್ವಂತ್ ಸಿಂಗ್ ರಾಜೋನಾ ಸಲ್ಲಿಸಿದ ಕ್ಷಮಾದಾನ ಅರ್ಜಿಯನ್ನು 2 ತಿಂಗಳಿನಲ್ಲಿ ಅಂತಿಮಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಈ ಪ್ರಕರಣದಲ್ಲಿ ಸಹ-ಆರೋಪಿಗಳ ಮೇಲ್ಮನವಿಯಂತೆ ಯಾವುದೇ ಕಾರಣಕ್ಕೂ ಬಾಕಿ ಉಳಿಸಿಕೊಳ್ಳುವಂತಿಲ್ಲ ಎಂದು ಕೋರ್ಟ್ ಹೇಳಿತ್ತು. ಈ ಹಿನ್ನೆಲೆ ನವೆಂಬರ್ 1ರಂದು ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ.

ಬಲ್ವಂತ್ ಸಿಂಗ್ ಕ್ಷಮಾದಾನ ಅರ್ಜಿ ಹಿಂದಿನ ಕಥೆ

ಬಲ್ವಂತ್ ಸಿಂಗ್ ಕ್ಷಮಾದಾನ ಅರ್ಜಿ ಹಿಂದಿನ ಕಥೆ

ಆಪಾದಿತ ಬಲ್ವಂತ್ ಸಿಂಗ್ ಮತ್ತು ಸಹ ಆರೋಪಿ ಜಗತಾರ್ ಸಿಂಗ್ ಅನ್ನು ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 302/307/120-B ಮತ್ತು ಸ್ಫೋಟಕ ವಸ್ತುಗಳ ಕಾಯಿದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಯಿತು. ಈ ಸಂಬಂಧ ದೋಷಾರೋಪಣೆ ದಾಖಲಿಸಿದ ನಂತರ, ವಿಚಾರಣಾ ನ್ಯಾಯಾಲಯವು ಬಲ್ವಂತ್ ಸಿಂಗ್ ಮತ್ತು ಸಹ ಆರೋಪಿ ಜಗತಾರ್ ಸಿಂಗ್ ಹವಾರಾಗೆ ಮರಣದಂಡನೆ ವಿಧಿಸಿತು. ಇದರ ಬೆನ್ನಲ್ಲೇ 2010ರ ಡಿಸೆಂಬರ್ 12ರಂದು ಸಹ ಆರೋಪಿಯ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಬದಲಿಸಿತು.

ಈ ಹಂತದಲ್ಲಿ ಬಲ್ವಂತ್ ಸಿಂಗ್ ಮರಣದಂಡನೆಯನ್ನು ಪ್ರಶ್ನಿಸಿರಲಿಲ್ಲ, ವಿಚಾರಣಾ ನ್ಯಾಯಾಲಯದ ತೀರ್ಪಿನ ಬಗ್ಗೆ ಯಾವುದೇ ಮೇಲ್ಮನವಿಯನ್ನೂ ಸಲ್ಲಿಸಿರಲಿಲ್ಲ. ಹೀಗಾಗಿ ಬಲ್ವಂತ್ ಸಿಂಗ್ ವಿಚಾರದಲ್ಲಿ ಕೋರ್ಟ್ ನೀಡಿದ ಶಿಕ್ಷೆಯನ್ನು ಆದೇಶದಲ್ಲಿ ದೃಢಪಡಿಸಿತು. ಡಿಸೆಂಬರ್ 12, 2010ರಂದು ಹೈಕೋರ್ಟ್‌ನ ತೀರ್ಪು ಉನ್ನತ ನ್ಯಾಯಾಲಯದ ಮುಂದೆ ಬಾಕಿ ಉಳಿದಿರುವಾಗ ಗೃಹ ವ್ಯವಹಾರಗಳ ಸಚಿವಾಲಯವು 2019ರ ಸೆಪ್ಟೆಂಬರ್ 27ರಂದು ಪತ್ರವನ್ನು ಬರೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+