Get Updates
Get notified of breaking news, exclusive insights, and must-see stories!

Delhi Air Pollutin: ದೆಹಲಿ ನೆರೆಯ ರಾಜ್ಯಗಳಿಗೆ ಸುಪ್ರೀಂಕೋರ್ಟ್ ತರಾಟೆ

ದೆಹಲಿಯಲ್ಲಿ ವಾಯುಮಾಲಿನ್ಯ ಸಮಸ್ಯೆ ರಾಜಕೀಯ ಹೋರಾಟಕ್ಕೆ ಬಳಕೆಯಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಉಸಿರುಗಟ್ಟಿಸುವ ಗಾಳಿಯ ಗುಣಮಟ್ಟವು ಜನರ ಆರೋಗ್ಯವನ್ನು ಹಾಳು ಮಾಡಲು ಕಾರಣವಾಗಿದೆ ಎಂದು ಒತ್ತಿ ಹೇಳಿದೆ.

ನೆರೆಯ ರಾಜ್ಯಗಳಾದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಬೆಳೆಗಳ ಅವಶೇಷಗಳನ್ನು ಸುಡುವುದು ಪ್ರತಿ ಚಳಿಗಾಲದಲ್ಲಿ ದೆಹಲಿಯ ವಾಯುಮಾಲಿನ್ಯದಲ್ಲಿ ಭಾರಿ ಏರಿಕೆಗೆ ಪ್ರಮುಖ ಅಂಶವಾಗಿದೆ ಎಂದು ನ್ಯಾಯಾಲಯ ಹೇಳಿದೆ.

Supreme Court Issues Directive to States on Delhis Air Crisis: Its Your Responsibility

ಹುಲ್ಲು ಸುಡುವುದನ್ನು ತಡೆಯಲು ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಒತ್ತಾಯಿಸಿದೆ. "ತಕ್ಷಣವೇ ಹುಲ್ಲು ಸುಡುವುದನ್ನು ನಿಲ್ಲಿಸಬೇಕು, ಹೇಗೆ ಮಾಡುತ್ತೀರಾ ಎಂದು ನಮಗೆ ಗೊತ್ತಿಲ್ಲ, ಅದು ನಿಮ್ಮ ಕೆಲಸ ಆದರೆ, ಅದನ್ನು ನಿಲ್ಲಸಬೇಕು" ಎಂದು ನ್ಯಾಯಾಲಯವು ಪಂಜಾಬ್ ಸರ್ಕಾರದ ವಕೀಲರಿಗೆ ಹೇಳಿದೆ.

ದೆಹಲಿ ಸರ್ಕಾರದ ವಿರುದ್ಧವೂ ಚಾಟಿ

ದೆಹಲಿ ಸರ್ಕಾರವನ್ನೂ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. "ದೆಹಲಿ ಸರ್ಕಾರವೂ ಜವಾಬ್ದಾರರಾಗಿರಬೇಕು. ಅನೇಕ ಬಸ್ಸುಗಳು ಹೆಚ್ಚಿನ ಹೊಗೆ ಬಿಡುಗಡೆ ಮಾಡುತ್ತಿವೆ ಮತ್ತು ಅರ್ಧದಷ್ಟು ಸಾಮರ್ಥ್ಯದಲ್ಲಿ ಓಡುತ್ತಿವೆ. ನೀವು ಸಮಸ್ಯೆ ಬಗೆಹರಿಸಲು ಗಮನ ಕೊಡಬೇಕು" ಎಂದು ಹೇಳಿದೆ.

ನ್ಯಾಯಮೂರ್ತಿ ಎಸ್‌ಕೆ ಕೌಲ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠವು ಶುಕ್ರವಾರಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿತು. ಹುಲ್ಲು ಸುಡುವುದನ್ನು ತಡೆಯುವ ಮಾರ್ಗಗಳ ಕುರಿತು ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್ ಮತ್ತು ದೆಹಲಿ ಸರ್ಕಾರಗಳೊಂದಿಗೆ ಸಭೆ ನಡೆಸುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರಾದ ಅಪರಾಜಿತಾ ಸಿಂಗ್, ಪಂಜಾಬ್‌ನಲ್ಲಿನ ಫಾರ್ಮ್ ಬೆಂಕಿಯನ್ನು ಪರಿಶೀಲಿಸಲಾಗಿಲ್ಲ. ದೆಹಲಿಯ ಗಾಳಿಯ ಗುಣಮಟ್ಟ ಕಡಿಮೆಯಾಗಲು ಮುಖ್ಯ ಕಾರಣ ಕೃಷಿ ಹುಲ್ಲು ಸುಡುವುದಾಗಿದೆ ಎಂದು ಹೇಳಿದರು.

ವಾಯು ಗುಣಮಟ್ಟ ನಿರ್ವಹಣೆಗಾಗಿ ಆಯೋಗ ಮತ್ತು ರಾಜ್ಯಗಳು ವಾಯು ಮಾಲಿನ್ಯವನ್ನು ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಹೇಳುತ್ತಿವೆ. ಆದರೆ ಇನ್ನೂ ಹುಲ್ಲನ್ನು ಕೃಷಿ ಭೂಮಿಯಲ್ಲಿ ಸುಡಲಾಗುತ್ತಿದೆ ಎಂದು ಹೇಳಿದರು.

ಸಂಕಷ್ಟಕ್ಕೆ ಸಿಲುಕಿದ ಎಎಪಿ

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ್, 2017ರಿಂದ ಈ ಕುರಿತು ವಿಚಾರಣೆ ನಡೆಯುತ್ತಿದ್ದು, ಹಲವು ಆದೇಶಗಳನ್ನು ಹೊರಡಿಸಲಾಗಿದೆ ಎಂದರು.

ದೆಹಲಿಯ ವಾಯುಮಾಲಿನ್ಯದ ಮಟ್ಟದಲ್ಲಿ ವಾರ್ಷಿಕ ಹೆಚ್ಚಳ ಮತ್ತು ಅದರ ಹಿಂದೆ ಹುಲ್ಲು ಸುಡುವ ಪಾತ್ರವು ಕಳೆದ ಕೆಲವು ವರ್ಷಗಳಿಂದ ರಾಜಕೀಯ ವಿಚಾರವಾಗಿದೆ. ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವು ಈ ಹಿಂದೆ ಪಂಜಾಬ್ ಮತ್ತು ಹರಿಯಾಣದಲ್ಲಿನ ಪ್ರತಿಸ್ಪರ್ಧಿಗಳ ಸರ್ಕಾರಗಳು ಬೆಳೆ ಅವಶೇಷಗಳನ್ನು ಸುಡುವುದನ್ನು ತಡೆಯುತ್ತಿಲ್ಲ ಎಂದು ಆರೋಪಿಸಿದೆ.

ಈ ಬಾರಿ ದೆಹಲಿ ಮತ್ತು ಪಂಜಾಬ್‌ನಲ್ಲಿ ಎಎಪಿ ಅಧಿಕಾರದಲ್ಲಿದ್ದು, ಪಂಜಾಬ್‌ನಲ್ಲಿ ಹುಲ್ಲು ಸುಡುವ ಪ್ರಮಾಣ ಕಡಿಮೆಯಾಗಿದ್ದು, ಬಿಜೆಪಿ ಆಡಳಿತವಿರುವ ಹರಿಯಾಣದ ಮೇಲೆ ಆರೋಪ ಹೊರಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+