ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ಗೆ ಸುಪ್ರೀಂ ಕೋರ್ಟ್ ಜಾಮೀನು: ಹೈಕೋರ್ಟ್ ಆದೇಶ ರದ್ದು
ನವದೆಹಲಿ, ಜುಲೈ. 19: 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ತಿಂಗಳ ಆರಂಭದಲ್ಲಿ ಗುಜರಾತ್ ಹೈಕೋರ್ಟ್ "ತಕ್ಷಣ ಶರಣಾಗಬೇಕು" ಎಂದು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಆದೇಶಿಸಿತ್ತು. ಈ ಆದೇಶವನ್ನು ಬುಧವಾರ ಸುಪ್ರೀಂ ಕೋರ್ಟ್ ರದ್ದು ಮಾಡಿದ್ದು, ತೀಸ್ತಾ ಸೆಟಲ್ವಾಡ್ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಗುಜರಾತ್ ಗಲಭೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದ ಮೇಲೆ ತನಿಖೆಯ ಮಧ್ಯೆ ನಿಯಮಿತ ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿತ್ತು. ಜೊತೆಗೆ ತೀಸ್ತಾ ಸೆಟಲ್ವಾಡ್ ತಕ್ಷಣ ಶರಣಾಗಬೇಕು ಎಂದಿತ್ತು. ಈ ಆದೇಶವನ್ನು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಎಎಸ್ ಬೋಪಣ್ಣ ಮತ್ತು ದೀಪಂಕರ್ ದತ್ತಾ ಅವರು ತಳ್ಳಿಹಾಕಿದ್ದಾರೆ.

ನ್ಯಾಯಾಲಯವು ತನ್ನ ವಿಚಾರಣೆಯಲ್ಲಿ ತೀಸ್ತಾ ಸೆಟಲ್ವಾಡ್ ವಿರುದ್ಧ ಚಾರ್ಜ್ ಶೀಟ್ ಅನ್ನು ಸಲ್ಲಿಸಲಾಗಿದೆ ಎಂದು ಗಮನಿಸಿದ್ದು, ಕಸ್ಟಡಿ ವಿಚಾರಣೆಯ ಅಗತ್ಯವನ್ನು ತೆಗೆದುಕಿದೆ. ಆದರೂ, ಪ್ರಸ್ತುತ ಪ್ರಕರಣದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಬಿಆರ್ ಗವಾಯಿ ಅವರು ತೀಸ್ತಾ ಸೆಟಲ್ವಾಡ್ ಅವರ ಬಂಧನದ ಉದ್ದೇಶಗಳು ಮತ್ತು ಸಮಯವನ್ನು ಪ್ರಶ್ನಿಸಿದ್ದಾರೆ. "2022 ರವರೆಗೆ ನೀವು ಏನು ಮಾಡುತ್ತಿದ್ದೀರಿ..? ಜೂನ್ 24 ಮತ್ತು ಜೂನ್ 25 ರಿಂದ ನೀವು ಯಾವ ತನಿಖೆಯನ್ನು ಮಾಡಿದ್ದೀರಿ, ಆಕೆಯನ್ನು ಬಂಧಿಸಲು ವಾರೆಂಟ್ ನೀಡುವಷ್ಟು ಗಂಭೀರ ಕೆಲಸ ಮಾಡಿದ್ದಾರೆ ಎಂದು ನೀವು ನಿರ್ಧರಿಸಿದ್ದೀರಿ..?" ಎಂದು ಪ್ರಶ್ನಿಸಿದ್ದಾರೆ.

"ನಿಮ್ಮ ವಾದವನ್ನು ಅಂಗೀಕರಿಸಬೇಕಾದರೆ ಸಾಕ್ಷ್ಯ ಕಾಯ್ದೆಯ ವ್ಯಾಖ್ಯಾನವನ್ನು ಕಸದ ಬುಟ್ಟಿಗೆ ಎಸೆಯಬೇಕಾಗುತ್ತದೆ ಎಂದು ಪ್ರಾಸಿಕ್ಯೂಟರ್ಗೆ ನ್ಯಾಯಾಲಯ ಎಚ್ಚರಿಕೆ ನೀಡಿದೆ. ತೀರ್ಪು ಪ್ರಕಟವಾಗುವವರೆಗೆ ಯಾರನ್ನಾದರೂ ಬಂಧನದಲ್ಲಿಡುವ ಉದ್ದೇಶವನ್ನೇ ನ್ಯಾಯಾಲಯ ಟೀಕಿಸಿದೆ.
"ಆರಂಭದಲ್ಲಿ, ಇದು 194 ರ ಅಡಿಯಲ್ಲಿ ಪ್ರಕರಣವಿದೆ ಎಂದು ನಾವು ಭಾವಿಸಿದ್ದೇವು. ಈಗ ನಾವು ಸೆಕ್ಷನ್ 194 ರ ಅಡಿಯಲ್ಲಿ ಪ್ರಕರಣವು ಸಂಶಯಾಸ್ಪದವಾಗಿದೆ ಎಂದು ಅನ್ನಿಸುತ್ತಿದೆ. ತೀರ್ಪು ಪ್ರಕಟವಾಗುವವರೆಗೆ ಯಾರಾದರೂ ವಿಚಾರಣೆಗೆ ಒಳಪಟ್ಟು ಕಸ್ಟಡಿಯಲ್ಲಿರಬೇಕೆಂದು ನೀವು ಹೇಗೆ ಬಯಸುತ್ತೀರಿ" ಎಂದು ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ.

ತೀಸ್ತಾ ಸೆಟಲ್ವಾಡ್ ಅವರ ಕಾನೂನು ಹೋರಾಟಗಳು ಕಳೆದ ವರ್ಷ ಪ್ರಾರಂಭವಾದವು. 2022ರ ಜೂನ್ನಲ್ಲಿ ಗುಜರಾತ್ನ ಮಾಜಿ ಪೊಲೀಸ್ ಮುಖ್ಯಸ್ಥ ಆರ್ಬಿ ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರೊಂದಿಗೆ ಆಕೆಯ ನಿಕಟ ಸಂಬಂಧ ಮತ್ತು ಗಲಭೆ ಸಂತ್ರಸ್ತರನ್ನು ಬಳಸಿಕೊಂಡು ಅಂದಿನ ಮುಖ್ಯಮಂತ್ರಿಗೆ ಕಳಂಕ ತರುವ ಉದ್ದೇಶದಿಂದ ಸುಳ್ಳು ಅಫಿಡವಿಟ್ಗಳನ್ನು ಸಲ್ಲಿಸಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.
ಸುಪ್ರೀಂ ಕೋರ್ಟ್ ಜುಲೈ 1 ರಿಂದ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧನದಿಂದ ರಕ್ಷಿಸಿದೆ. ಹೈಕೋರ್ಟ್ ಆದೇಶವನ್ನು ತಡೆಹಿಡಿಯಿದೆ. ಪ್ರಕರಣದ ಅರ್ಹತೆಯ ಬಗ್ಗೆ ಪ್ರತಿಕ್ರಿಯಿಸದೆ ನ್ಯಾಯಾಲಯವು ತಡೆ ನೀಡಿತು ಆದರೆ ತೀಸ್ತಾ ಸೆಟಲ್ವಾಡ್ಗೆ ಯಾವುದೇ ರಕ್ಷಣೆಯನ್ನು ನಿರಾಕರಿಸುವಲ್ಲಿ ನ್ಯಾಯಾಧೀಶರು ಸರಿಯಾಗಿಲ್ಲ ಎಂದು ಒತ್ತಿಹೇಳಿದ್ದರು.
ಗಲಭೆ ನಡೆದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದರು. ಆಗಿನ ಗುಜರಾತ್ ಆಡಳಿತದ ತೀವ್ರ ಟೀಕಾಕಾರರಾಗಿದ್ದ ತೀಸ್ತಾ ಸೆಟಲ್ವಾಡ್ ಅವರು ಸುಪ್ರೀಂ ಕೋರ್ಟ್ನಿಂದ ಮಧ್ಯಂತರ ಜಾಮೀನು ಪಡೆದ ನಂತರ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು.












Click it and Unblock the Notifications