ಸ್ಟಾರ್ಟಪ್ ಶ್ರೇಯಾಂಕ: ಕರ್ನಾಟಕ ಟಾಪ್ ಪರ್ಫಾರ್ಮೆನ್ಸ್
ನವದೆಹಲಿ, ಸೆಪ್ಟೆಂಬರ್ 11: ಕೇಂದ್ರ ಸರ್ಕಾರವು ತನ್ನ ರಾಜ್ಯವಾರು ಸ್ಟಾರ್ಟ್ ಅಪ್ ಶ್ರೇಯಾಂಕದ ಎರಡನೆಯ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಟಾಪ್ ಪರ್ಫಾರ್ಮರ್ಸ್ ಪಟ್ಟಿಯಲ್ಲಿ ಕರ್ನಾಟಕ ಸ್ಥಾನ ಪಡೆದುಕೊಂಡಿದೆ.
ರಾಜ್ಯಗಳಲ್ಲಿನ ಉದ್ಯಮಶೀಲತಾ ಪರಿಸರವನ್ನು ಉತ್ತೇಜಿಸುವ ಸಲುವಾಗಿ ನರೇಂದ್ರ ಮೋದಿ ಸರ್ಕಾರ ಸ್ಟಾರ್ಟ್ಅಪ್ ಶ್ರೇಯಾಂಕ ನೀಡುವ ಪದ್ಧತಿಯನ್ನು ಆರಂಭಿಸಿತ್ತು. ರಾಜ್ಯ ಮಟ್ಟದಲ್ಲಿ ಆವಿಷ್ಕಾರ ಹಾಗೂ ಉದ್ಯಮಶೀಲತೆಯನ್ನು ಬೆಂಬಲಿಸಲು ಸಾಮರ್ಥ್ಯ ವೃದ್ಧಿಯ ಉದ್ದೇಶ ಇದರ ಹಿಂದಿದೆ.
ಕೈಗಾರಿಕೆಗಳ ಅಭಿವೃದ್ಧಿ ಮತ್ತು ಆಂತರಿಕ ವ್ಯಾಪಾರ ಇಲಾಖೆ (ಡಿಪಿಐಐಟಿ) ಶುಕ್ರವಾರ ಈ ಪಟ್ಟಿ ಬಿಡುಗಡೆ ಮಾಡಿದೆ. 22 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು ಇದರಲ್ಲಿ ಪಾಲ್ಗೊಂಡಿದ್ದವು. ರಾಜ್ಯಗಳು ತಮ್ಮಲ್ಲಿನ ಆವಿಷ್ಕಾರಗಳನ್ನು ಹೇಗೆ ಸುಧಾರಿಸಿಕೊಳ್ಳಬಹುದು ಎಂಬುದಕ್ಕೆ ವರದಿಯೊಂದನ್ನು ಕೂಡ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಮುಂದೆ ಓದಿ.

2019ರ ರಾಜ್ಯವಾರು ಸ್ಟಾರ್ಟ್ಅಪ್ ಶ್ರೇಯಾಂಕದ ಪಟ್ಟಿ
* ಬೆಸ್ಟ್ ಪರ್ಫಾರ್ಮರ್ಸ್: ಗುಜರಾತ್ (ರಾಜ್ಯ), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಕೇಂದ್ರಾಡಳಿತ ಪ್ರದೇಶ)
* ಟಾಪ್ ಪರ್ಫಾರ್ಮರ್ಸ್: ಕರ್ನಾಟಕ ಮತ್ತು ಕೇರಳ.
* ಲೀಡರ್ಸ್: ಬಿಹಾರ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಚಂಡೀಗಡ.
* ಮಹತ್ವಾಕಾಂಕ್ಷಿ ಲೀಡರ್ಸ್: ಹರಿಯಾಣ, ಜಾರ್ಖಂಡ್, ಪಂಜಾಬ್, ತೆಲಂಗಾಣ, ಉತ್ತರಾಖಂಡ.
* ಉದಯೋನ್ಮುಖ ಸ್ಟಾರ್ಟಪ್ ಪರಿಸರ ವ್ಯವಸ್ಥೆ: ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸಗಡ, ದೆಹಲಿ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಸಿಕ್ಕಿಂ, ತಮಿಳುನಾಡು, ಉತ್ತರ ಪ್ರದೇಶ.

ಸುಧಾರಣಾ ವಲಯದ ನಾಯಕರು
ವಿವಿಧ ಸುಧಾರಣಾ ವಲಯಗಳಲ್ಲಿನ ನಾಯಕರ ಪಟ್ಟಿಯಲ್ಲಿ ಕರ್ನಾಟಕ, ಕೇರಳ ಹಾಗೂ ಒಡಿಶಾ ರಾಜ್ಯಗಳು ಸಾಂಸ್ಥಿಕ ನಾಯಕರಾಗಿ ಹೊರಹೊಮ್ಮಿವೆ. ಹಾಗೆಯೇ ರೆಗ್ಯುಲೇಟರಿ ಚೇಂಜ್ ಚಾಂಪಿಯನ್ಸ್ನಲ್ಲಿಯೂ ಕರ್ನಾಟಕ ಸ್ಥಾನ ಪಡೆದಿದ್ದು, ಕೇರಳ, ಒಡಿಶಾ, ಉತ್ತರಾಖಂಡ ಈ ಗೌರವ ಪಡೆದಿವೆ.

ಗಳಿಕೆ ನಾಯಕರು
ಕರ್ನಾಟಕ
ಕೇರಳ
ತೆಲಂಗಾಣ
* ಹೊರಹೊಮ್ಮುತ್ತಿರುವ ಕೇಂದ್ರಗಳು
ಗುಜರಾತ್
ಕರ್ನಾಟಕ
ಕೇರಳ

ಜಾಗೃತಿ ಮತ್ತು ವಿಸ್ತರಣೆಯ ಚಾಂಪಿಯನ್ಗಳು
ಗುಜರಾತ್
ಮಹಾರಾಷ್ಟ್ರ
ರಾಜಸ್ಥಾನ
*ಆವಿಷ್ಕಾರ ಬಿತ್ತನೆಯ ನಾಯಕರು
ಬಿಹಾರ
ಕೇರಳ
ಮಹಾರಾಷ್ಟ್ರ
* ಆವಿಷ್ಕಾರ ಪ್ರಮಾಣದ ನಾಯಕರು
ಗುಜರಾತ್
ಕೇರಳ
ಮಹಾರಾಷ್ಟ್ರ
ರಾಜಸ್ಥಾನ
-
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು












Click it and Unblock the Notifications